ಆ್ಯಪ್ನಗರ

ಮಕರ ಸಂಕ್ರಾಂತಿ ಅದ್ಧೂರಿ ಆಚರಣೆಗೆ ಸಿದ್ಧತೆ

ಮಕರ ಸಂಕ್ರಾಂತಿಯನ್ನು ಹೋಬಳಿಯಾದ್ಯಂತ ಜನತೆ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.

Vijaya Karnataka 15 Jan 2019, 5:00 am
ಲಕ್ಕೂರು: ಮಕರ ಸಂಕ್ರಾಂತಿಯನ್ನು ಹೋಬಳಿಯಾದ್ಯಂತ ಜನತೆ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.
Vijaya Karnataka Web preparation to celebrate sankranti
ಮಕರ ಸಂಕ್ರಾಂತಿ ಅದ್ಧೂರಿ ಆಚರಣೆಗೆ ಸಿದ್ಧತೆ


ಹಬ್ಬದ ಅಂಗವಾಗಿ ಹಣ್ಣು ಹಂಪÜಲು, ಹೂವು, ಕಬ್ಬು ಸೇರಿದಂತೆ ಅಗತ್ಯ ವಸ್ತುಗಳ ದರಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ರೈತರು ಹಾಗೂ ಸಾರ್ವಜನಿಕರು ರಾಸುಗಳನ್ನು ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲು ಸಕಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದಾರೆ.

ಹೂ ಬೆಳೆಗಳಿಗೆ ಹೆಸರು ವಾಸಿಯಾದ ಲಕ್ಕೂರು ಹೋಬಳಿಯಾದ್ಯಂತ ಕಳೆದ ಐದಾರು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಹೂ ಹಾಗೂ ತರಕಾರಿ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿ ರೈತರಿಗೆ ಬಾರಿ ನಷ್ಟ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಸಮರ್ಪಕ ಮಳೆಯಾಗದ ಕಾರಣ ಹೂ ಬೆಳೆಗಳ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಹೂವು ಹಾಗೂ ಹಣ್ಣುಗಳ ದರಗಳು ಏರಿಕೆಯಾಗಿರುವುದರಿಂದ ರೈತರಿಗೆ ಅನುಕೂಲವಾಗಿದೆ.

ಹೂವಿನ ಬೆಲೆ ಏರಿಕೆ: ಹೂವಿನ ಬೆಲೆಗಳು ಗಗನಕ್ಕೆ ಏರಿದ್ದು, ಗ್ರಾಹಕರಿಗೆ ಹೊರೆಯಾದರೂ ಹಬ್ಬ ಆಚರಿಸಲು ಖರೀದಿಸಲು ಮುಂದಾಗಿದ್ದಾರೆ.

ತಾಲೂಕಿನಲ್ಲಿ ಹೆಚ್ಚಾಗಿ ರೈತರು ಹೂ ಬೆಳೆಗಳನ್ನು ಬೆಳೆದು ರಾಜ್ಯದ ನಾನಾ ಭಾಗಗಳು ಸೇರಿದಂತೆ ನೆರೆಯ ಆಂದ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳನ್ನು ರಫ್ತು ಮಾಡುತ್ತಾರೆ. ಆದರೆ ಹವಾಮಾನ ವೈಪರೀತ್ಯದಿಂದ ಹೂ ಬೆಳೆಗಳ ಇಳುವರಿ ಕುಸಿತವಾಗಿದೆ.

ಹೂವಿನ ಬೆಲೆ: ಮಾರುಕಟ್ಟೆಯಲ್ಲಿ ಕನಕಾಂಬರ 1 ಸಾವಿರ ರೂ, ಕಾಕಡ 800 ರೂ, ಚೆಂಡು ಹೂ 50 ರೂ, ಗುಲಾಬಿ 150 ರೂ, ಮಲ್ಲಿಗೆ ಹೂ 600 ರೂ.ವರೆಗೂ ಮಾರಾಟವಾಗುತ್ತಿದೆ.

ಇನ್ನೂ ಹಬ್ಬದ ವಸ್ತುಗಳಾದ ಕಬ್ಬು ಒಂದು ಜೋಡಿಗೆ 100 ರೂ, ಕಳ್ಳೆಕಾಯಿ 80 ರೂ, ಅವರೆಕಾಯಿ 50 ರೂ, ಗೆಡ್ಡೆಗೆಣಸು 60 ರೂ ಸೇರಿದಂತೆ ಹಣ್ಣುಗಳ ಬೆಲೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ