ಆ್ಯಪ್ನಗರ

ಕೆಎಚ್‌ ಪ್ರಚಾರಕ್ಕೆ, ಮುನಿಸ್ವಾಮಿ ತೋಟಕ್ಕೆ

ಪ್ರಚಾರ, ಮತಬೇಟೆಯಲ್ಲಿ ಹಲವು ದಿನದಿಂದ ನಿರತರವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಿಬ್ಬರು ಎರಡನೆ ಹಂತದಲ್ಲಿ ನಡೆಯಲಿರುವ ಚುನಾವಣೆಯತ್ತ ಗಮನ ಹರಿಸಲು ಮುಂದಾಗುವ ಮೂಲಕ ಇನ್ನೂ ಚುನಾವಣಾ ಗುಂಗಿನಲ್ಲಿ ಇದ್ದಾರೆ.

Vijaya Karnataka 20 Apr 2019, 5:00 am
ಕೋಲಾರ : ಪ್ರಚಾರ, ಮತಬೇಟೆಯಲ್ಲಿ ಹಲವು ದಿನದಿಂದ ನಿರತರವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಿಬ್ಬರು ಎರಡನೆ ಹಂತದಲ್ಲಿ ನಡೆಯಲಿರುವ ಚುನಾವಣೆಯತ್ತ ಗಮನ ಹರಿಸಲು ಮುಂದಾಗುವ ಮೂಲಕ ಇನ್ನೂ ಚುನಾವಣಾ ಗುಂಗಿನಲ್ಲಿ ಇದ್ದಾರೆ.
Vijaya Karnataka Web prominent candidates from the kolar lok sabha constituency who had been voted in the polls for many day
ಕೆಎಚ್‌ ಪ್ರಚಾರಕ್ಕೆ, ಮುನಿಸ್ವಾಮಿ ತೋಟಕ್ಕೆ


ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಒಂದೆರಡು ತಿಂಗಳಿಂದ ಮತದಾರರ ಸೆಳೆಯುವಲ್ಲಿ ನಿರತರಾಗಿದ್ದವರು, ಈಗ ಎರಡನೆ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹೊರಟರು.

ಸ್ಟಾರ್‌ ಕ್ಯಾಂಪೇನರ್‌ ಆಗಿರುವ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಶುಕ್ರವಾರ ಬೆಳಗ್ಗೆ ರಾಯಚೂರಿಗೆ ತೆರಳಿದರು ಎಂಬ ಮಾಹಿತಿ ಲಭ್ಯವಾಗಿದೆ. ಸ್ವಪಕ್ಷೀಯರ ವಿರೋಧದ ನಡುವೆ ಚುನಾವಣೆ ಎದುರಿಸಿದ ಅವರು, ಈಗ ಎರಡನೇ ಹಂತದಲ್ಲಿ ರಾಜ್ಯದ ವಿವಿಧೆಡೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ತೆರಳಿದರು.

ತೋಟಕ್ಕೆ ಹೋಗಿ ಬಂದ್ರು ಮುನಿಸ್ವಾಮಿ: ಮತದಾನ ಮುಗಿದ ಮರುದಿನ ಶುಕ್ರವಾರ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಅವರು ತಮ್ಮ ತೋಟಕ್ಕೆ ಭೇಟಿ ನೀಡಿದ್ದರು.

ಕೋಲಾರದ ಗಾಂಧಿನಗರದಲ್ಲಿರುವ ತಮ್ಮ ತೋಟಕ್ಕೆ ಸುಮಾರು 45 ದಿಂದ ಭೇಟಿ ನೀಡಿರದ ಮುನಿಸ್ವಾಮಿ ಅವರು, ಶುಕ್ರವಾರ ಬೆಳ್ಳಂಬೆಳಗ್ಗೆ ಅಲ್ಲಿಗೆ ಹೋಗಿದ್ದರು. ಬೆಳೆದ ಟೊಮೇಟೊ ನೋಡಿ ಕೆಲಕಾಲ ಅಲ್ಲಿ ಉಳಿದು ವಾಪಸ್ಸಾದರು. ಬಳಿಕ ಕೋಲಾರ ಪದವಿ ಕಾಲೇಜಿನ ಸ್ಟ್ರಾಂಗ್‌ ರೂಮ್‌ಗೆ ಸೀಲ್‌ ಮಾಡುವಲ್ಲಿ ನಿರತರಾಗಿದ್ದ ಅಧಿಕಾರಿಗಳ ಜತೆಗೂಡಿದರು.

ಮಧ್ಯಾಹ್ನ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದ ಅವರು, ''ಕೋಲಾರ ನನ್ನ ಕರ್ಮ, ಜನ್ಮ ಭೂಮಿ. ಇಲ್ಲೇ ಇರುತ್ತೇನೆ. ಚುನಾವಣೆಯಾಗಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈಗ 2ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ ಇನ್ನಿತರೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಲಿದ್ದೇನೆ. ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಸಾಧ್ಯವಾಗುವ ಕೆಲಸದಲ್ಲಿ ನಿರತನಾಗುತ್ತೇನೆ,'' ಎಂದು ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ