ಆ್ಯಪ್ನಗರ

ಕೆಸಿ ವ್ಯಾಲಿ ನೀರು ಯೋಜನೆಗೆ ಶಾಸಕ ಚಾಲನೆ

ರಾಜ್ಯ ಸರಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಕೆ.ಸಿ.ವ್ಯಾಲಿ ಯೋಜನೆಯ ಅಡಿಯಲ್ಲಿ 1300 ಕೋಟಿರೂಗಳನ್ನು ವಿನಿಯೋಗಿಸಿ ರಾಜ್ಯ ಸರಕಾರ ಪ್ರಸ್ತುತ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅನುಮತಿ ನೀಡಿರುವುದು ತಾಲ್ಲೂಕಿನ ಜನತೆಗೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Vijaya Karnataka 16 Jul 2019, 3:51 pm
ಮಾಲೂರು : ರಾಜ್ಯ ಸರಕಾರ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಕೆ.ಸಿ.ವ್ಯಾಲಿ ಯೋಜನೆಯ ಅಡಿಯಲ್ಲಿ 1300 ಕೋಟಿರೂಗಳನ್ನು ವಿನಿಯೋಗಿಸಿ ರಾಜ್ಯ ಸರಕಾರ ಪ್ರಸ್ತುತ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅನುಮತಿ ನೀಡಿರುವುದು ತಾಲ್ಲೂಕಿನ ಜನತೆಗೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
Vijaya Karnataka Web legislative drive for kc valley water project
ಕೆಸಿ ವ್ಯಾಲಿ ನೀರು ಯೋಜನೆಗೆ ಶಾಸಕ ಚಾಲನೆ


ತಾಲೂಕಿನ 27 ಕೆರೆಗಳಿಗೆ ಕೆಸಿ ವ್ಯಾಲಿ ನೀರುಹರಿಸುವ ಯೋಜನೆಗೆ ನರಸಾಪುರ ಕೆರೆಯ ಜಾಕ್‌ ವೇಲ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.

ಕೋರಮಂಗಲ ಛಲ್ಲಘಟ್ಟ ಬಳಿಯಿಂದ ಕೊಳಚೆ ನೀರನ್ನು ಶುದ್ಧೀಕರಿಸಿ ಪೈಪ್‌ಲೈನ್‌ ಮೂಲಕ ಲಕ್ಷ್ಮೀಸಾಗರ ಕೆರೆಗೆ ನೀರು ಹರಿಸಲಾಗಿತ್ತು. ಲಕ್ಷ್ಮೀಸಾಗರ ಕೆರೆಯಿಂದ ನರಸಾಪುರ ಕೆರೆಗೆ ನೀರು ಹರಿಸಿ ತಾಲೂಕಿನ 27 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮೊದಲ ಹಂತದಲ್ಲಿ ಸೋಮವಾರ 40 ಎಂಎಲ್‌ಡಿ ನೀರು ಹರಿಸುವ ಕಾರ‍್ಯಕ್ಕೆ ಚಾಲನೆ ನೀಡಲಾಗಿದೆ. ನರಸಾಪುರ ಕೆರೆಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರಬೇಕಾಗಿದ್ದು ಮುಂದಿನ ದಿನಗಳಲ್ಲಿ ಉಳಿದ 60 ಎಂಎಲ್‌ಡಿ ನೀರನ್ನು ನಿರಂತರವಾಗಿ ಪಂಪ್‌ ಮಾಡುವ ಕ್ರಮ ಅನುಷ್ಠಾನವಾಗಲಿದೆ ಎಂದರು.

ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಲ್ಲಿ ಮನವಿ ಮಾಡಿದ್ದು ಅದರಂತೆ ಒಂದು ವಾರದಲ್ಲಿ ನೀರು ಹರಿಸುವ ಕಾರ‍್ಯಕ್ಕೆ ಚಾಲನೆ ನೀಡುವ ವಿಶ್ವಾಸ ವ್ಯಕ್ತ ಪಡಿಸಿದ್ದರು. ಅದರಂತೆ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಫೀಡರ್‌ ಚಾನಲ್‌ ಮೂಲಕ ಪಂಪ್‌ ಮಾಡಲು ಅನುಮತಿ ನೀಡಿದೆ ಎಂದರು.

ಇದರಿಂದ ತಾಲೂಕಿನ ಶಿವಾರಪಟ್ಟಣದ ಕೆರೆಗೆ ಹೊಂದಿಕೊಂಡಿರುವ ದೊಡ್ಡಅಯ್ಯೂರು ಕೆರೆಗೆ ನೀರು ಹರಿದು ಬಂದು ನಂತರ ರಾಜಕಾಲುವೆಯ ಮೂಲಕ ಶಿವಾರಪಟ್ಟಣದ ಕೆರೆಗೆ ಹರಿದು ಬರಲಿದೆ ಎಂದರು. ಇಲ್ಲಿಂದ ಬಾವನಹಳ್ಳಿ ಕೆರೆಗೆ ಪಂಪ್‌ ಮಾಡಿ ತಾಲೂಕಿನ ತಂಬಿಹಳ್ಳಿ ಅಬ್ಬೇನಹಳ್ಳಿ, ಹಾರೋಹಳ್ಳಿ, ಮಾಲೂರು ಕೆರೆಗೆ ನೀರು ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ರಾದ ಸಿ.ರಾಜಣ್ಣ, ಟಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನರಾಯಪ್ಪ, ಪುರಸಭಾ ಸದಸ್ಯರಾದ ಪರಮೇಶ್‌, ಮಂಜುನಾಥ್‌, ಇಂತಿಯಾಜ್‌, ಮಾಜಿ ಸದಸ್ಯರಾದ ಅಶ್ವತ್ಥರೆಡ್ಡಿ, ಮಧುಸೂದನ್‌, ಮುಖಂಡರಾದ ಅಂಜನಿ ಸೊಮಣ್ಣ, ಲಿಂಗಾಪುರ ಕಿಟ್ಟಿ, ನಾರಾಯಣಸ್ವಾಮಿ, ನವೀನ್‌, ನಾರಾಯಣಸ್ವಾಮಿ, ಬಿ.ಆರ್‌.ಶ್ರೀನಿವಾಸ್‌, ಕರಿಯಣ್ಣ, ಹರೀಶ್‌, ಕೆ.ರಾಘವೇಂದ್ರ, ಶಬೀರ್‌, ಎಂ.ಪಿ.ಮಂಜು, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ