ಆ್ಯಪ್ನಗರ

ಪವರ್‌ ಗ್ರಿಡ್‌ವಿದ್ಯುತ್‌ ಮಾರ್ಗ ಕಾಮಗಾರಿ ಸೂಕ್ತ ಪರಿಹಾರಕ್ಕೆ ಆಗ್ರಹ

ತಾಲೂಕಿನಾದ್ಯಂತ ಪವರ್‌ಗ್ರಿಡ್‌ ವಿದ್ಯುತ್‌ ಮಾರ್ಗಕ್ಕೆ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಪ್ರತಿ ಕಂಬಕ್ಕೆ 25 ಲಕ್ಷ ರೂ. ಹಾಗೂ ತಂತಿ ಹಾದು ಹೋಗಿರುವ ಜಮೀನಿಗೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಆ.2ರಂದು ಶುಕ್ರವಾರ ಕಂಬಗಳನ್ನು ಹತ್ತಿ ನೆಟ್ಟು ಬೊಲ್ಟ್‌ಗಳನ್ನು ಬಿಚ್ಚುವ ವಿಭಿನ್ನ ರೀತಿಯ ಚಳವಳಿ ಮಾಡಲು ನೊಂದ ರೈತರು ಸಭೆಯಲ್ಲಿ ತಿರ್ಮಾನಿಸಿದರು.

Vijaya Karnataka 28 Jul 2019, 5:00 am
ಲಕ್ಕೂರು: ತಾಲೂಕಿನಾದ್ಯಂತ ಪವರ್‌ಗ್ರಿಡ್‌ ವಿದ್ಯುತ್‌ ಮಾರ್ಗಕ್ಕೆ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಪ್ರತಿ ಕಂಬಕ್ಕೆ 25 ಲಕ್ಷ ರೂ. ಹಾಗೂ ತಂತಿ ಹಾದು ಹೋಗಿರುವ ಜಮೀನಿಗೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಆ.2ರಂದು ಶುಕ್ರವಾರ ಕಂಬಗಳನ್ನು ಹತ್ತಿ ನೆಟ್ಟು ಬೊಲ್ಟ್‌ಗಳನ್ನು ಬಿಚ್ಚುವ ವಿಭಿನ್ನ ರೀತಿಯ ಚಳವಳಿ ಮಾಡಲು ನೊಂದ ರೈತರು ಸಭೆಯಲ್ಲಿ ತಿರ್ಮಾನಿಸಿದರು.
Vijaya Karnataka Web power grid power station
ಪವರ್‌ ಗ್ರಿಡ್‌ವಿದ್ಯುತ್‌ ಮಾರ್ಗ ಕಾಮಗಾರಿ ಸೂಕ್ತ ಪರಿಹಾರಕ್ಕೆ ಆಗ್ರಹ


ಮಾಸ್ತಿ ಹೋಬಳಿ ತೊಳಸನದೊಡ್ಡಿ ಗ್ರಾಮದ ರೈತರ ಜಮೀನಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರಕಾರ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ರಸ್ತೆ, ಕೈಗಾರಿಕೆ, ಸೋಲಾರ್‌ ನಿರ್ಮಾಣ ಹಾಗೂ ಪವರ್‌ಗ್ರಿಡ್‌ ಸೇರಿದಂತೆ ನಾನಾ ಯೋಜನೆಗಳಿಗೆ ರೈತರ ಭೂಮಿ ವಶಪಡಿಸಿಕೊಳ್ಳುತ್ತದೆ.ಆದರೆ,ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರನ್ನು ಬೀದಿ ಪಾಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಮಿಳುನಾಡಿ ನಿಂದ ಬರುತ್ತಿರುವ ಲೈನ್‌: ತಮಿಳುನಾಡಿನಿಂದ ಬರುವ ಪವರ್‌ಗ್ರಿಡ್‌ ವಿದ್ಯುತ್‌ ಮಾರ್ಗಕ್ಕೆ ತಾಲೂಕಿನ ಮಾಸ್ತಿ ಹೋಬಳಿಯ ತೊಳಸನದೊಡ್ಡಿ, ಹಸಾಂಡಹಳ್ಳಿ, ತಿಪ್ಪಸಂದ್ರ, ಮುತ್ಯಾನಹಟ್ಟಿ ಸೇರಿದಂತೆ ಹಲವಾರು ಗ್ರಾಮಗಳ 100ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಕಂಬ ಅಳವಡಿಸುವುದರ ಜತೆಗೆ ತಂತಿ ಹಾದು ಹೋಗಿರುವುದರಿಂದ ಕೃಷಿ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಜಮೀನಿನಲ್ಲಿದ್ದ ತೆಂಗು, ಮಾವು, ಇನ್ನಿತರೆ ವಾಣಿಜ್ಯ ಮರಗಳು ಈ ಕಾಮಗಾರಿಯಿಂದ ಹಾಳಾಗುತ್ತಿದ್ದು, ಇದನ್ನೇ ನಂಬಿದ್ದ ರೈತರು ಸೂಕ್ತ ಪರಿಹಾರ ಸಿಗದೆ ಪರದಾಡುವಂತಾಗಿದೆ. ಅಧಿಕಾರಿಗಳು ರೈತರ ಪ್ರತಿ ಗುಂಟೆಗೆ 5ಸಾವಿರ, ಪ್ರತಿ ಮರಕ್ಕೆ 8ಸಾವಿರದಂತೆ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದಾರೆ. ಅದರಲ್ಲೂ ಏಕರೂಪದ ಪರಿಹಾರ ನೀಡದೇ ಅಮಾಯಕ ರೈತರನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.

ವಾರದೊಳಗೆ ಸಭೆ ಕರೆಯಬೇಕು: ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೇಳುವವರು ಇಲ್ಲದಂತಾಗಿದೆ. ಈ ಬಗ್ಗೆ ತಹಸೀಲ್ದಾರ್‌ ಅವರು 1 ವಾರದೊಳಗೆ ಪವರ್‌ಗ್ರಿಡ್‌ ಸಂಬಂದಪಟ್ಟ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಪ್ರತಿ ಕಂಬಕ್ಕೆ 25ಲಕ್ಷ ರೂ. ಹಾಗೂ ತಂತಿ ಹಾದು ಹೋಗಿರುವ ಜಮೀನಿಗೆ 15ಲಕ್ಷ ರೂ. ಪರಿಹಾರ ಕೊಡಿಸಬೇಕು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಹಾಗೂ ರೈತರು ಆ.2ರಂದು ಶುಕ್ರವಾರ ವಿದ್ಯುತ್‌ ಹರಿಯುತ್ತಿರುವ ಕಂಬಗಳನ್ನು ಏರಿ ಹಾಗೂ ಕಂಬಗಳನ್ನು ಹತ್ತಿ ನೆಟ್ಟು ಬೊಲ್ಟ್‌ಗಳನ್ನು ಬಿಚ್ಚುವ ವಿಭಿನ್ನ ರೀತಿಯ ಚಳವಳಿ ಮಾಡಲು ತಿರ್ಮಾನಿಸಲಾಯಿತು.

ತಾ. ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ನಾಗಮ್ಮ, ಚಿಕ್ಕತಮ್ಮಯ್ಯ, ವೆಂಕಟೇಶಪ್ಪ, ನಾರಾಯಣಪ್ಪ, ವೆಂಕಟರಾಮಪ್ಪ, ಮುತ್ತಪ್ಪ, ಚವನ ದೊಡ್ಡಪ್ಪ, ಲಕ್ಷ ಮ್ಮ, ಶಾಂತಮ್ಮ, ಕೊಮ್ಮೇನಹಳ್ಳಿ ಚಂದ್ರು, ರಾಮಸ್ವಾಮಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್‌ ಶ್ರೀನಿವಾಸ್‌, ಲಕ್ಷೀಸಾಗರ ಮೀಸೆ ವೆಂಕಟೇಶಪ್ಪ, ಮುನಿಶ್ಯಾಮಪ್ಪ, ರೂಪೇಶ್‌, ಮಾ.ವೇ. ಪ್ರಕಾಶ್‌, ಹರ್ಷ, ವಕ್ಕಲೇರಿ ಹನುಮಯ್ಯ, ಚಂದ್ರಮ್ಮ, ಚಂದ್ರಪ್ಪ, ವೆಂಕಟರಮಣಪ್ಪ, ಶಾಂತಮ್ಮ ಇನ್ನಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ