ಆ್ಯಪ್ನಗರ

ಆಪರೇಷನ್‌ ಕಮಲಕ್ಕೂ ನನಗೂ ಸಂಬಂಧವಿಲ್ಲ; ಎಚ್‌.ನಾಗೇಶ್‌

ನಾನು ಪಕ್ಷೇತರ ಶಾಸಕ, ನನ್ನನ್ನು ಆಪರೇಷನ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಪರೇಷನ್‌ ಕಮಲಕ್ಕೂ ನನಗೂ ಸಂಬಂಧವಿಲ್ಲ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಹೇಳಿದರು.

Vijaya Karnataka 20 Feb 2019, 3:46 pm
ಕೋಲಾರ: ನಾನು ಪಕ್ಷೇತರ ಶಾಸಕ, ನನ್ನನ್ನು ಆಪರೇಷನ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಪರೇಷನ್‌ ಕಮಲಕ್ಕೂ ನನಗೂ ಸಂಬಂಧವಿಲ್ಲ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಹೇಳಿದರು.
Vijaya Karnataka Web no connection between me and operation lotus nagesh
ಆಪರೇಷನ್‌ ಕಮಲಕ್ಕೂ ನನಗೂ ಸಂಬಂಧವಿಲ್ಲ; ಎಚ್‌.ನಾಗೇಶ್‌


ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನು ಮುಂಬೈನ ಹೋಟೆಲ್‌ಗೆ ಹೋಗಿದ್ದು ನಿಜ. ಅಲ್ಲಿ ಬಿಜೆಪಿ ಹಣವನ್ನು ನೀಡಿಲ್ಲ. ಹರಿದಾಡುತ್ತಿರುವ ಊಹಾಪೋಹಾಗಳನ್ನು ನಂಬುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿರುವ ನಾನು ಜನರ ಋುಣ ತೀರಿಸುವ ಸಲುವಾಗಿ ಕುಡಿಯುವ ನೀರು, ರಸ್ತೆ, ವಸತಿ, ಹಾಸ್ಟೆಲ್‌, ವಿದ್ಯಾಭ್ಯಾಸಕ್ಕೆ ಕ್ಷೇತ್ರಕ್ಕೆ ಅನುದಾನ ಬರುವುದು ಮುಖ್ಯ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನದ ಜತೆಗೆ ನನ್ನ ಕೆಲವು ಬೇಡಿಕೆಗಳನ್ನೂ ಕಾಂಗ್ರೆಸ್‌ ಮುಖಂಡರ ಬಳಿ ಪ್ರಸ್ತಾಪಿಸಿದ್ದೇನೆ.

ಅದಕ್ಕೆ ಒಪ್ಪಿದ್ದಾರೆ ನಿಗಮ ಮಂಡಳಿಗೆ ನನ್ನನ್ನು ಸದ್ಯಕ್ಕೆ ಅಧ್ಯಕ್ಷ ರನ್ನಾಗಿಸಿ ಆ ಬಳಿಕ ಸಚಿವ ಸ್ಥಾನವನ್ನು ಮುಂದಿನ ದಿನಗಳಲ್ಲಿ ನೀಡುವ ಭರವಸೆಯೂ ಸಿಕ್ಕಿದೆ. ಹೀಗಾಗಿಯೇ ನಾನು ಮತ್ತೆ ಬೆಂಬಲ ವ್ಯಕ್ತಪಡಿಸಿರುವುದಾಗಿ ಸ್ಪಷ್ಟಪಡಿಸಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಸೂಚಿಸಬೇಕು ಎನ್ನುವುದನ್ನು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಮತ್ತು ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ