ಆ್ಯಪ್ನಗರ

ಟೇಕಲ್‌ನಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ 4ನೇ ಚಿರತೆ

ಬಹಳ ದಿನಗಳಿಂದ ಕೋಲಾರ ಟೇಕಲ್‌ ರಸ್ತೆ ಮಾರ್ಗ ಮಧ್ಯೆದಲ್ಲಿ ಕರಡಗುರ್ಕಿಯ ಆಸುಪಾಸಿನಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ನಸುಕಿನಲ್ಲಿ ಬಿದ್ದಿದ್ದು 6 ವರ್ಷದ ಗಂಡು ಚಿರತೆಯಾಗಿದೆ.

Vijaya Karnataka 16 Feb 2019, 4:02 pm
ಟೇಕಲ್‌: ಬಹಳ ದಿನಗಳಿಂದ ಕೋಲಾರ ಟೇಕಲ್‌ ರಸ್ತೆ ಮಾರ್ಗ ಮಧ್ಯೆದಲ್ಲಿ ಕರಡಗುರ್ಕಿಯ ಆಸುಪಾಸಿನಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ನಸುಕಿನಲ್ಲಿ ಬಿದ್ದಿದ್ದು 6 ವರ್ಷದ ಗಂಡು ಚಿರತೆಯಾಗಿದೆ.
Vijaya Karnataka Web leopard captured in tekal
ಟೇಕಲ್‌ನಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ 4ನೇ ಚಿರತೆ


ಸುಮಾರು ದಿನಗಳಿಂದ ಟೇಕಲ್‌ ಸುತ್ತಮುತ್ತಲಿನ ಬೆಟ್ಟದ ತಪ್ಪಲಿನಲ್ಲಿ ಚಿರತೆ ಓಡಾಟ ಹೆಚ್ಚಾಗಿತ್ತು. ಹಾಗೂ ಕೆ.ಜಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕರಡಗುರ್ಕಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿಯೂ ಈ ಹಿಂದೆ ಎರಡು ಚಿರತೆಗಳು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಕೊಟ್ಟರು. ಇದರ ಅನ್ವಯ ಇಲಾಖೆಯವರು ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಚಿರತೆಯ ಬೋನನ್ನು ಇರಿಸಿ ಅಲ್ಲಿ ಕುರಿಯೊಂದನ್ನು ಕಟ್ಟಿಹಾಕಿದರು. ಅಲ್ಲಿಗೆ ಬುಧವಾರ ಬೆಳಗ್ಗೆ ಬಂದ ಚಿರತೆ ಕುರಿ ಮಾಂಸದ ಆಸೆಗಾಗಿ ಬೋನಿಗೆ ಬಿದ್ದಿತು. ಬೋನಿಗೆ ಬಿದ್ದ ಚಿರತೆ ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ಧನಲಕ್ಷ್ಮಿ, ವಲಯ ಉಪ ಅರಣ್ಯಾಧಿಕಾರಿ ಹರೀಶ್‌ ಸಿಬ್ಬಂದಿ ವರ್ಗ ಹಾಜರಿದ್ದು ಚಿರತೆಯ ಬೋನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಈ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಚಿರತೆಗಳು ನಿರಂತರವಾಗಿ ಓಡಾಡುತ್ತಿವೆ ಮತ್ತು ಸಾಕು ಪ್ರಾಣಿಗಳಾದ ಕುರಿ, ಮೇಕೆ, ಎಮ್ಮೆಗಳನ್ನು ಬಲಿ ತೆಗೆದುಕೊಂಡು ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರಿದ್ದರು. ಒಂದು ವರ್ಷದ ಹಿಂದೆಯಷ್ಟೆ ಬಂಡೂರು ಅಗ್ರಹಾರ ಗ್ರಾಮದಲ್ಲಿ ವೆಂಕಟೇಶಪ್ಪ ಎಂಬುವವನನ್ನು ಬಲಿ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾಕು ಪ್ರಾಣಿಗಳನ್ನು ಕಳೆದುಕೊಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದರೂ ಇದುವರೆವಿಗೂ ಯಾವುದೇ ಪರಿಹಾರ ದೊರೆತಿರುವ ಮಾಹಿತಿಯಿಲ್ಲ.

ಶಾಸಕರ ಬೇಟಿ : ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆಯ ಬಗ್ಗೆ ಮಾಹಿತಿ ಪಡೆದ ಶಾಸಕ ಕೆ.ವೈ.ನಂಜೇಗೌಡರು ಸ್ಥಳಕ್ಕೆ ಆಗಮಿಸಿ ಟೇಕಲ್‌ ಸುತ್ತಮುತ್ತಲೂ ಚಿರತೆ ಹಾವಳಿ ದಿನೆದಿನೇ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಚಿರತೆ ಗ್ರಾಮಕ್ಕೆ ಬಾರದಂತೆ ಹೈಮಾಸ್ಟ್‌ ದೀಪಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು ಎಂದರು. ಅರಣ್ಯ ಇಲಾಖೆಯವರು ಗ್ರಾಮಗಳ ಜನತೆಗೆ ಚಿರತೆಯಿಂದ ಪಾರಾಗಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕೆಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ