ಆ್ಯಪ್ನಗರ

ತಾಲೂಕಿಗೊಂದು ಕೆರೆ ಅಭಿವೃದ್ಧಿ

ನಮ್ಮ ಹಿರಿಯರು ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಈಗಿನ ದಿನಮಾನದಲ್ಲಿ ಸರಕಾರ ಹಾಗೂ ಜನಸಾಮಾನ್ಯರು ಕೆರೆಯ ಸಂರಕ್ಷ ಣೆಯ ಬಗ್ಗೆ ನಿರ್ಲಕ್ಷ ್ಯ ತೋರಿರುವುದರಿಂದ ಎಲ್ಲಾ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರಿನ ಸಂಗ್ರಹಣೆ ಆಗುತ್ತಿಲ್ಲ. ಆದ್ದರಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯದ ಪ್ರತಿಯೊಂದು ತಾಲೂಕಿಗೆ ವರ್ಷಕ್ಕೆ ಒಂದರಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.

Vijaya Karnataka 8 Jun 2019, 5:00 am
ಮುಳಬಾಗಲು: ನಮ್ಮ ಹಿರಿಯರು ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಈಗಿನ ದಿನಮಾನದಲ್ಲಿ ಸರಕಾರ ಹಾಗೂ ಜನಸಾಮಾನ್ಯರು ಕೆರೆಯ ಸಂರಕ್ಷ ಣೆಯ ಬಗ್ಗೆ ನಿರ್ಲಕ್ಷ ್ಯ ತೋರಿರುವುದರಿಂದ ಎಲ್ಲಾ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರಿನ ಸಂಗ್ರಹಣೆ ಆಗುತ್ತಿಲ್ಲ. ಆದ್ದರಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯದ ಪ್ರತಿಯೊಂದು ತಾಲೂಕಿಗೆ ವರ್ಷಕ್ಕೆ ಒಂದರಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.
Vijaya Karnataka Web lake development from each taluk
ತಾಲೂಕಿಗೊಂದು ಕೆರೆ ಅಭಿವೃದ್ಧಿ


ಮುಳಬಾಗಿಲು ತಾಲೂಕಿನಲ್ಲಿ ಈಗಾಗಲೇ 2017-18ನೇ ಸಾಲಿನಲ್ಲಿ ಬಂಡಾರಹಳ್ಳಿ ಗ್ರಾಮದ ನೀಲುವರಾತಿ ಕೆರೆ 18 ಲಕ್ಷ ರೂ.ಗಳಲ್ಲಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗಿದೆ. 2018-19ನೇ ಸಾಲಿನಲ್ಲಿ ಕುರುಡುಮಲೆ ಗ್ರಾಮದ ಬೈರೇಗೌಡನ ಕೆರೆ 7 1/2 ಲಕ್ಷ ದಲ್ಲಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗಿದೆ. 2019-20ನೇ ಸಾಲಿನಲ್ಲಿ ಬಾಳಸಂದ್ರ ಗ್ರಾಮದ 'ಹೊಸಕೆರೆ'ಯನ್ನು ಕೆರೆ ಪುನಶ್ಚೇತನಕ್ಕೆ ಆಯ್ಕೆ ಮಾಡಿಕೊಂಡಿದ್ದು 2019ರ ಮೇ 26ರಂದು ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌.ಜೆ. ಅವರಿಂದ ಭೂಮಿಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಸುಮಾರು 19.38 ಗುಂಟೆ ವಿಸ್ತೀರ್ಣ ಹೊಂದಿದ್ದು, ಈ ಕೆರೆ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 12.32 ಲಕ್ಷ ಅನುದಾನ ಮಂಜೂರಾಗಿರುತ್ತದೆ. ಗ್ರಾಮದ ಹಲವಾರು ರೈತರು ಪಾಳು ಬಿದ್ದಿರುವ ಕೃಷಿ ಮಾಡಲು ಯೋಗ್ಯವಿಲ್ಲದ ಜಮೀನು ಹೊಂದಿದ್ದು ಹೂಳೆತ್ತುತ್ತಿರುವ ಮಣ್ಣನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಿ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ಸಾವಿರಾರು ರೂಪಾಯಿಗಳು ಉಳಿತಾಯವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ