ಆ್ಯಪ್ನಗರ

ಡಿಡಿಪಿಐ ಕಚೇರಿಯಲ್ಲಿಸದ್ಬಾವನಾ ದಿನಾಚರಣೆ

ಜಾತಿ, ಭಾಷೆ,ಧರ್ಮ, ಪ್ರಾದೇಶಿಕತೆಯ ಭೇದ ಭಾವ ಹೊಗಲಾಡಿಸಲು ಮಕ್ಕಳಿಗೆ ಸದ್ಬಾವನೆ, ಸೌಹಾರ್ದತೆ, ಶಾಂತಿ, ರಾಷ್ಟ್ರೀಯ ಏಕತೆಗಳ ಮಹತ್ವ ತಿಳಿಸಿಕೊಡಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.

Vijaya Karnataka 22 Aug 2019, 2:38 pm
ಕೋಲಾರ: ಜಾತಿ, ಭಾಷೆ,ಧರ್ಮ, ಪ್ರಾದೇಶಿಕತೆಯ ಭೇದ ಭಾವ ಹೊಗಲಾಡಿಸಲು ಮಕ್ಕಳಿಗೆ ಸದ್ಬಾವನೆ, ಸೌಹಾರ್ದತೆ, ಶಾಂತಿ, ರಾಷ್ಟ್ರೀಯ ಏಕತೆಗಳ ಮಹತ್ವ ತಿಳಿಸಿಕೊಡಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.
Vijaya Karnataka Web sadbhavana day in ddpi office
ಡಿಡಿಪಿಐ ಕಚೇರಿಯಲ್ಲಿಸದ್ಬಾವನಾ ದಿನಾಚರಣೆ


ನಗರದ ತಮ್ಮ ಕಚೇರಿಯಲ್ಲಿಮಂಗಳವಾರ ರಾಷ್ಟ್ರೀಯ ಸದ್ಬಾವನಾ ದಿನಾಚರಣೆ ಪ್ರತಿಜ್ಞೆ ಸ್ವೀಕರಿಸಿದ ಅವರು ಇಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನವೂ ಹೌದು ಎಂದು ತಿಳಿಸಿದರು.

ಸುಶೀಕ್ಷಿತರಲ್ಲೇ ದೇಶಕ್ಕೆ ಮಾರಕವಾದ ಈ ಭೇದ ಭಾವನೆ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಶಾಲಾ ಹಂತದಲ್ಲೇ ಮಕ್ಕಳಿಗೆ ನೈತಿಕ ಶಿಕ್ಷಣ ಮತ್ತು ದೇಶಪ್ರೇಮದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ದೇಶದ ಏಕತೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ, ವಿಶ್ವಭೂಪಟದಲ್ಲಿಭಾರತ ಅಗ್ರಸ್ಥಾನ ಗಳಿಸಿ ವಿಶ್ವಗುರುವಾಗಲು ಇಲ್ಲಿಹುಟ್ಟಿದ ಪ್ರತಿ ವ್ಯಕ್ತಿಯೂ ದೇಶಕ್ಕಾಗಿ ನಾನು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಸದ್ಬಾವನಾ ದಿನದ ಅಂಗವಾಗಿ ದೇಶದಲ್ಲಿರಾಷ್ಟ್ರೀಯ ಸೌಹಾರ್ದತೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಅಗತ್ಯವಿದೆ. ಈ ದಿನದ ಅಂಗವಾಗಿ ಶಾಲೆಗಳಲ್ಲಿಗಿಡ ನೆಡುವ ಕಾರ್ಯಕ್ರಮ ಮಕ್ಕಳಿಗೆ ಸೌಹಾರ್ದತೆಯ ಮಹತ್ವ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ದೇಶಕ್ಕಾಗಿ ದುಡಿದ ಮಹನೀಯರ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ, ಅವರ ಚರಿತ್ರೆ ಓದುವುದರಿಂದ ಮಕ್ಕಳಲ್ಲಿಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಬಹುದು ಎಂದರು.

ಗಡಿಯಲ್ಲಿನಮ್ಮ ದೇಶ ಕಾಯುತ್ತಿದ್ದಾರೆ, ಪ್ರಾಣವನ್ನೂ ಲೆಕ್ಕಿಸದೇ ನಮ್ಮ ರಕ್ಷಣೆಯಲ್ಲಿತೊಡಗಿರುವ ಅವರ ಪರಿಶ್ರಮ ಗೌರವಿಸೋಣ ನಾವು ಅವರಂತೆ ದೇಶಪ್ರೇಮ ಬೆಳೆಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್‌.ನಾಗರಾಜಗೌಡ, ಮಾಧವರೆಡ್ಡಿ, ಸಂಗಮೇಶ್‌, ರೇಣುಕಮ್ಮ, ಶಿಕ್ಷಣ ಸಂಯೋಜಕ ಆರ್‌.ಶ್ರೀನಿವಾಸನ್‌ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ