ಆ್ಯಪ್ನಗರ

ಸಾಲದ ಬಡ್ಡಿ ನೀಡದ್ದಕ್ಕೆ ಪಿಸ್ತೂಲ್‌ ತೋರಿಸಿ ಬೆದರಿಕೆ: ನಾಲ್ವರ ಬಂಧನ

ಸಾಲ ನೀಡಿದ ಹಣಕ್ಕೆ ಬಡ್ಡಿ ನೀಡದ ಹಿನ್ನೆಲೆಯಲ್ಲಿ ಸಾಲ ನೀಡಿದ ವ್ಯಕ್ತಿಯೊಬ್ಬ ಕೆಲವು ವ್ಯಕ್ತಿಗಳೊಂದಿಗೆ ಆಗಮಿಸಿ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಜಯಮಂಗಲ ಗ್ರಾಮದಲ್ಲಿ ನಡೆದಿದೆ.

Vijaya Karnataka 18 May 2019, 10:19 pm
ಮಾಲೂರು : ಸಾಲ ನೀಡಿದ ಹಣಕ್ಕೆ ಬಡ್ಡಿ ನೀಡದ ಹಿನ್ನೆಲೆಯಲ್ಲಿ ಸಾಲ ನೀಡಿದ ವ್ಯಕ್ತಿಯೊಬ್ಬ ಕೆಲವು ವ್ಯಕ್ತಿಗಳೊಂದಿಗೆ ಆಗಮಿಸಿ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಜಯಮಂಗಲ ಗ್ರಾಮದಲ್ಲಿ ನಡೆದಿದೆ.
Vijaya Karnataka Web pistols threaten to pay loan interest four arrested
ಸಾಲದ ಬಡ್ಡಿ ನೀಡದ್ದಕ್ಕೆ ಪಿಸ್ತೂಲ್‌ ತೋರಿಸಿ ಬೆದರಿಕೆ: ನಾಲ್ವರ ಬಂಧನ


ತಾಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮದ ಬೋಳೆಗೌಡ ಎಂಬುವವರಿಗೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಬೋಳೆಗೌಡ ಹಾಗೂ ಅವರ ಕುಟುಂಬದವರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಯಮಂಗಲ ಗ್ರಾಮದ ಬೋಳೆಗೌಡ ಎಂಬುವರು ರಸ್ತೆ ಪಕ್ಕದಲ್ಲಿ ಓಂಶಕ್ತಿ ದೇವಾಲಯವನ್ನು ನಿರ್ಮಿಸಿಕೊಂಡು ಪ್ರತಿನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬೋಳೆಗೌಡ ತಮ್ಮ ಸ್ವಂತಕ್ಕಾಗಿ ಬೇರೆಯವರಿಂದ ಸಾಲವನ್ನು ಮಾಡಿದ್ದು, ಸಾಲ ನೀಡಿದ ವ್ಯಕ್ತಿಯು ಬಡ್ಡಿ ಹಣ ನೀಡುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದ. ಅದರಂತೆ ಸಾಲ ನೀಡಿದ ವ್ಯಕ್ತಿ ಬೆಂಗಳೂರಿನಿಂದ ಸುರೇಶ್‌, ಮುನ್ನಾಬಾಯಿ, ಮಂಜುನಾಥ್‌ ಹಾಗೂ ನಬೀದ್‌ ಎಂಬುವವರನ್ನು ಕರೆದುಕೊಂಡು ಬೋಳೆಗೌಡನ ಮನೆಗೆ ಆಗಮಿಸಿ ಬಾಗಿಲನ್ನು ಬಡಿದಿದ್ದಾರೆ.

ಮನೆಯಲ್ಲಿದ್ದ ಬೋಳೇಗೌಡನ ಪತ್ನಿ ಕಾಮಾಕ್ಷ ಮ್ಮ ಹಾಗೂ ಮಗಳಾದ ಅಂಜಲಾದೇವಿ ಅವರು ಬಾಗಿಲನ್ನು ತೆರೆದಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್‌, ಮುನ್ನಾಬಾಯಿ, ಮಂಜುನಾಥ್‌ ಹಾಗೂ ನಬೀದ್‌ ಎಂಬುವರು ಪಡೆದಿರುವ ಸಾಲ ಹಾಗೂ ಬಡ್ಡಿಯ ಹಣವನ್ನು ನೀಡುವಂತೆ ಇಲ್ಲದಿದ್ದ ಪಕ್ಷ ದಲ್ಲಿ ಪಿಸ್ತೂಲಿನಿಂದ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮನೆಯಲ್ಲಿ ತಮ್ಮ ಗಂಡ ಇಲ್ಲ. ಈ ಬಗ್ಗೆ ಮಾತನಾಡೋಣ ಎಂದರೂ ಸಹ ಕೇಳದ ವ್ಯಕ್ತಿಗಳು ಗಲಾಟೆ ಮಾಡಿದರು. ಈ ಸಂದರ್ಭದಲ್ಲಿ ಕಾಮಾಕ್ಷ ಮ್ಮ ಹಾಗೂ ಮಗಳಾದ ಅಂಜಲಾದೇವಿ ಜೋರಾಗಿ ಕಿರುಚಿಕೊಂಡ ಪರಿಣಾಮ ಅಕ್ಕಪಕ್ಕದ ಮನೆಯವರು ಆಗಮಿಸುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದಾರೆ.

ಈ ಬಗ್ಗೆ ಬೋಳೆಗೌಡ ಹಾಗೂ ಪತ್ನಿ ಕಾಮಾಕ್ಷ ಮ್ಮ ಮಾಲೂರು ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಕೂಡಲೆ ಕಾರ್ಯಪ್ರವೃತ್ತರಾದ ಮಾಲೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷ ಣಾಧಿಕಾರಿ ಜಾಹ್ನವಿ, ಡಿವೈಎಸ್ಪಿ ಕೋದಂಡರಾಮ್‌, ಸಿಪಿಐ ಸತೀಶ್‌, ಎಸ್‌ಐ ರಂಗಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ