ಆ್ಯಪ್ನಗರ

ಅಂತರ್ಜಲ ಕುಸಿತ: ನೀರಿನ ಮಿತ ಬಳಕೆಗೆ ಸಲಹೆ

ಸಕಾಲಕ್ಕೆ ಮಳೆಯಾಗದ ಕಾರಣ ಕೆರೆ ಕುಂಟೆಗಳು ಬತ್ತಿ ಹೋಗಿದ್ದು ಅಂತರ್ಜಲಮಟ್ಟ ಕುಸಿದಿರುವುದರಿಂದ ಲಭ್ಯವಿರುವ ನೀರನ್ನು ವ್ಯರ್ಥಮಾಡದೇ ಜನತೆ ಮಿತವಾಗಿ ಬಳಕೆ ಮಾಡುವಂತೆ ದುಗ್ಗಸಂದ್ರ ಕ್ಷೇತ್ರದ ಜಿಪಂ ಸದಸ್ಯ ಉತ್ತನೂರು ಅರವಿಂದ್‌ ಮನವಿ ಮಾಡಿದರು.

Vijaya Karnataka 15 Jan 2019, 5:00 am
ಮುಳಬಾಗಲು: ಸಕಾಲಕ್ಕೆ ಮಳೆಯಾಗದ ಕಾರಣ ಕೆರೆ ಕುಂಟೆಗಳು ಬತ್ತಿ ಹೋಗಿದ್ದು ಅಂತರ್ಜಲಮಟ್ಟ ಕುಸಿದಿರುವುದರಿಂದ ಲಭ್ಯವಿರುವ ನೀರನ್ನು ವ್ಯರ್ಥಮಾಡದೇ ಜನತೆ ಮಿತವಾಗಿ ಬಳಕೆ ಮಾಡುವಂತೆ ದುಗ್ಗಸಂದ್ರ ಕ್ಷೇತ್ರದ ಜಿಪಂ ಸದಸ್ಯ ಉತ್ತನೂರು ಅರವಿಂದ್‌ ಮನವಿ ಮಾಡಿದರು.
Vijaya Karnataka Web recommended for moderate use of water
ಅಂತರ್ಜಲ ಕುಸಿತ: ನೀರಿನ ಮಿತ ಬಳಕೆಗೆ ಸಲಹೆ


ಅಗರ ಗ್ರಾಪಂ ವ್ಯಾಪ್ತಿಯ ಕೆ.ಹೊಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗುಜ್ಜನಹಳ್ಳಿ ಕೆರೆಯಲ್ಲಿ ಜಿಪಂ ಅನುದಾನದಲ್ಲಿ ಕೊರೆದಿರುವ ಕೊಳವೆ ಬಾವಿಗೆ ಪಂಪು ಮೋಟಾರ್‌ ಅಳವಡಿಕೆಯ 5ಲಕ್ಷ ರೂ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಅಂತರ್ಜಲ ಮಟ್ಟದ ಕುಸಿತದಿಂದ ಕೆಲ ಕಡೆಗಳಲ್ಲಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಕೆಲ ದಿನಗಳಲ್ಲಿ ನೀರು ಬರುವುದಿಲ್ಲ. ಇದರಿಂದ ಸುಮಾರು ಕಿಮೀ ದೂರದಲ್ಲಿ ನೀರು ಲಭ್ಯವಿರುವ ಕಡೆ ಕೊಳವೆಬಾವಿ ಕೊರೆಯಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಇವೆಲ್ಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಜನರು ನೀರನ್ನು ಪೋಲು ಮಾಡಬಾರದು ಎಂದರು.

ದುಗ್ಗಸಂದ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು ಕಾಡಿನಲ್ಲಿ ನೀರು ಇಲ್ಲದ ಕಾರಣ ಕಾಡು ಪ್ರಾಣಿಗಳು ನಾಡಿಗೆ ಬಂದು ನಾಯಿಗಳ ದಾಳಿಗೆ ಹಾಗೂ ವಾಹನಗಳ ಅಪಘಾತಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿವೆ. ಇನ್ನೇನು ಮುಂದಿನ ದಿನಗಳಲ್ಲಿ ಬೇಸಿಗೆ ಪ್ರಾರಂಭವಾಗಲಿದ್ದು ಪ್ರಾಣಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತೊಟ್ಟಿಗಳನ್ನು ನಿರ್ಮಾಣ ಮಾಡಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೊಲದೇವಿ ಉಮಾಶಂಕರ್‌, ಉತ್ತನೂರು ವಿಎಸ್‌ಎಸ್‌ಎನ್‌ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್‌, ಗುತ್ತಿಗೆದಾರ ಚಿಕ್ಕನಹಳ್ಳಿ ಶಿವರಾಜ್‌, ಶಶಿಕುಮಾರಗೌಡ, ಕೆ.ಎನ್‌.ಅಂಬರೀಷ್‌, ಮೌಲಾಸಾಬ್‌, ಕೆ.ಹೊಸಹಳ್ಳಿ ಗ್ರಾಮದ ವೆಂಕಟರವಣಪ್ಪ, ರಾಮಚಂದ್ರ, ಶಿವಣ್ಣ, ಡೇರಿ ಅಧ್ಯಕ್ಷ ವೆಂಕಟೇಶಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ