ಆ್ಯಪ್ನಗರ

ಅಕ್ರಮ ಸಂಬಂಧ ಬಯಲಾಗುವ ಭಯ: ಬಾಲಕಿ ಕೊಂದು ಸುಟ್ಟ ಆರೋಪಿ ಸೆರೆ

ಅಕ್ರಮ ಸಂಬಂಧ ಬಯಲಾಗುವ ಭಯದಲ್ಲಿ ಬಾಲಕಿಯನ್ನು ಸಾಯಿಸಿ ನಂತರ ಸುಟ್ಟು ಹಾಕಿರುವ ಭಯಾನಕ ಘಟನೆ ತಾಲೂಕಿನ ಹುಲ್ಕೂರು ಗ್ರಾಮದಲ್ಲಿ ನಡೆದಿದೆ.

Vijaya Karnataka 14 Apr 2019, 5:00 am
ಮಾಲೂರು: ಅಕ್ರಮ ಸಂಬಂಧ ಬಯಲಾಗುವ ಭಯದಲ್ಲಿ ಬಾಲಕಿಯನ್ನು ಸಾಯಿಸಿ ನಂತರ ಸುಟ್ಟು ಹಾಕಿರುವ ಭಯಾನಕ ಘಟನೆ ತಾಲೂಕಿನ ಹುಲ್ಕೂರು ಗ್ರಾಮದಲ್ಲಿ ನಡೆದಿದೆ.
Vijaya Karnataka Web murder accused arrested
ಅಕ್ರಮ ಸಂಬಂಧ ಬಯಲಾಗುವ ಭಯ: ಬಾಲಕಿ ಕೊಂದು ಸುಟ್ಟ ಆರೋಪಿ ಸೆರೆ


ಮೃತಪಟ್ಟ ಬಾಲಕಿಯನ್ನು ಹುಲ್ಕೂರು ಗ್ರಾಮದ ವೇದ(4) ಎಂದು ಗುರುತಿಸಲಾಗಿದೆ. ಆರೋಪಿ ಇದೇ ಗ್ರಾಮದ ಮುನಿರಾಜ್‌(29) ನನ್ನು ಪಟ್ಟಣದ ಪೊಲೀಸರು ಬಂಗಾರಪೇಟೆ ಸಮೀಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಅರಳೇರಿ ಗ್ರಾಪಂ ವ್ಯಾಪ್ತಿಯ ಹುಲ್ಕೂರು ಗ್ರಾಮದ ಮುನಿರಾಜ್‌ ಎಂಬುವವರಿಗೆ ಮದುವೆಯಾಗಿದ್ದು 4 ವರ್ಷದ ಗಂಡು ಮಗು ಇದೆ. ಅಲ್ಲದೆ, ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದು, ಈತ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈತನ ಮನೆಯ ಪಕ್ಕದಲ್ಲಿ ವಾಸವಾಗಿದ್ದ ವೇದಾ ಚಿಕ್ಕಮ್ಮ ವರಲಕ್ಷ್ಮೀ ಜತೆ ಮುನಿರಾಜು ಅಕ್ರಮ ಸಂಬಂಧ ಹೊಂದಿದ್ದ.

ಶುಕ್ರವಾರ ರಾತ್ರಿ ವರಲಕ್ಷ್ಮಿ ಹಾಗೂ ಮುನಿರಾಜ್‌ ಸರಸದಲ್ಲಿ ತೊಡಗಿರುವುದನ್ನು ಬಾಲಕಿ ವೇದಾ ನೋಡಿದ್ದಳು. ಅಕ್ರಮ ಸಂಬಂಧ ಬಯಲಾಗುವ ಭಯದಲ್ಲಿ ಬಾಲಕಿ ವಿಷಯವನ್ನು ಎಲ್ಲರಿಗೂ ತಿಳಿಸುತ್ತಾಳೆಂದು ಅನುಮಾನಗೊಂಡ ಮುನಿರಾಜ್‌ ಆಕೆಯ ಬಾಯಿಯನ್ನು ಮುಚ್ಚಿ ಮನೆಯಿಂದ ಹೊರಗಡೆ ಎತ್ತಿಕೊಂಡು ಹೋಗಿ ಆಕೆಯನ್ನು ಸಾಯಿಸಿ ನಂತರ ಸುಟ್ಟಿದ್ದಾನೆ.

ವೇದಾ ತಾಯಿಯ ಬಾಣಂತನಕ್ಕೆಂದು ಬಂದಿದ್ದ ಆಕೆಯ ಪೋಷಕರು ಶುಕ್ರವಾರ ವೇದ ಕಾಣಸದೇ ಇರುವ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದರು. ಎಚ್ಚೆತ್ತುಕೊಂಡ ಪೊಲೀಸರು ಬಾಲಕಿಯ ಅಕ್ಕಪಕ್ಕದ ಮನೆಗಳ ಸಮೀಪ ವಿಚಾರಣೆ ನಡೆಸಿದಾಗ ಮುನಿರಾಜು ತನ್ನ ಮೊಬೈಲ್‌ ಸಂಖ್ಯೆಯನ್ನು ಸ್ಥಗಿತಗೊಳಿಸಿ ಪರಾರಿಯಾಗಿದ್ದ. ಕೂಡಲೇ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆಬೀಸಿದ್ದು, ಬಂಗಾರಪೇಟೆ ಸಮೀಪ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ