ಕೋಲಾರ: ಸಾವಿನ ಸವಾರಿ ಅಂದ್ರೆ ಬಹುಶಃ ಇದೇ ಇರಬೇಕು..! ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪ್ರಯಾಣಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜೀಪ್ಗಳಲ್ಲಿ ನೇತಾಡಿಕೊಂಡು ಪ್ರಯಾಣ ಮಾಡ್ತಿದ್ದಾರೆ..! ಶ್ರೀನಿವಾಸಪುರ ತಾಲೂಕು ಕಚೇರಿ ಹಾಗು ಶ್ರೀನಿವಾಸಪುರ ಪೊಲೀಸ್ ಠಾಣೆ ಎದುರೇ ಖಾಸಗಿ ಜೀಪ್ ಸ್ಟಾಂಡ್ ಇದ್ದು, ಶ್ರೀನಿವಾಸಪುರ ಪಟ್ಟಣದಿಂದಲೇ ಜನರನ್ನು ತುಂಬಿಸಿಕೊಂಡು ಆಂಧ್ರದ ಜೀಪ್ಗಳು ಓಡಾಡುತ್ತಿವೆ. ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ವೈಟ್ ಬೋರ್ಡ್ ಸಂಖ್ಯೆಯಿರೋ ಜೀಪ್ಗಳಲ್ಲಿ ಪ್ರಯಾಣಿಕರು ಸಂಚರಿಸಲು ಅನುಮತಿ ಇಲ್ಲದಿದ್ರೂ, ಸಂಬಂಧಪಟ್ಟ ಆರ್ಟಿಒ ಇಲಾಖೆಯ ಅಧಿಕಾರಿಗಳು ಮಾತ್ರ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನು ನಗರದಲ್ಲೇ ಇರುವ ಪೊಲೀಸರೂ ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ಶ್ರೀನಿವಾಸಪುರ ಪಟ್ಟಣದಿಂದ ಲಕ್ಷ್ಮೀಪುರ, ಮುದಿಮಡುಗು, ಗೌನಿಪಲ್ಲಿ, ರಾಯಲ್ಪಾಡು ಮಾರ್ಗದಲ್ಲಿ ಸಿಗುವ ಕೆಲ ಗ್ರಾಮಗಳಿಗೆ ಹೋಗಿ ಬರಲು ಇಲ್ಲಿನ ಜನರು ಆಂಧ್ರದ ಜೀಪ್ಗಳು ಹಾಗೂ ಮೂರು ಚಕ್ರದ ಆಟೋಗಳನ್ನೇ ಅವಲಂಬಿಸಿದ್ದಾರೆ.
ತೆರೆದ ವಾಹನಗಳಂತಿರೋ ಜೀಪ್ಗಳಲ್ಲಿ ಹಾಗೂ ಪ್ಯಾಸೆಂಜರ್ ಗಾಡಿಗಳಲ್ಲಿ ಪ್ರಾಣವನ್ನ ಲೆಕ್ಕಿಸದೆ ಜೀಪಿನ ಹಿಂಬಾಗಿಲು ಹಾಗೂ ಪುಟ್ ರೆಸ್ಟ್ಗಳ ಮೇಲೆ ಕಾಲನ್ನಿಟ್ಟು, ಲಗೇಜ್ ಸ್ಟಾಂಡ್ಗಳ ಮೇಲೆ ಕೈಯನ್ನಿಡಿದು ಸಂಚಾರ ಮಾಡ್ತಿದ್ದಾರೆ.
ಪ್ರತಿ ಜೀಪ್ಗಳಲ್ಲು 12ಕ್ಕೂ ಹೆಚ್ಚು ಜನರನ್ನ ತುಂಬಿಸಿಕೊಳ್ಳುವ ಚಾಲಕರು, ಅದೂ ಸಾಲದು ಎಂಬಂತೆ ಪ್ರಯಾಣಿಕರಿಗೆ ನಿಲ್ಲಲೂ ಅವಕಾಶ ಮಾಡಿಕೊಡ್ತಿದ್ದಾರೆ. ಅಪಘಾತಗಳೇನಾದ್ರೂ ಸಂಭವಿಸಿದರೆ ಆಗುವ ಹಾನಿಗೆ ಯಾರು ಹೊಣೆ ಎನ್ನುವ ಆತಂಕ ಜನರನ್ನು ಕಾಡ್ತಿದೆ. ಇಲ್ಲಿನ ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರು ಆರ್ಟಿಒ ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ವೈಟ್ ಬೋರ್ಡ್ ಸಂಖ್ಯೆಯಿರೋ ಜೀಪ್ಗಳಲ್ಲಿ ಪ್ರಯಾಣಿಕರು ಸಂಚರಿಸಲು ಅನುಮತಿ ಇಲ್ಲದಿದ್ರೂ, ಸಂಬಂಧಪಟ್ಟ ಆರ್ಟಿಒ ಇಲಾಖೆಯ ಅಧಿಕಾರಿಗಳು ಮಾತ್ರ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನು ನಗರದಲ್ಲೇ ಇರುವ ಪೊಲೀಸರೂ ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ಶ್ರೀನಿವಾಸಪುರ ಪಟ್ಟಣದಿಂದ ಲಕ್ಷ್ಮೀಪುರ, ಮುದಿಮಡುಗು, ಗೌನಿಪಲ್ಲಿ, ರಾಯಲ್ಪಾಡು ಮಾರ್ಗದಲ್ಲಿ ಸಿಗುವ ಕೆಲ ಗ್ರಾಮಗಳಿಗೆ ಹೋಗಿ ಬರಲು ಇಲ್ಲಿನ ಜನರು ಆಂಧ್ರದ ಜೀಪ್ಗಳು ಹಾಗೂ ಮೂರು ಚಕ್ರದ ಆಟೋಗಳನ್ನೇ ಅವಲಂಬಿಸಿದ್ದಾರೆ.
ತೆರೆದ ವಾಹನಗಳಂತಿರೋ ಜೀಪ್ಗಳಲ್ಲಿ ಹಾಗೂ ಪ್ಯಾಸೆಂಜರ್ ಗಾಡಿಗಳಲ್ಲಿ ಪ್ರಾಣವನ್ನ ಲೆಕ್ಕಿಸದೆ ಜೀಪಿನ ಹಿಂಬಾಗಿಲು ಹಾಗೂ ಪುಟ್ ರೆಸ್ಟ್ಗಳ ಮೇಲೆ ಕಾಲನ್ನಿಟ್ಟು, ಲಗೇಜ್ ಸ್ಟಾಂಡ್ಗಳ ಮೇಲೆ ಕೈಯನ್ನಿಡಿದು ಸಂಚಾರ ಮಾಡ್ತಿದ್ದಾರೆ.
ಪ್ರತಿ ಜೀಪ್ಗಳಲ್ಲು 12ಕ್ಕೂ ಹೆಚ್ಚು ಜನರನ್ನ ತುಂಬಿಸಿಕೊಳ್ಳುವ ಚಾಲಕರು, ಅದೂ ಸಾಲದು ಎಂಬಂತೆ ಪ್ರಯಾಣಿಕರಿಗೆ ನಿಲ್ಲಲೂ ಅವಕಾಶ ಮಾಡಿಕೊಡ್ತಿದ್ದಾರೆ. ಅಪಘಾತಗಳೇನಾದ್ರೂ ಸಂಭವಿಸಿದರೆ ಆಗುವ ಹಾನಿಗೆ ಯಾರು ಹೊಣೆ ಎನ್ನುವ ಆತಂಕ ಜನರನ್ನು ಕಾಡ್ತಿದೆ. ಇಲ್ಲಿನ ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರು ಆರ್ಟಿಒ ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.