ಆ್ಯಪ್ನಗರ

ಕೊಂಡಶೆಟ್ಟಹಳ್ಳಿ ಗ್ರಾಮಸ್ಥರಿಗೂ ತಟ್ಟಿದ ಐ.ಎಂ.ಎ ಸಂಸ್ಥೆಯ ವಂಚನೆ?

ಟೇಕಲ್‌ನ ಕೊಂಡಶೆಟ್ಟಹಳ್ಳಿ ಗ್ರಾಮಕ್ಕೂ ಬೆಂಗಳೂರಿನ ಐ.ಎಂ.ಎ ಸಂಸ್ಥೆಗೂ ನಂಟಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಬಗಗೆ ಸ್ವತಃ ಗ್ರಾಮದವರೊಬ್ಬರು ಮಾತನಾಡಿ ಸುಮಾರು 100ಕ್ಕೂ ಹೆಚ್ಚು ಮಂದಿ ಚಿನ್ನಕ್ಕೆ ಹೂಡಿಕೆ ಮಾಡಿರುವುದಾಗಿ ಹೇಳಿದ್ದು ಸುಮಾರು 5 ಕೋಟಿಯಷ್ಟು ಹಣವನ್ನು ಸಂಸ್ಥೆಯಲ್ಲಿ ಹೂಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

Vijaya Karnataka 13 Jun 2019, 5:00 am
ಟೇಕಲ್‌: ಟೇಕಲ್‌ನ ಕೊಂಡಶೆಟ್ಟಹಳ್ಳಿ ಗ್ರಾಮಕ್ಕೂ ಬೆಂಗಳೂರಿನ ಐ.ಎಂ.ಎ ಸಂಸ್ಥೆಗೂ ನಂಟಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಬಗಗೆ ಸ್ವತಃ ಗ್ರಾಮದವರೊಬ್ಬರು ಮಾತನಾಡಿ ಸುಮಾರು 100ಕ್ಕೂ ಹೆಚ್ಚು ಮಂದಿ ಚಿನ್ನಕ್ಕೆ ಹೂಡಿಕೆ ಮಾಡಿರುವುದಾಗಿ ಹೇಳಿದ್ದು ಸುಮಾರು 5 ಕೋಟಿಯಷ್ಟು ಹಣವನ್ನು ಸಂಸ್ಥೆಯಲ್ಲಿ ಹೂಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
Vijaya Karnataka Web kondashettyhalli villagers alaso cheated in ima fraud case
ಕೊಂಡಶೆಟ್ಟಹಳ್ಳಿ ಗ್ರಾಮಸ್ಥರಿಗೂ ತಟ್ಟಿದ ಐ.ಎಂ.ಎ ಸಂಸ್ಥೆಯ ವಂಚನೆ?


ಕೊಂಡಶೆಟ್ಟಹಳ್ಳಿ ಗ್ರಾಮದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಶಕೀಲ್‌ ಕುಟುಂಬದ ಒಟ್ಟು ಮೊತ್ತ 27 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು ತಮ್ಮ, ಅಣ್ಣ, ಅಕ್ಕ, ನಾದಿನಿ ಈ ರೀತಿ ಎಲ್ಲರೂ ಹಣ ಹೂಡಿದ್ದಾರೆಂದು ಶಕೀಲ್‌ ತಿಳಿಸಿದರು. ಗ್ರಾಮದ ರಿಯಾಜ್‌, ಅಪ್ಸರ್‌, ಜಾವಿದ್‌, ಸುಹೇಲ್‌ ಇನ್ನೂ ಅನೇಕ ಮಂದಿ ಐಎಂಎನಲ್ಲಿ ಹಣ ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಇದರಲ್ಲಿ ಕೆಲವರು ಮಾತ್ರ ಬೆಂಗಳೂರಿನ ಶಿವಾಜಿನಗರದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಇನ್ನೂ ಕೆಲವರು ಸರಕಾರ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಕಾದು ನೋಡಿ ನಂತರ ತಾವು ಕೂಡ ದೂರು ನೀಡುವುದಾಗಿ ತಿಳಿಸಿದ್ದಾರೆ.

ಮಾಲೂರು ತಾಲೂಕಿನ ಮಾಸ್ತಿ, ಸೀತನಾಯಕನಹಳ್ಳಿ ಗ್ರಾಮಗಳಲ್ಲೂ ಕೆಲವು ಮುಸ್ಲೀಂ ಕುಟುಂಬಗಳು ಐಎಂಎ ಜುವೆಲರಿಯಲ್ಲಿ ಹಣ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ.

ಸೌದಿಯಲ್ಲಿರುವವರು ಹೂಡಿಕೆ: ಕೊಂಡಶೆಟ್ಟಹಳ್ಳಿ ಗ್ರಾಮದ ಕೆಲವು ಮುಸ್ಲಿಂ ಕುಟುಂಬ ಸೌದಿನಲ್ಲಿ ನೆಲೆಸಿದ್ದು ಅವರು ಕೂಡ ಐ.ಎಂ.ಎ ಸಂಸ್ಥೆಯಲ್ಲಿ ಹಣ ಹೂಡಿದ್ದಾರೆಂದು ತಿಳಿದು ಬಂದಿದೆ ಈ ಬಗ್ಗೆ ಅವರಿಗೂ ಗ್ರಾಮದಿಂದ ಮಾಹಿತಿ ಹೋಗಿದ್ದು ಅವರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಂಡಶೆಟ್ಟಹಳ್ಳಿ ಗ್ರಾಮದವರು ಅನಿಸಿಕೆ ಪ್ರಕಾರ ರಂಜಾನ್‌ ಹಬ್ಬದಂದೆ ಈ ಬಗ್ಗೆ ನಮಗೆ ಅನುಮಾನ ಬಂದಿದ್ದಾಗಿ ಆ ತಿಂಗಳುನಲ್ಲಿ ನಾವೆಲ್ಲರು ಉಪವಾಸವಿದ್ದರಿಂದ ಮಾಹಿತಿ ಸರಿಯಾಗಿ ಸಿಗಲಿಲ್ಲ ನಾವೆಲ್ಲರೂ ಕಷ್ಟ ಬಿದ್ದು ದಿನವಹಿ ದುಡಿದು ಕಟ್ಟಿರುವ ಹಣ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲಿ, ಸರ್ಕಾರವಾಗಲಿ ಮಧ್ಯಸ್ಥಿಕೆ ವಹಿಸಿ ಐಎಂಎ ಮಾಲೀಕನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಾವು ಕಟ್ಟಿರುವ ಹಣವನ್ನು ನಮಗೆ ಒದಗಿಸಬೇಕೆಂದು ಗ್ರಾಮದ ಶಕೀಲ್‌, ರಿಯಾಜ್‌, ಜಾವಿದ್‌, ಸಾಧಿಕ್‌ ಮನವಿಯಾಗಿದೆ.

ಈ ಬಗ್ಗೆ ಇನ್ನೂ ತನಿಖೆಯಾದರೆ ಇನ್ನೂ ಎಷ್ಟೋ ಮಂದಿಗೆ ಇದರಲ್ಲಿ ವಂಚಿತರಾಗಿರುವುದು ಬೆಳಕಿಗೆ ಬರಬಹುದೆಂದು ಸಾರ್ವಜನಿಕರ ಅನಿಸಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ