ಆ್ಯಪ್ನಗರ

ರಾತ್ರಿ ಮಲಗಿದ್ದ ವೃದ್ಧ ದಂಪತಿ ಬೆಳಗ್ಗೆ ಏಳಲಿಲ್ಲ: ಸಾವಿನಲ್ಲೂ ಒಂದಾದ 'ಜನುಮದ ಜೋಡಿ'

55 ವರ್ಷಗಳ ದಾಂಪತ್ಯ ಬದುಕಿನಲ್ಲಿ ಸಣ್ಣ-ಪುಟ್ಟ ವಿರಸಗಳನ್ನು ಹೊರತುಪಡಿಸಿ ಕೃಷ್ಣಪ್ಪ-ಜಯಮ್ಮ ದಂಪತಿ ಅನ್ಯೋನ್ಯವಾಗಿ ಜೀವಿಸಿದ್ದರು. ವೃದ್ದ ದಂಪತಿಗಳಿಬ್ಬರು ಹೊಲದ ಕೆಲಸ ಸೇರಿದಂತೆ ಪ್ರತಿಯೊಂದಕ್ಕೂ ಜತೆಯಾಗಿಯೇ ಹೋಗುತ್ತಿದ್ದರು.

Vijaya Karnataka Web 30 Dec 2019, 7:22 pm
ಕೋಲಾರ: ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ, ಕೋಲಾರದ ಪೇಟೆಚಾಮನಹಳ್ಳಿಯಲ್ಲಿ ನಡೆಗಿದೆ. 80 ವರ್ಷ ವಯಸ್ಸಿನ ಕೃಷ್ಣಪ್ಪ ಹಾಗೂ 68 ವರ್ಷ ವಯಸ್ಸಿನ ಜಯಮ್ಮ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ.
Vijaya Karnataka Web klr couple
ರಾತ್ರಿ ಮಲಗಿದ್ದ ವೃದ್ಧ ದಂಪತಿ ಬೆಳಗ್ಗೆ ಏಳಲಿಲ್ಲ: ಸಾವಿನಲ್ಲೂ ಒಂದಾದ 'ಜನುಮದ ಜೋಡಿ'


ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಭಾನುವಾರದಂದೂ ಕೋಲಾರದಲ್ಲಿ ಆಸ್ಪತ್ರೆಗೆ ಹೋಗಿ ಬಂದಿದ್ದರು. ಸೋಮವಾರ ಬೆಳಗ್ಗೆ ಬೆಂಗಳೂರಿನ ಆಸ್ಪತ್ರೆಗೆ ಹೋಗಬೇಕಿತ್ತು. ಹೀಗಾಗಿ, ಬೆಳಗ್ಗೆ 5 ಗಂಟೆ ಸಮಯದಲ್ಲಿ ಎಚ್ಚರಿಸಲು ಮಕ್ಕಳು ಪ್ರಯತ್ನಿಸಿದರು. ಆದ್ರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಜಯಮ್ಮ ಅವರಿಗೆ ಈ ವಿಷಯ ತಿಳಿಸಲು ಹೋದರೆ ಅವರೂ ಸಹ ಮೃತಪಟ್ಟಿದ್ದರು.

ವೈರಲ್ ವಿಡಿಯೋ: 60 ದಾಟಿದರೇನು? ಪ್ರೀತಿಗೆ ಬರವಿಲ್ಲ..! ವೃದ್ಧಾಶ್ರಮದಲ್ಲೇ ನಡೆಯಿತು ಪ್ರೇಮ ವಿವಾಹ..!

55 ವರ್ಷಗಳ ದಾಂಪತ್ಯ ಬದುಕಿನಲ್ಲಿ ಸಣ್ಣ-ಪುಟ್ಟ ವಿರಸಗಳನ್ನು ಹೊರತುಪಡಿಸಿ ಕೃಷ್ಣಪ್ಪ-ಜಯಮ್ಮ ದಂಪತಿ ಅನ್ಯೋನ್ಯವಾಗಿ ಜೀವಿಸಿದ್ದರು. ವೃದ್ದ ದಂಪತಿಗಳಿಬ್ಬರು ಹೊಲದ ಕೆಲಸ ಸೇರಿದಂತೆ ಪ್ರತಿಯೊಂದಕ್ಕೂ ಜತೆಯಾಗಿಯೇ ಹೋಗುತ್ತಿದ್ದರು. ಮಕ್ಕಳು-ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಜತೆಗೆ ಹಾಯಾಗಿಯೇ ಇದ್ದರು.

ಅನಾರೋಗ್ಯ, ಖಿನ್ನತೆಯಿಂದ ವೃದ್ಧ ದಂಪತಿ ಆತ್ಮಹತ್ಯೆ

ದಂಪತಿಗೆ ಏಳು ಮಕ್ಕಳಿದ್ದಾರೆ. ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ಜತೆ ವೃದ್ದ ದಂಪತಿ ಸುದೀರ್ಘವಾದ ಬದುಕು ನಡೆಸಿದ್ದಾರೆ. ವಯೋಸಹಜವಾದ ಕಾಯಿಲೆಗಳಿತ್ತಾದರೂ ದೀರ್ಘಕಾಲದ ರೋಗಗಳಿಂದ ಇಬ್ಬರೂ ಹಾಸಿಗೆ ಹಿಡಿದಿರಲಿಲ್ಲ.
ಸೋಮವಾರ ಬೆಳಗ್ಗೆ ಎಂದಿನಿಂದ ಎಚ್ಚರ ಮಾಡಲು ಬಂದ ಮನೆಯವರಿಗೆ ಇಬ್ಬರೂ ಜೀವ ಬಿಟ್ಟಿರೋದು ಗಮನಕ್ಕೆ ಬಂದಿದೆ. ಒಟ್ಟಾರೆ ದಂಪತಿಗಳಿಬ್ಬರೂ ರಾತ್ರಿ ಎಲ್ಲರೊಟ್ಟಿಗೆ ಊಟ ಮಾಡಿದವರು ಬೆಳಗಾಗುವಷ್ಟರಲ್ಲಿ ಒಟ್ಟಿಗೆ ಜೀವನಯಾತ್ರೆ ಮುಗಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ತಮಿಳುನಾಡಿನ ಈ ಅಜ್ಜ-ಅಜ್ಜಿಯ ಧೈರ್ಯ ಸಾಹಸ ನೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ