ಆ್ಯಪ್ನಗರ

ಕೃಷಿಗೆ ಸಂಬಂಧಿಸಿದ ಕೆಲಸ ತ್ವರಿತ ಮಾಡಿಕೊಡಿ

ಸರಕಾರದಿಂದ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ರೈತರು ಕೃಷಿ ಕಚೇರಿಗೆ ಬಂದಾಗ ಅವರ ಕೆಲಸಗಳನ್ನು ಬೇಗ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿಯವರಿಗೆ ಸೂಚಿಸಿದರು.

Vijaya Karnataka 19 Feb 2019, 5:00 am
ಮುಳಬಾಗಲು: ಸರಕಾರದಿಂದ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ರೈತರು ಕೃಷಿ ಕಚೇರಿಗೆ ಬಂದಾಗ ಅವರ ಕೆಲಸಗಳನ್ನು ಬೇಗ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿಯವರಿಗೆ ಸೂಚಿಸಿದರು.
Vijaya Karnataka Web quickly work on agriculture
ಕೃಷಿಗೆ ಸಂಬಂಧಿಸಿದ ಕೆಲಸ ತ್ವರಿತ ಮಾಡಿಕೊಡಿ


ನಗರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ ರೇಟಾ ವೇಟರ್‌, ಕಲ್ಟಿವೇಟರ್‌ ಯಂತ್ರಗಳನ್ನು ವಿನಾಯಿತಿ ದರದಲ್ಲಿ ವಿತರಿಸಿ ಮಾತನಾಡಿ, ರೈತರು ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂದು ಕರೆ ನೀಡಿದರಲ್ಲದೆ ದಾಳ್ಳಾಲಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದೇ ನೇರವಾಗಿ ಇಲಾಖಾಧಿಕಾರಿಗಳನ್ನು ಭೇಟಿ ಮಾಡಿ ಸವಲತ್ತು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ರೈತರನ್ನು ಪದೇ ಪದೆ ತಿರುಗಾಡಿಸಬಾರದು. ಸಕಾಲಕ್ಕೆ ರೈತರ ಕೆಲಸ ಮಾಡಿಕೊಡಬೇಕೆಂದು ಅದಿಕಾರಿಗಳಿಗೆ ಮೌಖಿಕವಾಗಿ ತಾ.ಪಂ ಅಧ್ಯಕ್ಷ ರು ಆದೇಶಿಸಿದಲ್ಲದೆ ಡ್ರಿಪ್‌ಇರಿಗೇಷನ್‌ ಮತ್ತು ಕೃಷಿಹೊಂಡ ಟಾರ್ಪಲ್‌ ಸಲಕರಣೆಗಳನ್ನು ಹೆಚ್ಚಾಗಿ ತರಿಸಿ ರೈತರಿಗೆ ಕೊರೆತೆಯಿಲ್ಲದೆ ನೀಡಬೇಕು. ಎಸ್ಸಿ, ಎಸ್ಟಿ ಫಲಾನುಭವಿ 13,500 ರೂ ಹಾಗೂ ಸಾಮಾನ್ಯ ವರ್ಗದವರು 40,000 ಕಟ್ಟಿದರೆ 69 ಸಾವಿರ ಬೆಲೆಯ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಕೃಷಿ ಅಧಿಕಾರಿ ಶುಭಾ, ಮುಖಂಡರಾದ ಕಗ್ಗಿನಹಳ್ಳಿ ಶಂಕರ್‌ ರೆಡ್ಡಿ, ಕುನಿಬಂಡೆ ವೆಂಕಟ್ರಾಮ್‌, ಹೆಬ್ಬಣಿ ಶಂಕರ್‌ ರೆಡ್ಡಿ, ತಾಯಲೂರು ಸುರೇಶ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ