ಆ್ಯಪ್ನಗರ

ರಾಯಲ್ಪಾಡು ಪಿಎಸ್‌ಐ ಪಕ್ಷ ಪಾತ ಧೋರಣೆ ಆರೋಪ

ಜಿಲ್ಲೆಯ ರಾಯಲ್ಪಾಡು ಪೊಲೀಸ್‌ ಠಾಣೆಯ ಪಿಎಸ್‌ಐ ಎಂ.ಆರ್‌.ನಟರಾಜ್‌ ಬೇಜವಾಬ್ದಾರಿ ಮತ್ತು ಪಕ್ಷ ಪಾತ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಿ, ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕೆಪಿಆರ್‌ಎಸ್‌ ಜಿಲ್ಲಾ ಸಮಿತಿಯಿಂದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 15 Jan 2019, 5:00 am
ಕೋಲಾರ : ಜಿಲ್ಲೆಯ ರಾಯಲ್ಪಾಡು ಪೊಲೀಸ್‌ ಠಾಣೆಯ ಪಿಎಸ್‌ಐ ಎಂ.ಆರ್‌.ನಟರಾಜ್‌ ಬೇಜವಾಬ್ದಾರಿ ಮತ್ತು ಪಕ್ಷ ಪಾತ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಿ, ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕೆಪಿಆರ್‌ಎಸ್‌ ಜಿಲ್ಲಾ ಸಮಿತಿಯಿಂದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web royalpad is accused of misconduct by the psi
ರಾಯಲ್ಪಾಡು ಪಿಎಸ್‌ಐ ಪಕ್ಷ ಪಾತ ಧೋರಣೆ ಆರೋಪ


ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಯಲ್ಪಾಡು ಠಾಣೆಗೆ ಪಿಎಸ್‌ಐ ನಟರಾಜ್‌ ಅವರು ಬಂದಾಗಿನಿಂದಲೂ ಸರಿಯಾಗಿ ಅಧಿಕಾರ ನಡೆಸದೆ ದರ್ಪದಿಂದ ವರ್ತಿಸುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಜನಸಾಮಾನ್ಯರು ಠಾಣೆಗೆ ಹೋದರೆ ನ್ಯಾಯ ಕೊಡಿಸಬೇಕಾದ ಪಿಎಸ್‌ಐ ನಟರಾಜ್‌ ಬಲಾಢ್ಯರ ಪರವಾಗಿ ನಿಂತು ಅಮಾಯಕರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುತ್ತಾರೆ. ದೂರು ನೀಡಲು ಬಂದವರೊಂದಿಗೆ ಸೌಜನ್ಯವಾಗಿ ಮಾತನಾಡದೆ, ಗೂಂಡಾ ಕಾಯಿದೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತೇವೆಂದು ಕೊಡುವರಿಗೆ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.

ಠಾಣೆಯಲ್ಲಿ ಅಮಾಯಕರಿಗೆ ಒಂದು ರೀತಿಯ ಕಾನೂನುಗಳನ್ನು ಪಾಲಿಸುತ್ತಾರೆ. ಇನ್ನು ಶ್ರೀಮಂತ ವ್ಯಕ್ತಿಗಳಿಗೆ ಒಂದು ರೀತಿಯ ಕಾನೂನು ಪಾಲಿಸುವ ಬೇಜವಾಬ್ದಾರಿ ಪಿಎಸ್‌ಐರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 2017 ರಲ್ಲಿ ರಾಯಲ್ಪಾಡು ಠಾಣೆ ವ್ಯಾಪ್ತಿಯ ಬುರ್ರಕಾಯಲಕೋಟೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದವರ ಮೇಲೆ ಚಾರ್ಜ್‌ಶೀಟ್‌ ಹಾಕದೇ ಹಲ್ಲೆಯಾದವರ ಮೇಲೆ ಅದರಲ್ಲಿಯೂ ಅಂದು ಗ್ರಾಮದಲ್ಲಿಯೇ ಇರದವರನ್ನು ಆರೋಪಿ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ದೂರಿದರು.

ಇಂತಹ ಸಾಕಷ್ಟು ಪ್ರಕರಣಗಳಲ್ಲಿ ಬಡವರಿಗೆ ತೊಂದರೆ ನೀಡಿರುವ ಪಿಎಸ್‌ಐ ಅವರನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಪಟ್ಟುಹಿಡಿದರು.

ಸಿಪಿಎಂ ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಕೆಪಿಆರ್‌ಎಸ್‌ ಜಿಲ್ಲಾ ಅಧ್ಯಕ್ಷ ಪಿ.ಆರ್‌ ಸೂರ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌, ಜಿಲ್ಲಾ ಮುಖಂಡರಾದ ಪಿ.ಶ್ರೀನಿವಾಸ್‌, ಪಾತಕೋಟೆ ನವೀನ್‌ ಕುಮಾರ್‌, ಪಿ.ಆರ್‌.ಶಂಕರ್‌, ಎನ್‌.ಎನ್‌.ಶ್ರೀರಾಮ್‌, ವಿ.ನಾರಾಯಣರೆಡ್ಡಿ, ಟಿ.ಕೃಷ್ಣೇಗೌಡ ಎನ್‌.ವೀರಪ್ಪ ರೆಡ್ಡಿ ಮುಂತಾದವರು ವಹಿಸಿದ್ದರು.

ಜ.16ಕ್ಕೆ ಠಾಣೆಯಲ್ಲೇ ಸಭೆ: ಎಸ್ಪಿ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್‌ ಸಪೆಟ್‌ ಮನವಿ ಸ್ವೀಕರಿಸಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಮಾತನಾಡಲು ಸಂಘಟನೆಯ ಪ್ರಮುಖರ ಮತ್ತು ಗ್ರಾಮಸ್ಥರ ಸಭೆಯನ್ನು ಜ.16 ರಂದು ಠಾಣೆಯಲ್ಲೇ ಸಭೆ ಕರೆಯಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ