ಕೋಲಾರ: ನಗರದ ಎರಡು ಪ್ರಮುಖ ರಸ್ತೆಗಳ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ರಸ್ತೆ ಇಕ್ಕೆಲಗಳಲ್ಲಿತೆರವುಗೊಳಿಸಬೇಕಾದ ಜನವಸತಿ, ವಾಣಿಜ್ಯ ಹಾಗೂ ಧಾರ್ಮಿಕ ಕಟ್ಟಡಗಳಿಗೆ ಗಡಿ ರೇಖೆಯನ್ನು ಗುರುತಿಸುವ ಕಾರ್ಯವನ್ನು ಅಧಿಕಾರಿಗಳು ಶುಕ್ರವಾರ ಆರಂಭಿಸಿದರು.
ಬಂಗಾರಪೇಟೆ-ಬಾಗೇಪಲ್ಲಿರಾಜ್ಯ ಹೆದ್ದಾರಿ 5ರಲ್ಲಿಬರುವ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದವರೆಗಿನ 1.7 ಕಿಮೀ ರಸ್ತೆ ಹಾಗೂ ಪ್ರವಾಸಿ ಮಂದಿರದಿಂದ ಕ್ಲಾಕ್ ಟವರ್ ವರೆಗಿನ ಸುಮಾರು 1 ಕಿಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಸುಮಾರು 10 ಕೋಟಿ ರೂ ವೆಚ್ಚದಲ್ಲಿಅಭಿವೃದ್ಧಿಗೊಳಿಸಲು ಮುಂದಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿದೆ.
ಈ ಎರಡೂ ರಸ್ತೆಗಳು ರಸ್ತೆ ಮಧ್ಯೆದಿಂದ ತಲಾ 12 ಮೀಟರ್ನಂತೆ ಒಟ್ಟು 24 ಮೀಟರ್ನಷ್ಟು ವಿಸ್ತರಣೆಗೆ ಉದ್ದೇಶಿಸಿದ್ದು, ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿಇರುವ ವಾಸದ ಕಟ್ಟಡ, ವಾಣಿಜ್ಯ ಕಟ್ಟಡ, ಧಾರ್ಮಿಕ ಕೇಂದ್ರಗಳು, ವಿದ್ಯುತ್ ಕಂಬಗಳು ತೆರವುಗೊಳಿಸಬೇಕಿದೆ. ಈ ನಿಟ್ಟಿನಲ್ಲಿಕಳೆದ ತಿಂಗಳು ರಸ್ತೆ ಮಧ್ಯಭಾಗದಿಂದ ಇಕ್ಕೆಲಗಳಲ್ಲಿನ ಗಡಿ ರೇಖೆಯನ್ನು ನಿರ್ಧರಿಸುವ ಕಾರ್ಯ ನಡೆದಿತ್ತು.
ಮುಂದುವರಿದ ಭಾಗವಾಗಿ ಶುಕ್ರವಾರ ನಗರದ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದವರೆಗಿನ ರಸ್ತೆಯಲ್ಲಿಎಡಭಾಗದಲ್ಲಿ33 ಕಟ್ಟಡ, ಬಲಭಾಗದಲ್ಲಿ28 ಕಟ್ಟಡಗಳು ತೆರವುಗೊಳ್ಳಬೇಕಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವರ್ಗದವರು ವಸತಿ ಹಗೂ ವಾಣಿಜ್ಯ ಕಟ್ಟಡ, ಧಾರ್ಮಿಕ ಕೇಂದ್ರಗಳು ಎಲ್ಲಿಯವರೆಗೆ ತೆರವುಗೊಳಿಸಬೇಕು ಎಂಬುದನ್ನು ಕೆಂಪು ಬಣ್ಣದಲ್ಲಿಗುರುತು ಮಾಡಿದ್ದಾರೆ.
ಇದರಿಂದಾಗಿ ಅನೇಕ ಸಾರ್ವಜನಿಕರಲ್ಲಿಆತಂಕವೂ ಉಂಟಾಗಿದ್ದು, ಕೆಲರವು ಸ್ವಯಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಮುಂದಾಗಿದ್ದಾರೆ.
ಬಂಗಾರಪೇಟೆ-ಬಾಗೇಪಲ್ಲಿರಾಜ್ಯ ಹೆದ್ದಾರಿ 5ರಲ್ಲಿಬರುವ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದವರೆಗಿನ 1.7 ಕಿಮೀ ರಸ್ತೆ ಹಾಗೂ ಪ್ರವಾಸಿ ಮಂದಿರದಿಂದ ಕ್ಲಾಕ್ ಟವರ್ ವರೆಗಿನ ಸುಮಾರು 1 ಕಿಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಸುಮಾರು 10 ಕೋಟಿ ರೂ ವೆಚ್ಚದಲ್ಲಿಅಭಿವೃದ್ಧಿಗೊಳಿಸಲು ಮುಂದಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿದೆ.
ಈ ಎರಡೂ ರಸ್ತೆಗಳು ರಸ್ತೆ ಮಧ್ಯೆದಿಂದ ತಲಾ 12 ಮೀಟರ್ನಂತೆ ಒಟ್ಟು 24 ಮೀಟರ್ನಷ್ಟು ವಿಸ್ತರಣೆಗೆ ಉದ್ದೇಶಿಸಿದ್ದು, ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿಇರುವ ವಾಸದ ಕಟ್ಟಡ, ವಾಣಿಜ್ಯ ಕಟ್ಟಡ, ಧಾರ್ಮಿಕ ಕೇಂದ್ರಗಳು, ವಿದ್ಯುತ್ ಕಂಬಗಳು ತೆರವುಗೊಳಿಸಬೇಕಿದೆ. ಈ ನಿಟ್ಟಿನಲ್ಲಿಕಳೆದ ತಿಂಗಳು ರಸ್ತೆ ಮಧ್ಯಭಾಗದಿಂದ ಇಕ್ಕೆಲಗಳಲ್ಲಿನ ಗಡಿ ರೇಖೆಯನ್ನು ನಿರ್ಧರಿಸುವ ಕಾರ್ಯ ನಡೆದಿತ್ತು.
ಮುಂದುವರಿದ ಭಾಗವಾಗಿ ಶುಕ್ರವಾರ ನಗರದ ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದವರೆಗಿನ ರಸ್ತೆಯಲ್ಲಿಎಡಭಾಗದಲ್ಲಿ33 ಕಟ್ಟಡ, ಬಲಭಾಗದಲ್ಲಿ28 ಕಟ್ಟಡಗಳು ತೆರವುಗೊಳ್ಳಬೇಕಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವರ್ಗದವರು ವಸತಿ ಹಗೂ ವಾಣಿಜ್ಯ ಕಟ್ಟಡ, ಧಾರ್ಮಿಕ ಕೇಂದ್ರಗಳು ಎಲ್ಲಿಯವರೆಗೆ ತೆರವುಗೊಳಿಸಬೇಕು ಎಂಬುದನ್ನು ಕೆಂಪು ಬಣ್ಣದಲ್ಲಿಗುರುತು ಮಾಡಿದ್ದಾರೆ.
ಇದರಿಂದಾಗಿ ಅನೇಕ ಸಾರ್ವಜನಿಕರಲ್ಲಿಆತಂಕವೂ ಉಂಟಾಗಿದ್ದು, ಕೆಲರವು ಸ್ವಯಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಮುಂದಾಗಿದ್ದಾರೆ.