ಆ್ಯಪ್ನಗರ

ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪಗೆ ಎಸ್‌.ಮುನಿಸ್ವಾಮಿ ಟಾಂಗ್‌

ನನ್ನದು ಚಿಲ್ಲರೆ ರಾಜಕಾರಣವಲ್ಲ, ಅಂತಹ ಮಾತುಗಳು ಅವರ ಹಿರಿತನಕ್ಕೆ ಶೋಭೆ ತರೋದಿಲ್ಲ, ಈಗಾಗಲೇ ಚುನಾವಣೆಯಲ್ಲಿಜನತೆ ಯಾರು ಚಿಲ್ಲರೆ ರಾಜಕಾರಣಿಗಳು ಎಂದು ನಿರ್ಧರಿಸಿಬಿಟ್ಟಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಮಾಜಿ ಸಂಸದ ಕೆ.ಎಚ್‌.ಎಂ.ಗೆ ಟಾಂಗ್‌ ನೀಡಿದರು.

Vijaya Karnataka 18 Sep 2019, 3:48 pm
ಕೋಲಾರ: ನನ್ನದು ಚಿಲ್ಲರೆ ರಾಜಕಾರಣವಲ್ಲ, ಅಂತಹ ಮಾತುಗಳು ಅವರ ಹಿರಿತನಕ್ಕೆ ಶೋಭೆ ತರೋದಿಲ್ಲ, ಈಗಾಗಲೇ ಚುನಾವಣೆಯಲ್ಲಿಜನತೆ ಯಾರು ಚಿಲ್ಲರೆ ರಾಜಕಾರಣಿಗಳು ಎಂದು ನಿರ್ಧರಿಸಿಬಿಟ್ಟಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಮಾಜಿ ಸಂಸದ ಕೆ.ಎಚ್‌.ಎಂ.ಗೆ ಟಾಂಗ್‌ ನೀಡಿದರು.
Vijaya Karnataka Web s muniswamy tong for former mp kh muniyappa
ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪಗೆ ಎಸ್‌.ಮುನಿಸ್ವಾಮಿ ಟಾಂಗ್‌


ನಗರದಲ್ಲಿಪ್ರಧಾನಿ ನರೇಂದ್ರಮೋದಿಯವರ ಹುಟ್ಟುಹಬ್ಬದ ಅಂಗವಾಗಿ ನಡೆದ ಶ್ರಮದಾನದಲ್ಲಿಪಾಲ್ಗೊಂಡ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ನಾನೆಂದೂ ಸಂಸದನೆಂಬ ಕಿರೀಟವಿಟ್ಟುಕೊಂಡು ಕ್ಷೇತ್ರದಲ್ಲಿಓಡಾಡಿಕೊಂಡು ಅನ್ಯಾಯ ಮಾಡಿಲ್ಲ, ಇಲ್ಲಿಮತನೀಡಿದವರ ಋುಣ ತೀರಿಸುವ ಬದ್ಧತೆಯಿಂದ ಕೆಲಸ ಮಾಡುತ್ತೇನೆ, ಕೋಲಾರದ ಬಗ್ಗೆ ನಿಜಕ್ಕೂ ಮುನಿಯಪ್ಪ ಅವರಿಗೆ ಕಾಳಜಿ ಇದ್ದರೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಲಿ ಸ್ವೀಕರಿಸುವೆ ಎಂದು ಹೇಳಿದರು.

ನಾನು ಸಂಸದ, ಸಾಮಾನ್ಯ ಪ್ರಜೆಯಾಗಿಯೂ ಕೆಲಸ ಮಾಡಲು ಸಿದ್ಧ ಆದರೆ ಜನತೆ 28 ವರ್ಷ ಮತ ಹಾಕಿ ಅಧಿಕಾರ ನೀಡಿದಾಗ ಅವರೇನು ಮಾಡಿದರು ಎಂಬುದನ್ನು ಮೊದಲು ಹೇಳಿಕೊಳ್ಳಲಿ.

ಕೋಲಾರ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ, ಅವರ ಋುಣ ತೀರಿಸಲು ಕೆಲಸ ಮಾಡುವೆ ಅವರಿಗೆ ಜನ 28 ವರ್ಷ ಆಶೀರ್ವಾದ ಮಾಡಿದ್ದರಲ್ಲವೇ ಆಗ ಕೋಲಾರಕ್ಕೇನು ಮಾಡಿದರು ಎಂದು ಹೇಳಲಿ ಎಂದು ಸವಾಲು ಹಾಕಿದರು.

ಬಡವರು ನೂರಿನ್ನೂರು ಕರೆಂಟ್‌ ಬಿಲ್‌ ಕಟ್ಟದಿದ್ದರೆ ವಿದ್ಯುತ್‌ ಸಂಪರ್ಕ ಕಟ್‌ ಮಾಡುತ್ತಾರೆ, ಇವರು 22 ಲಕ್ಷ ಬಾಕಿ ಬೆಳೆಯುವವರೆಗೂ ಬೆಸ್ಕಾಂನವರು ಏನು ಮಾಡುತ್ತಿದ್ದರು ಇದು ಅಧಿಕಾರ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದರು.

ಮನೆಯ ಬಿಲ್‌ ಗಮನಿಸಿ: ಮನೆಯ ಕರೆಂಟ್‌ ಬಿಲ್‌ 22 ಲಕ್ಷವಾಗುವವರೆಗೂ ಇವರು ಗಮನಿಸುವುದಿಲ್ಲವೆಂದರೆ ಕೋಲಾರ ಜಿಲ್ಲೆಯನ್ನು ಎಷ್ಟರಮಟ್ಟಿಗೆ ಗಮನಿಸುತ್ತಾರೆ ಬಿಡಿ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಛಲ ಹಿಡಿದರೆ ಸಾಧಿಸುವ ಶಕ್ತಿಯುಳ್ಳವರು, ಅವರು ರೈತರು, ಸಂಕಷ್ಟದಲ್ಲಿರುವವರ ಪರ, ಅವರೇ ರಾಜ್ಯದಲ್ಲಿಸುಪ್ರೀಂ ಆಗಿರುವಾಗ ವೀಕ್‌ ಎಂಬ ಪದವನ್ನು ಸಿದ್ದರಾಮಯ್ಯ ಯಾಕೆ ಬಳಸಬೇಕು. ನೆರೆಹಾವಳಿ ಸಂದರ್ಭದಲ್ಲಿಸಂಪುಟವಿಲ್ಲದಿದ್ದರೂ ಒಬ್ಬರೇ ಹಗಲಿರುಳು 22 ಜಿಲ್ಲೆಸುತ್ತಿ ಜನರ ಕಷ್ಟ ಕೇಳಲಿಲ್ಲವೇ ಎಂದ ಅವರು, ಸಿದ್ದರಾಮಯ್ಯ ಮಾಡಿರುವ ಟೀಕೆಗಳು ಸರಿಯಲ್ಲಎಂದರು.

ಅವರೂ ಮುಖ್ಯಮಂತ್ರಿಯಾಗಿದ್ದವರು, ಹಿರಿಯರು ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ