ಆ್ಯಪ್ನಗರ

ಟೇಕಲ್‌ ಸುತ್ತಮುತ್ತ ಬಿರುಗಾಳಿ ಮಳೆ

ಟೇಕಲ್‌ನಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಗುಡುಗು ಮಿಂಚಿನ ಮಳೆಗೆ ತೋಟಗಾರಿಕೆ ಬೆಳೆ ಸೇರಿದಂತೆ ಕೆಲವು ಮನೆಗಳ ಚಾವಣಿ, ನರ್ಸರಿ ಫಾರಂ, ವಿದ್ಯುತ್‌ ಕಂಬ, ಮರಗಳು ನೆಲಕ್ಕೆ ಉರುಳಿದ್ದು, ಗಾಳಿ, ಗುಡುಗು ಅರ್ಭಟಕ್ಕೆ ಜನತೆ ತಲ್ಲಣಗೊಂಡಿದ್ದಾರೆ.

Vijaya Karnataka 31 May 2019, 5:00 am
ಟೇಕಲ್‌: ಟೇಕಲ್‌ನಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಗುಡುಗು ಮಿಂಚಿನ ಮಳೆಗೆ ತೋಟಗಾರಿಕೆ ಬೆಳೆ ಸೇರಿದಂತೆ ಕೆಲವು ಮನೆಗಳ ಚಾವಣಿ, ನರ್ಸರಿ ಫಾರಂ, ವಿದ್ಯುತ್‌ ಕಂಬ, ಮರಗಳು ನೆಲಕ್ಕೆ ಉರುಳಿದ್ದು, ಗಾಳಿ, ಗುಡುಗು ಅರ್ಭಟಕ್ಕೆ ಜನತೆ ತಲ್ಲಣಗೊಂಡಿದ್ದಾರೆ.
Vijaya Karnataka Web rain in several parts of takel
ಟೇಕಲ್‌ ಸುತ್ತಮುತ್ತ ಬಿರುಗಾಳಿ ಮಳೆ


ಬುಧವಾರ ಸಂಜೆ 6.30 ನಂತರ ಪ್ರಾರಂಭಗೊಂಡ ಗಾಳಿ ಗುಡುಗು ಮಿಂಚು ಆರ್ಭಟಕ್ಕೆ ಟೇಕಲ್‌ನ ಸೋಮಸಂದ್ರ ಗ್ರಾಮದ ಜುಂಜಪ್ಪನ ಶೀಟ್‌ ಮನೆಯ ಎಲ್ಲಾ ಶೀಟುಗಳು ಗಾಳಿಗೆ ತೂರಿ ಹೋಗಿದ್ದು ಕುಟುಂಬದವರಿಗೆ ಯಾವುದೇ ಹಾನಿಯಾಗಿಲ್ಲ.

ಟೇಕಲ್‌ನ ಕೊಮ್ಮನಹಳ್ಳಿ ರಸ್ತೆ ಬಳಿ ಭಾರಿ ಗಾತ್ರದ ಮರವೊಂದು ರಾತ್ರಿ ಗಾಳಿಗೆ ಬಿದ್ದಿದ್ದು ಸಂಚಾರಕ್ಕೆ ಸ್ವಲ್ಪ ಸಮಯ ಅಡ್ಡಿಯಾಗಿತ್ತು. ತದನಂತರ ಅದನ್ನು ಸ್ಥಳಾಂತರಿಸಲಾಯಿತು. ಕೆ.ಜಿ.ಹಳ್ಳಿಯ ಬೆಸ್ಕಾಂ ಕಚೇರಿ ಮುಂಭಾಗವಿದ್ದ ಭಾರಿ ಗಾತ್ರ ಮರವು ಉರುಳಿ ಬಿದ್ದಿದ್ದು, ಸ್ವಲ್ಪ ಅಂತರದಲ್ಲಿ ಪ್ರಮಾದ ತಪ್ಪಿದೆ ಏಕೆಂದರೆ ಅಲ್ಲಿ ಟ್ರಾನ್ಸ್‌ಫಾರ್ಮರ್‌ ಇತ್ತು.

ಚಿಕ್ಕನಾಯಕನಹಳ್ಳಿಯ ಮುನಿರಾಜು, ಮುನಿಸ್ವಾಮಪ್ಪ ಮನೆಗಳ ಚಾವಣಿಗೆ ಧಕ್ಕೆಯಾಗಿದೆ. ವೀರಕಪುತ್ರ ಗ್ರಾಮದಲ್ಲಿ ರೈತ ಚಂದ್ರಶೇಖರಗೆ ಸೇರಿದ 2 ಎಕರೆ ತೋಟಗಾರಿಕೆ ಬೆಳೆಗಳಾದ ಟಪಮೇಟೊ, ಕ್ಯಾಪ್ಸಿಕಮ್‌ ಗಾಳಿ ಮತ್ತು ಆಲಿಕಲ್ಲುಗಳಿಗೆ ನಷ್ಟವಾಗಿದೆ. ಇದೇ ರೈತನ ನರ್ಸರಿ ಫಾರಂ ಗಾಳಿಗೆ ತೂರಿಹೋಗಿದ್ದು ಟೊಮೇಟೊ, ಕೋಸು, ಹೂಕೋಸು, ಚೆಂಡುಹೂವಿನ ನಾರು ಬಹುತೇಕ ನಷ್ಟ ಸಂಭವಿಸಿದೆ. ಅಂದಾಜು 4 ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ರೈತ ಚಂದ್ರಶೇಖರ ತಿಳಿಸಿದ್ದಾರೆ.

ಟೇಕಲ್‌ನ ಬಹುತೇಕ ಹಳ್ಳಿಗಳಲ್ಲಿ ಗಾಳಿಯಿಂದ ಅನೇಕ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ಇನ್ನೂ ಕೆಲವು ಕಡೆ ಮರಗಳು ಕಂಬಗಳಿಗೆ ಅಡಚಣೆ ನೀಡುತ್ತಿದ್ದು ಇಲಾಖೆ ನೌಕರರು ಲೈನ್‌ಮನ್‌ಗಳು ರಾತ್ರಿ ಹಗಲು ಎನ್ನದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಕಡೆ ಕರೆಂಟ್‌ ಇದ್ದರೆ ಇನ್ನೂ ಕೆಲವು ಕಡೆ ಕರೆಂಟ್‌ ಇಲ್ಲ, ಇನ್ನೂ ಇಲಾಖೆಯಿಂದ ಅತಿ ತ್ವರಿತವಾಗಿ ಕಂಬಗಳು ನೀಡುವುದು ಸುಲಭದ ಮಾತಲ್ಲ. ಆದರೂ ವಿದ್ಯುತ್‌ ಇಲಾಖೆ ಪ್ರಯಾಸ ಪಡುತ್ತಿದೆ.

ಆರೋಪ: ಕಳೆದ ನಾಲ್ಕೈದು ದಿನಗಳಿಂದ ಗಾಳಿ, ಮಳೆಯಿಂದ ಜನ ತತ್ತರಿಸಿ ಹೋಗಿದ್ದರು. ಕೆಲವು ಕಡೆ ಅವಘಡಗಳು ಸಂಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿಗಳೂ ಸ್ಥಳ ಭೇಟಿ ನೀಡಿಲ್ಲ. ಇನ್ನೂ ಜನಪ್ರತಿನಿಧಿಗಳು ಇತ್ತ ಗಮನವೇ ಹರಿಸಿಲ್ಲವೆಂದು ನೊಂದ ಜನ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ