ಆ್ಯಪ್ನಗರ

ಕೆಸಿ ವ್ಯಾಲಿ ನೀರು ಕೋಲಾರ ಸುತ್ತಲಿನ ಕೆರೆಗಳಿಗೆ ಹರಿಸದಂತೆ ಮನವಿ

ಕೆಸಿ ವ್ಯಾಲಿ ನೀರನ್ನು ಕೋಲಾರದ ಮಡೇರಹಳ್ಳಿ, ಅಮ್ಮೇರಹಳ್ಳಿ ಹಾಗೂ ಕೋಲಾರ ಅಮಾನಿಕೆರೆಗೆ ಹರಿಸದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 21 Oct 2019, 2:52 pm
ಕೋಲಾರ: ಕೆಸಿ ವ್ಯಾಲಿ ನೀರನ್ನು ಕೋಲಾರದ ಮಡೇರಹಳ್ಳಿ, ಅಮ್ಮೇರಹಳ್ಳಿ ಹಾಗೂ ಕೋಲಾರ ಅಮಾನಿಕೆರೆಗೆ ಹರಿಸದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web request kc valley water not to drain into the surrounding lakeskolar news kannada news
ಕೆಸಿ ವ್ಯಾಲಿ ನೀರು ಕೋಲಾರ ಸುತ್ತಲಿನ ಕೆರೆಗಳಿಗೆ ಹರಿಸದಂತೆ ಮನವಿ

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಕೆ.ಸಿ.ವ್ಯಾಲಿ ಕಲುಷಿತ ನೀರು ಕೇವಲ ಅಂತರ್ಜಲವನ್ನು ಅಭಿವೃದ್ಧಿಪಡಿಸಲು ಕೊಟ್ಟಿರುವ ಒಂದು ಯೋಜನೆಯಾಗಿದೆ. ಈಗಾಗಲೆ ಈ ನೀರನ್ನು ಮೂರು ಬಾರಿ ಶುದ್ದೀಕರಣಗೊಳಿಸಿ ಕೆರೆಗಳಿಗೆ ಹರಿಸಲು ಸುಮಾರು ಹೋರಾಟಗಳು ಹಾಗೂ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು.
ಆದರೂ ಸಹ ಕೇವಲ ಎರಡು ಬಾರಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿದ್ದಾರೆ. ಆದರೆ ಈ ನೀರು ಕುಡಿಯುಲು ಯೋಗ್ಯವಿಲ್ಲ. ಸುಮಾರು ವರ್ಷಗಳಿಂದ ಕೋಲಾರ ನಗರದ ಬಹುತೇಕ ಜನರು ಕುಡಿಯುವ ನೀರಿಗಾಗಿ ಮಡೇರಹಳ್ಳಿ ಅಮ್ಮೇರಹಳ್ಳಿ, ಕೋಲಾರಮ್ಮ ಕೆರೆಗಳನ್ನು ಅವಲಂಬಿಸಿದ್ದಾರೆ.
ಈಗಾಗಲೇ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಗಳಲ್ಲಿನೀರಿಲ್ಲದೆ ನಗರದ ಜನ ಪರದಾಡುತ್ತಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ಈ ಮೇಲಿನ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರನ್ನು ಹರಿಸಲು ಮುಂದಾಗಿರುವುದರಿಂದ ನಗರಸಭೆಯವರು ಕೆರೆಗಳಲ್ಲಿಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನು ಕೊರೆಸಿ, ಅದರಿಂದ ನಗರದ ಜನತೆಗೆ ನೀರನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಒಂದು ವೇಳೆ ಕೆ.ಸಿ.ವ್ಯಾಲಿ ನೀರು ಮೇಲ್ಕಂಡ ಕೆರೆಗಳಿಗೆ ಹರಿಸಿದರೆ ಕುಡಿಯುವ ನೀರಿಗಾಗಿ ಹಾಕಿರುವ ಬೋರ್‌ವೆಲ್‌ಗಳು ಸಹ ಕಲುಷಿತಗೊಂಡು ಆ ನೀರು ಬಳಕೆ ಮಾಡಿದರೆ ಚರ್ಮರೋಗ ಮತ್ತು ಅನೇಕ ರೋಗಗಳು ಹರಡುವ ಸಂಭವವಿದೆ ಎಂದು ಮನವಿಯಲ್ಲಿತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಜೆ.ಮಂಜುನಾಥ್‌, ಮೂರು ಕೆರೆಗಳು ತುಂಬಲು 20 ಎಂ.ಎಲ್‌.ಡಿ ನೀರು ಅವಶ್ಯಕವಿದ್ದು, ಮೂರು ಬಾರಿ ಶುದ್ದೀಕರಿಸುವ ಎಸ್‌.ಟಿ.ಪಿ.ಯನ್ನು ಅಳವಡಿಸಲು ಸಚಿವರು, ಸಂಸದರು ಮತ್ತು ಶಾಸಕರ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯ ತನಕ ಈ ಕೆರೆಗಳಿಗೆ ಹರಿಸುವ ನೀರನ್ನು ನಿಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿಹೊಳಲಿ ಪ್ರಕಾಶ್‌, ಕುರುಬರಪೇಟೆ ವೆಂಕಟೇಶ್‌, ಅಹಿಂದ ಮಂಜುನಾಥ್‌, ಚಿನ್ನಿ ಶ್ರೀನಿವಾಸ್‌, ಚಂಬೇ ರಾಜೇಶ್‌, ಎಂ.ಆರ್‌. ಚೇನತ್‌ಬಾಬು, ದಲಿತ್‌ ನಾರಾಯಣಸ್ವಾಮಿ, ಖಾದ್ರಿಪುರ ಬಾಬು, ಕರುನಾಡ ಸೇನೆಯ ಅನಿಲ್‌, ಕಲ್ಯಾಣ್‌, ಕನ್ನಡ ಪ್ರಕಾಶ್‌, ಕರವೇ ಸೊಮಣ್ಣ, ಕನ್ನಡಸೇನೆ ನಟರಾಜ್‌, ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ