ಆ್ಯಪ್ನಗರ

ಸಾಲ ಸದುಪಯೋಗಪಡಿಸಿಕೊಳ್ಳಿ: ಬ್ಯಾಲಹಳ್ಳಿ

ಮಹಿಳೆಯರು ಬ್ಯಾಂಕಿನಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

Vijaya Karnataka 18 Dec 2018, 5:00 am
ದುಗ್ಗಸಂದ್ರ : ಮಹಿಳೆಯರು ಬ್ಯಾಂಕಿನಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
Vijaya Karnataka Web make a loan balahalli
ಸಾಲ ಸದುಪಯೋಗಪಡಿಸಿಕೊಳ್ಳಿ: ಬ್ಯಾಲಹಳ್ಳಿ


ಬೆಸ್ತರಹಳ್ಳಿ ಗ್ರಾಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಗಮ ಕೋಲಾರ ಮತ್ತು ಉತ್ತನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 30 ಸ್ತ್ರೀಶಕ್ತಿ ಮಹಿಳಾ ಸಂಘಗಳಿಗೆ 1.50 ಕೋಟಿರೂಗಳ ಸಾಲವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿ.ಪಂ ಸದಸ್ಯರಾದ ಅರವಿಂದ್‌ಕುಮಾರ್‌ ಮಾತನಾಡಿ ಮಹಿಳೆಯರು ತಾವು ಪಡೆದ ಸಾಲವನ್ನು ಯಾವುದೇ ರೀತಿಯಲ್ಲಿ ದುರುಪಯೋಗಮಾಡಿಕೊಳ್ಳದೆ ಉತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕ ಹಾಗೂ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಯಾಗಬೇಕೆಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ, ಹಿಂದಿನ ಬ್ಯಾಂಕಿನ ಸ್ಥಿತಿ: 5 ವರ್ಷಗಳ ಹಿಂದೆ ಕೋಲಾರ ಡಿಸಿಸಿ ಬ್ಯಾಂಕ್‌ ದಿವಾಳಿಯಾಗಿದ್ದು ಹಾಗೆಯೇ ಉತ್ತನೂರು ವಿ.ಎಸ್‌.ಎಸ್‌.ಎನ್‌. ಸಹಾ ಒಂದು ವರ್ಷದ ಹಿಂದಿನ ವರೆಗೂ ಮುಚ್ಚಲ್ಪಟ್ಟಿತ್ತು, ಅಂತಹ ಬ್ಯಾಂಕನ್ನು ಇಂದು ಹಲವಾರು ಜನರಿಗೆ ಸಾವಿರಾರು ಕೋಟಿ ಸಾಲ ನೀಡುವ ಶಕ್ತಿಯಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.

ನಿರ್ದೇಶಕ ಅನಿಲ್‌ ಕುಮಾರ್‌, ಈವರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 1300 ಕೋಟಿಗಳು ಸಾಲ ನೀಡಲಾಗಿದೆ ಹೀಗೆ ಸಾಲ ನೀಡುವುದರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಹಾಗೂ ಸಾಲ ಮರುಪಾವತಿಯಲ್ಲಿ ದೇಶದಲ್ಲಿ ಮೊದಲಸ್ಥಾನವನ್ನು ಪಡೆದಿದೆ ಎಂದರು.

ಸಾಲಕ್ಕೆ ಯಾವುದೇ ರೀತಿಯಲ್ಲಿ ಬಡ್ಡಿಯನ್ನು ವಿಧಿಸುವುದಿಲ್ಲ ಹಾಗೂ ಮಹಿಳೆಯರು ತಾವು ಪಡೆದಂತಹ ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು.

ಕೋಚಿಮುಲ್‌ ನಿರ್ದೇಶಕ ಆರ್‌.ಆರ್‌.ರಾಜೇಂದ್ರಗೌಡ, ಪಿ.ಎಲ್‌.ಡಿ ಬ್ಯಾಂಕ್‌ ಅಧ್ಯಕ್ಷ ಗಂಗಿರೆಡ್ಡಿ, ಪಿ.ಎಲ್‌.ಡಿ. ಬ್ಯಾಂಕ್‌ ಮಾಜಿ ಅಧ್ಯಕ್ಷ ಉತ್ತನೂರು ಶ್ರೀನಿವಾಸ್‌, ಗ್ರಾ.ಪಂ ಅಧ್ಯಕ್ಷೆ ವರಲಕ್ಷ ್ಮಮ್ಮ, ನಿರ್ದೇಶಕ ಗೊಲ್ಲಹಳ್ಳಿ ವೆಂಕಟೇಶ್‌, ಸಮಾಜಸೇವಕ ಬೆಸ್ತರಹಳ್ಳಿ ಸುರೇಶ್‌ಗೌಡ, ವಿ.ಎಸ್‌.ಎಸ್‌.ಎನ್‌ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್‌, ಪೆದ್ದಪ್ಪಯ್ಯ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ