ಆ್ಯಪ್ನಗರ

ರೈತರು ಪಿಜ್ಜಾ ತಿನ್ನಲ್ಲ ಎಂದು ನಿಮ್ಮಪ್ಪನಿಗೆ ಅಗ್ರಿಮೆಂಟ್‌ ಮಾಡಿಕೊಟ್ಟಿದ್ರಾ: ಮುನಿಸ್ವಾಮಿ ಹೇಳಿಕೆಗೆ ಕೋಡಿಹಳ್ಳಿ ಆಕ್ರೋಶ

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಸಂಸದ ಮುನಿಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರೈತರ ಮಕ್ಕಳು ಮಸಾಲೆ ದೋಸೆ ತಿನ್ನಬಾರದು ಎಂದು ನಿಮ್ಮ ಅಪ್ಪನವರಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 16 Jan 2021, 4:45 pm
ಕೋಲಾರ: ರೈತರ ಮನೆಗಳನ್ನು ಹಾಳು ಮಾಡಲೆಂದೇ ನೂತನ ಕೃಷಿ ಕಾಯ್ದೆಗಳನ್ನ ಜಾರಿ ಮಾಡಲಾಗಿದೆ. ಇವರಿಗೇನ್ ತಲೆ ಬುಡ ಇದಿಯಾ. ಇದು ರೈತ ವಿರೋಧಿ ಸರ್ಕಾರ. ಇದಕ್ಕೆ ರೈತರ ಸಂಪೂರ್ಣ ವಿರೋಧವಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Kodihalli Chandrasekhar


ಇತ್ತೀಚೆಷ್ಟೇ ಸಂಸದ ಮುನಿಸ್ವಾಮಿ ಅವರು ಹೋರಾಟನಿರತ ರೈತರ ಕುರಿತು ನೀಡಿದ್ದ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್‌ ತಿರುಗೇಟು ನೀಡಿದ್ದಾರೆ. ದೆಹಲಿ ಹೋರಾಟಗಾರರು ಪಿಜ್ಜಾ ಬರ್ಗರ್ ತಿನ್ನುವವರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರಾಗಿ ಮುದ್ದೆ ತಿನ್ನುವವರು ಒಂದು ದಿನ ಬೆಂಗಳೂರಿಗೆ ಹೋದಾಗ ಮಸಾಲೆ ದೋಸೆ ತಿನ್ನುತ್ತಾರೆ. ರೈತರ ಮಕ್ಕಳು ಮಸಾಲೆ ದೋಸೆ ತಿನ್ನಬಾರದು ಎಂದು ನಿಮ್ಮ ಅಪ್ಪನವರಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯಿದೆ ವಿಷಯದಲ್ಲಿ ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು: ಕೋಡಿಹಳ್ಳಿ ಚಂದ್ರಶೇಕರ್

ಮೋದಿ ಹೇಳಿದ ವಿದೇಶಿ ಹಣ ತರುವುದು, ಜಿಎಸ್ ಟಿ, ಗಂಗಾನದಿ ಶುದ್ದೀಕರಣ ಯಾವುದು ಜಾರಿಯಾಗಿಲ್ಲ. ಆದರೆ, ಕೃಷಿ ಕಾಯ್ದೆಗಳು, ಜಾನುವಾರು ಕಾಯ್ದೆಗಳಿಗೆ ಬಿಜೆಪಿ ನಾಯಕರು ಜೈ ಎನ್ನುತ್ತಿದ್ದಾರೆ. ಸರ್ಕಾರದ ಖರ್ಚಿನಲ್ಲಿ ಕಾರ್ಯಕ್ರಮ ಮಾಡಿ ಸರ್ಕಾರವೇ ಸರಿ ಎನ್ನುತ್ತಿದ್ದಾರೆ. ಬಿಜೆಪಿ ಅಂದರೆ ಮೋದಿ ಅಭಿಮಾನಿ ಸಂಘ ಅಷ್ಟೇ. ಕಾಯ್ದೆ ಜಾರಿ ಮಾಡಿದ್ರೆ ಈ ದೇಶದಲ್ಲಿ ಸಿವಿಲ್ ವಾರ್ ಶುರುವಾಗುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ ನೀಡಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್‌ ಆಸ್ತಿ ತನಿಖೆಗೆ ರೇಣುಕಾಚಾರ್ಯ ಒತ್ತಾಯ

ಗೋ ಹತ್ಯೆ ನಿಷೇಧ ಕಾಯ್ದೆ ಅಶೋಕ, ಔರಂಗಜೇಬನ ಕಾಲದಲ್ಲೂ ಇತ್ತು. ಹಾಲು ಹಾಗೂ ಗೂವುಗಳ ಕಡಿಮೆಯಾದಾಗ 1964-67ರಲ್ಲಿ ನೆಹರು ಕೂಡ ನಿಷೇಧ ಮಾಡಿದ್ದರು. ಆದರೀಗ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ