ಆ್ಯಪ್ನಗರ

ಕೆಜಿಎಫ್‌ನಲ್ಲಿ ಸಾವಿರ ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣ: ಶಾಸಕಿ ರೂಪಕಲಾ

ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಬೆಮೆಲ್ ಕಾರ್ಖಾನೆ ವತಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಒಂದು ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಲಿದೆ. ಇದಕ್ಕೆ ಶಾಸಕರ ನಿಧಿಯಿಂದ 9 ಲಕ್ಷ ರೂ. ನೀಡುವುದಾಗಿ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದ್ದಾರೆ. ಈ ಆಕ್ಸಿಜನ್ ಘಟಕವು 150 ರೋಗಿಗಳಿಗೆ ಆಕ್ಸಿಜನ್ ಒದಗಿಸಬಲ್ಲದು ಎಂದು ಅವರು ಹೇಳಿದ್ದಾರೆ.

Vijaya Karnataka 18 Jan 2022, 7:22 am
ಕೆಜಿಎಫ್‌: ಬೆಮಲ್‌ ಕಾರ್ಖಾನೆ ವತಿಯಿಂದ ಸಾಮಾಜಿಕ ಭದ್ರತೆ ಸೇವೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಾವಿರ ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 9 ಲಕ್ಷ ರೂ. ನೀಡುವುದಾಗಿ ಶಾಸಕಿ ರೂಪಕಲಾ ಶಶಿಧರ್‌ ಹೇಳಿದರು.
Vijaya Karnataka Web Oxygen plant


ಅತ್ಯಾಧುನಿಕ ಆಕ್ಸಿಜನ್‌ ಯಂತ್ರವನ್ನು ಬೆಮೆಲ್‌ ಕಾರ್ಖಾನೆ ಸಾಮಾಜಿಕ ಭದ್ರತೆಯಡಿ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆಗೆ ನೀಡುತ್ತಿದ್ದು, ಇದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ನೀಗಲಿದೆ. ಪ್ರಸ್ತುತ 500 ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಪ್ಲಾಂಟ್‌ ಕಾರ್ಯನಿರ್ವಹಿಸುತ್ತಿದ್ದು, ಇದು 50 ರಿಂದ 60 ರೋಗಿಗಳಿಗೆ ಆಕ್ಸಿಜನ್ ಒದಗಸಲಿದೆ. ಇನ್ನು ಬೆಮಲ್‌ ನೀಡುವ ಆಕ್ಸಿಜನ್‌ ಪ್ಲಾಂಟ್‌ ಒಂದು ಸಾವಿರ ಲೀಟರ್‌ನ ಸಾಮರ್ಥ್ಯ ಹೊಂದಿದ್ದು 100 ರೂಗಿಗಳಿಗೆ ಸಾಕಾಗುವಷ್ಟು ಆಕ್ಸಿಜನ್‌ ಸರಬರಾಜು ಆಗಲಿದೆ. ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ 150 ರೋಗಿಗಳಿಗೆ ಅಕ್ಸಿಜನ್‌ ಸಮಸ್ಯೆ ಇರುವುದಿಲ್ಲ ಎಂದು ಶಾಸಕಿ ರೂಪಕಲಾ ಶಶಿಧರ್‌ ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ದಿಢೀರನೇ ಏರಿಕೆ ಕಂಡ ಕೊರೊನಾ; 3ನೇ ಅಲೆ ಎದುರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಕಲ ಸಿದ್ದತೆ!
ವೈದ್ಯರ ಕೊರತೆ ಇಲ್ಲ
ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳಲ್ಲಿ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಫಿಜಿಷಿಯನ್‌ ಸೇರಿದಂತೆ ಹಲವು ವೈದ್ಯರ ಕೊರತೆ ಇತ್ತು. ಈಗ ಎಲ್ಲ ತರಹದ ಕಾಯಿಲೆಗಳಿಗೆ ವೈದ್ಯರು ಇರುವುದರಿಂದ ಪ್ರತಿ ದಿನ 1500ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ ಎಂದು ಹೇಳಿದರು.

ಪ್ರತಿ ದಿನ ಮಾಹಿತಿ ನೀಡಿ
ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್‌ ರೋಗಿಗಳ ಲೆಕ್ಕ, ಹೊರಹೋಗುವವರ ದಾಖಲೆಯನ್ನು ನನ್ನ ಮೊಬೈಲ್‌ ಫೋನ್‌ಗೆ ಕಳುಹಿಸಿ. ರೋಗಿಗಳ ದಾಖಲಾತಿ ವಿವರವನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕಬೇಕು ಎಂದು ಸೂಚಿಸಿದರು.
ಬೀದಿ ಬದಿ ಚಳಿಯಲ್ಲಿ ಮಲಗಿದ್ದವರಿಗೆ ಕಂಬಳಿ, ಮಾಸ್ಕ್‌ ವಿತರಣೆ! ಕೋಲಾರ ರೋಟರಿಯಿಂದ ಮಾನವೀಯ ಕಾರ್ಯ
ಎರಡನೇ ಅಲೆಯಷ್ಟು ಪ್ರಬಲವಲ್ಲ
ಓಮಿಕ್ರಾನ್‌ ಎರಡನೇ ಅಲೆಯಷ್ಟು ಪ್ರಬಲವಾಗಿಲ್ಲ. ಯಾವುದಕ್ಕೂ ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ಶೇ.90 ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದವರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶಾಸಕರಿಗೆ ಡಾ. ಸುರೇಶ್‌ಕುಮಾರ್‌ ಮಾಹಿತಿ ನೀಡಿದರು.

ಓಒಮಿಕ್ರಾನ್‌ ಮತ್ತು ಡೆಲ್ಟಾ ವೈರಸ್‌ ರೂಪಾಂತರಗೊಂಡರೆ ಮಾತ್ರ ತೊಂದರೆ ಉಂಟಾಗುತ್ತದೆ ಎಂದು ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ್‌ ತಿಳಿಸಿದರು. ರೋಗಿಗಳು ಹೆದರುವ ಅಗತ್ಯವಿಲ್ಲ. ಅಲ್ಲದೆ ಓಮಿಕ್ರಾನ್‌ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಈಗ ದಾಖಲಾಗಿರುವವರು ಬಹುತೇಕ ವಯಸ್ಕರು ಮಾತ್ರ. ಹವಾಮಾನ ವೈಪರೀತ್ಯದಿಂದ ಶೀತ ಮತ್ತು ಕೆಮ್ಮ ಜ್ವರ ಕಾಣಿಸಿಕೊಂಡಿರುವರು ಮೂರು ದಿನ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆ ವಾಸಿಯಾಗುತ್ತದೆ ಎಂದು ಡಾ.ಶಿವಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ