ಜುಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಜೀವನದಲ್ಲಿ ಜುಗುಪ್ಸೆ ಹೊಂದಿದ ವ್ಯಕ್ತಿಯೊಬ್ಬ ಮರಕ್ಕೆ ತನ್ನ ಪ್ಯಾಂಟಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರಳೇರಿ ಗ್ರಾಮದ ಸಮೀಪ ನಡೆದಿದೆ.
Vijaya Karnataka 14 Apr 2019, 5:00 am
ಮಾಲೂರು: ಜೀವನದಲ್ಲಿ ಜುಗುಪ್ಸೆ ಹೊಂದಿದ ವ್ಯಕ್ತಿಯೊಬ್ಬ ಮರಕ್ಕೆ ತನ್ನ ಪ್ಯಾಂಟಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರಳೇರಿ ಗ್ರಾಮದ ಸಮೀಪ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಅರಳೇರಿ ಗ್ರಾಪಂ ವ್ಯಾಪ್ತಿಯ ಅಂಗಶೆಟ್ಟಿಹಳ್ಳಿ ಗ್ರಾಮದ ಕೃಷ್ಣ (28) ಎಂದು ಗುರುತಿಸಲಾಗಿದೆ. ಅಂಗಶೆಟ್ಟಿಹಳ್ಳಿ ಗ್ರಾಮದ ಮುನಿಯಪ್ಪ ಎಂಬುವವರ ಮಗನಾದ ಕೃಷ್ಣ 5 ವರ್ಷಗಳ ಹಿಂದೆ ಗೇರದೇನಹಳ್ಳಿ ಗ್ರಾಮದ ನಾರಾಯಣಪ್ಪ ಎಂಬುವರ ಮಗಳಾದ ವೆಂಕಟಲಕ್ಷ ್ಮಮ್ಮ ಎಂಬುವಳೊಂದಿಗೆ ಮದುವೆಯಾಗಿದ್ದು, ಇವರಿಗೆ ಒಂದು ಗಂಡು ಮತ್ತು ಹೆಣ್ಣು ಮಗು ಇದ್ದು, ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಪತ್ನಿ ತನ್ನ ತವರು ಮನೆಗೆ ಹೋಗಿದ್ದು, ಮನೆಗೆ ಹಿಂತಿರುಗುವಂತೆ ಹೇಳಿದ್ದು, ಆಕೆ ಶ್ರೀರಾಮನವಮಿ ಹಬ್ಬದ ನಂತರ ಬರುವುದಾಗಿ ಆಕೆ ಹೇಳಿದ್ದಾಳೆ. ಇದರಿಂದ ಮನಸ್ಸಿಗೆ ಬೇಸರಗೊಂಡು ಕೃಷ್ಣ ಅರಳೇರಿ ಸಮೀಪವಿರುವ ಮರಿಯಪ್ಪ ಎಂಬುವವರ ಜಮೀನಿಗೆ ತೆರಳಿ ತನ್ನ ಪ್ಯಾಂಟಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಈತನು ಮೃತಪಟ್ಟಿರುವ ಬಗ್ಗೆ ವಿಷಯ ತಿಳಿದ ಪೋಷಕರು ನಂತರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಅರಳೇರಿ ಗ್ರಾಪಂ ವ್ಯಾಪ್ತಿಯ ಅಂಗಶೆಟ್ಟಿಹಳ್ಳಿ ಗ್ರಾಮದ ಕೃಷ್ಣ (28) ಎಂದು ಗುರುತಿಸಲಾಗಿದೆ. ಅಂಗಶೆಟ್ಟಿಹಳ್ಳಿ ಗ್ರಾಮದ ಮುನಿಯಪ್ಪ ಎಂಬುವವರ ಮಗನಾದ ಕೃಷ್ಣ 5 ವರ್ಷಗಳ ಹಿಂದೆ ಗೇರದೇನಹಳ್ಳಿ ಗ್ರಾಮದ ನಾರಾಯಣಪ್ಪ ಎಂಬುವರ ಮಗಳಾದ ವೆಂಕಟಲಕ್ಷ ್ಮಮ್ಮ ಎಂಬುವಳೊಂದಿಗೆ ಮದುವೆಯಾಗಿದ್ದು, ಇವರಿಗೆ ಒಂದು ಗಂಡು ಮತ್ತು ಹೆಣ್ಣು ಮಗು ಇದ್ದು, ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಪತ್ನಿ ತನ್ನ ತವರು ಮನೆಗೆ ಹೋಗಿದ್ದು, ಮನೆಗೆ ಹಿಂತಿರುಗುವಂತೆ ಹೇಳಿದ್ದು, ಆಕೆ ಶ್ರೀರಾಮನವಮಿ ಹಬ್ಬದ ನಂತರ ಬರುವುದಾಗಿ ಆಕೆ ಹೇಳಿದ್ದಾಳೆ. ಇದರಿಂದ ಮನಸ್ಸಿಗೆ ಬೇಸರಗೊಂಡು ಕೃಷ್ಣ ಅರಳೇರಿ ಸಮೀಪವಿರುವ ಮರಿಯಪ್ಪ ಎಂಬುವವರ ಜಮೀನಿಗೆ ತೆರಳಿ ತನ್ನ ಪ್ಯಾಂಟಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಈತನು ಮೃತಪಟ್ಟಿರುವ ಬಗ್ಗೆ ವಿಷಯ ತಿಳಿದ ಪೋಷಕರು ನಂತರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.