ಆ್ಯಪ್ನಗರ

ಮಸೀದಿಯೊಳಗೆ ಕಾಲಿಟ್ಟ ಮಹಿಳಾ ತಹಶೀಲ್ದಾರ್‌: ನಮಾಜ್‌ ಮಾಡುತ್ತಿದ್ದ 11 ಮಂದಿ ವಶ

ಹೆಚ್ಚಾಗಿ ಸ್ಥಳೀಯರೇ ಮಸೀದಿಯಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾವರಿಷ್ಠಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ತಹಶೀಲ್ದಾರ್‌ ತಿಳಿಸಿದರು.

Vijaya Karnataka Web 1 May 2020, 1:23 pm
ಕೋಲಾರ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿ ನಮಾಜ್‌ ಮಾಡುತ್ತಿದ್ದವರನ್ನು ಮಹಿಳಾ ತಹಶೀಲ್ದಾರ್‌ ಶೋಭಿತಾ ಪೊಲೀಸರಿಗೆ ಒಪ್ಪಿಸಿ ದಿಟ್ಟತನ ತೋರಿದ್ದಾರೆ.
Vijaya Karnataka Web ನಮಾಜ್
ನಮಾಜ್


ನಗರದ ಮುನಿಸಿಪಲ್‌ ಆಸ್ಪತ್ರೆಯ ಸಮೀಪದ ಬಾಬಾ ಕಿ ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿರು ತಹಶೀಲ್ದಾರ್‌ ಶೋಭಿತಾ. ಮಸೀದಿಯೊಳಗೆ ನುಗ್ಗಿದ ತಹಶೀಲ್ದಾರ್‌ ತಮ್ಮ ಕರ್ತವ್ಯವನ್ನು ನಿಭಾಯಿಸಿದರು.

ಮಸೀದಿಯಲ್ಲಿಸುಮಾರು 11 ಮಂದಿ ನಮಾಜ್‌ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್‌ ಶೋಭಿತಾ ಭೇಟಿ ನೀಡಿ ಪರಿಶೀಲನೆ ಪೋಲೀಸರಿಗೆ ಒಪ್ಪಿಸಿದರು.

ಕೊರೊನಾ ಲಾಲ್‌ಡೌನ್‌ ಆದೇಶ ಜಾರಿಯಲ್ಲಿದ್ದು ಯಾವುದೇ ಸಭೆ ಸಮಾರಂಭ, ನಮಾಜ್‌ ಮಾಡಬಾರದು ಎಂದು ಆದೇಶಿಸಲಾಗಿತ್ತು. ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದರೂ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ನಮಾಜ್‌ ಮಾಡುತ್ತಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ದೂರು ನೀಡಿದರು.

ಇದರನ್ವಯ ತಹಶೀಲ್ದಾರ್‌ ಶೋಭಿತಾ ಪೋಲೀಸರೊಂದಿಗೆ ತೆರಳಿ ನಮಾಜ್‌ ಮಾಡುತ್ತಿದ್ದ 11 ಜನರನ್ನು ಪೋಲೀಸರಿಗೆ ಒಪ್ಪಿಸಿದರು.

ಈ ಸಂದರ್ಭದಲ್ಲಿಸುದ್ದಿಗಾರೊಂದಿಗೆ ಮಾತನಾಡಿದ ತಹಶೀಲ್ದಾರ್‌, ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ಹೇರಿದ್ದರೂ ನಗರದ 11 ಮಂದಿ ನಮಾಜ್‌ ಮಾಡಿ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಕೋಲಾರ ನಗರ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚಾಗಿ ಸ್ಥಳೀಯರೇ ಮಸೀದಿಯಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾವರಿಷ್ಠಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಘಟನೆ ಸಂಬಂಧ ನಮಾಜ್‌ ಮಾಡುತ್ತಿದ್ದ 10 ಜನರ ಮೇಲೆ ಕೋಲಾರ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ