ಕೋಲಾರದಲ್ಲಿ ನಿಷೇಧಿತ ನೋಟುಗಳ ಬದಲಾವಣೆ ಯತ್ನ; ನಾಲ್ವರ ಬಂಧನ
ಮಾಲೂರು ಪಟ್ಟಣದ ರಾಜೀವ್ ನಗರದ ಪಕ್ಕದ ಇಟ್ಟಿಗೆ ಕಾರ್ಖಾನೆಯ ಸಮೀಪ ಇರುವ ಲೇ ಔಟ್ ಬಳಿ ನಿಷೇಧಿತ ಐನೂರು ಹಾಗೂ ಒಂದು ಸಾವಿರ ರೂಗಳ ನಗದು ಬದಲಾಯಿಸಿಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ 35,77,500, ಲಕ್ಷ ರೂ ವಶಪಡಿಸಿಕೊಂಡು 4 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
Vijaya Karnataka 11 Jul 2019, 3:15 pm
ಮಾಲೂರು: ನಿಷೇಧಿತ ಐನೂರು ಹಾಗೂ ಒಂದು ಸಾವಿರ ರೂ. ನಗದನ್ನು ಬದಲಾಯಿಸಿಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡು 4 ಮಂದಿ ಆರೋಪಗಳನ್ನು ಬಂಧಿಸಿರುವ ಘಟನೆ ಬುಧವಾರ ಸಂಜೆ ಪಟ್ಟಣದ ರಾಜೀವ್ ನಗರದ ಸಮೀಪ ನಡೆದಿದೆ.
ಬಂಧಿಸಿರುವ ಆರೋಪಿಗಳನ್ನು ಬೈರಮಂಗಲದ ಹರಿಬಾಬು, ಚಿಂತಾಮಣಿಯ ಎಸ್.ಸಿ.ಆನಂದ್, ಅಶೋಕ್ ಹಾಗೂ ಕೆಲಮಂಗಲದ ಹರೀಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಶಂಕರ ನಾರಾಯಣಪುರದ ಆನಂದ್ ಪರಾರಿಯಾಗಿದ್ದಾನೆ.
ಶಂಕರನಾರಾಯಣಪುರದ ಆನಂದ್ ಪಟ್ಟಣದಲ್ಲಿ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ಕೇಂದ್ರ ಸರಕಾರ 2 ವರ್ಷಗಳ ಹಿಂದೆ ನಿಷೇಧಿಸಿರುವ ಐನೂರು ಹಾಗೂ ಒಂದು ಸಾವಿರ ರೂಗಳ ಸುಮಾರು 35,77,500, ಲಕ್ಷ ರೂ.ಗಳನ್ನು ವಿನಿಮಯ ಮಾಡಿಕೊಳ್ಳಲು ತನ್ನ ಸ್ನೇಹಿತರಾದ ಹರೀಶ್, ಹರಿಬಾಬು, ಎಸ್.ಸಿ.ಆನಂದ್ ಹಾಗೂ ಅಶೋಕ್ ಅವರನ್ನು ಪಟ್ಟಣದ ರಾಜೀವ್ ನಗರದ ಪಕ್ಕದ ಇಟ್ಟಿಗೆ ಕಾರ್ಖಾನೆಯ ಸಮೀಪ ಇರುವ ಲೇ ಔಟ್ ಬಳಿ ವ್ಯವಹಾರ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್ಐ ರಂಗಸ್ವಾಮಿ ನೇತೃತ್ವದಲ್ಲಿ ಎಎಸ್ಐ ರಾಮಕೃಷ್ಣಪ್ಪ, ಸಿಬ್ಬಂದಿಗಳಾದ ವೀರಣ್ಣ, ಸುರೇಶ್, ಸೋಮು, ರಂಜೀತ್, ರಮೇಶ್, ಫಾರೂಕ್ ಅವರು ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹಳೆಯ ನೋಟುಗಳ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿಸಿರುವ ಆರೋಪಿಗಳನ್ನು ಬೈರಮಂಗಲದ ಹರಿಬಾಬು, ಚಿಂತಾಮಣಿಯ ಎಸ್.ಸಿ.ಆನಂದ್, ಅಶೋಕ್ ಹಾಗೂ ಕೆಲಮಂಗಲದ ಹರೀಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಶಂಕರ ನಾರಾಯಣಪುರದ ಆನಂದ್ ಪರಾರಿಯಾಗಿದ್ದಾನೆ.
ಶಂಕರನಾರಾಯಣಪುರದ ಆನಂದ್ ಪಟ್ಟಣದಲ್ಲಿ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ಕೇಂದ್ರ ಸರಕಾರ 2 ವರ್ಷಗಳ ಹಿಂದೆ ನಿಷೇಧಿಸಿರುವ ಐನೂರು ಹಾಗೂ ಒಂದು ಸಾವಿರ ರೂಗಳ ಸುಮಾರು 35,77,500, ಲಕ್ಷ ರೂ.ಗಳನ್ನು ವಿನಿಮಯ ಮಾಡಿಕೊಳ್ಳಲು ತನ್ನ ಸ್ನೇಹಿತರಾದ ಹರೀಶ್, ಹರಿಬಾಬು, ಎಸ್.ಸಿ.ಆನಂದ್ ಹಾಗೂ ಅಶೋಕ್ ಅವರನ್ನು ಪಟ್ಟಣದ ರಾಜೀವ್ ನಗರದ ಪಕ್ಕದ ಇಟ್ಟಿಗೆ ಕಾರ್ಖಾನೆಯ ಸಮೀಪ ಇರುವ ಲೇ ಔಟ್ ಬಳಿ ವ್ಯವಹಾರ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್ಐ ರಂಗಸ್ವಾಮಿ ನೇತೃತ್ವದಲ್ಲಿ ಎಎಸ್ಐ ರಾಮಕೃಷ್ಣಪ್ಪ, ಸಿಬ್ಬಂದಿಗಳಾದ ವೀರಣ್ಣ, ಸುರೇಶ್, ಸೋಮು, ರಂಜೀತ್, ರಮೇಶ್, ಫಾರೂಕ್ ಅವರು ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹಳೆಯ ನೋಟುಗಳ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.