ಆ್ಯಪ್ನಗರ

ಖಾತೆ ಬದಲಾವಣೆಗೆ 1300 ರೂ. ಲಂಚ ಕೇಳಿದ್ದ ಪ್ರಕರಣ; ನಾಡಕಚೇರಿ ಸಿಬ್ಬಂದಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು

ಖಾತೆ ಬದಲಾವಣೆ ಮಾಡಿಕೊಡಲು 1,300 ರೂ. ಲಂಚ ಕೇಳಿದ್ದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧನಕ್ಕೊಳಗಾಗಿರುವ ಕೋಲಾರದ ನಾಡ ಕಚೇರಿಯ ಸಿಬ್ಬಂದಿಯೊಬ್ಬನಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Vijaya Karnataka 19 Feb 2019, 5:00 am
ಬೆಂಗಳೂರು : ಖಾತೆ ಬದಲಾವಣೆ ಮಾಡಿಕೊಡಲು 1,300 ರೂ. ಲಂಚ ಕೇಳಿದ್ದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧನಕ್ಕೊಳಗಾಗಿರುವ ಕೋಲಾರದ ನಾಡ ಕಚೇರಿಯ ಸಿಬ್ಬಂದಿಯೊಬ್ಬನಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Vijaya Karnataka Web rs 1300 for account change court issues bail to nadakchari staff
ಖಾತೆ ಬದಲಾವಣೆಗೆ 1300 ರೂ. ಲಂಚ ಕೇಳಿದ್ದ ಪ್ರಕರಣ; ನಾಡಕಚೇರಿ ಸಿಬ್ಬಂದಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು


ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಏಕಸದಸ್ಯಪೀಠ ಹುತ್ತೂರು ಹೋಬಳಿಯ ನಾಡ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಟಿ.ಸಿ. ರೇಣುಕಾಂಬ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದೆ.

ಆರೋಪಿಗೆ 2 ಲಕ್ಷ ಬಾಂಡ್‌, ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಒದಗಿಸಬೇಕು, ಸಾಕ್ಷ್ಯ ನಾಶಪಡಿಬಾರದು ಮತ್ತು ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಪ್ರತಿ 15 ದಿನಗಳಿಗೊಮ್ಮೆ ಕೋಲಾರದ ಎಸಿಬಿ ಕಚೇರಿಗೆ ತೆರಳಿ ಸಹಿ ಹಾಕಬೇಕು. ಅಧೀನ ನ್ಯಾಯಾಲಯದ ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಲಾಗಿದೆ.

ಕೋಲಾರದ ಹುತ್ತೂರು ಹೋಬಳಿಯ ನಾಡ ಕಚೇರಿಗೆ ತೆರಳಿದ್ದ ವೇಳೆ, ಅಲ್ಲಿ ಕಂಪ್ಯೂಟರ್‌ ಆಪರೇಟರ್‌ ರೇಣುಕಾಂಬ ಖಾತೆ ಬದಲಾವಣೆ ಕುರಿತ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ತುಂಬಲು 1,300 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ವ್ಯಕ್ತಿಯೊಬ್ಬರು 2018ರ ಡಿ. 20ರಂದು ಎಸಿಬಿಗೆ ದೂರು ನೀಡಿದ್ದರು. ಮರುದಿನ ದೂರುದಾರರಿಂದ ಹಣ ಪಡೆಯುವ ವೇಳೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ರೇಣುಕಾಂಬ ಅವರನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ