ಆ್ಯಪ್ನಗರ

ಗ್ರಾಮೀಣ ಸೊಗಡಿನ ಕ್ರೀಡೆ ಉಳಿಸಿ

ಗ್ರಾಮೀಣ ಭಾಗದ ಜನರು ರಾಗಿ ಮುದ್ದೆ ತಿನ್ನುವ ಮೂಲಕ ಆರೋಗ್ಯವಂತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುವ ಮೂಲಕ ಗ್ರಾಮೀಣ ಸೊಗಡನ್ನು ಬಿಂಬಿಸುವ ಸ್ಪರ್ಧೆಗಳನ್ನು ಉಳಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Vijaya Karnataka 14 Jan 2019, 5:00 am
ಮಾಲೂರು: ಗ್ರಾಮೀಣ ಭಾಗದ ಜನರು ರಾಗಿ ಮುದ್ದೆ ತಿನ್ನುವ ಮೂಲಕ ಆರೋಗ್ಯವಂತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುವ ಮೂಲಕ ಗ್ರಾಮೀಣ ಸೊಗಡನ್ನು ಬಿಂಬಿಸುವ ಸ್ಪರ್ಧೆಗಳನ್ನು ಉಳಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
Vijaya Karnataka Web save the rural essence sports
ಗ್ರಾಮೀಣ ಸೊಗಡಿನ ಕ್ರೀಡೆ ಉಳಿಸಿ


ಪಟ್ಟಣದ ಮಾರುತಿ ಬಡಾವಣೆಯ ಕಾಂಗ್ರೆಸ್‌ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಸಾಂಸ್ಕೃತಿಕ ಕಲಾ ವೇದಿಕೆ ಸಂಕ್ರಾತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಗಿ ಮುದ್ದೆ ನಾಟಿಕೊಳಿ ಸಾರು ತಿನ್ನುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ನಗದು ವಿತರಿಸಿ ಮಾತನಾಡಿದರು.

ಆಧುನಿಕತೆ ಹೆಚ್ಚಾದಂತೆ ಮನುಷ್ಯ ಆಹಾರ ಪದಾರ್ಥಗಳ ಸೇವನೆಯನ್ನು ಬದಲಿಸಿಕೊಂಡಿರುವುದರಿಂದ ಹಲವು ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಆರೋಗ್ಯ ಹದಗೆಟ್ಟು ಸಾವಪ್ಪುತ್ತಿದ್ದಾರೆ. ಮಧುಮೇಹದಿಂದ ಬಳಲುತ್ತಿರುವವರಿಗೆ ರಾಗಿಮುದ್ದೆ ಊಟ ರಾಮಬಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ರಾಗಿ ಮುದ್ದೆ ಊಟವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸುತ್ತಿದ್ದ ಹಿಂದಿನ ತಲೆಮಾರಿನ ಪೂರ್ವಿಕರು ರಾಗಿ ಮುದ್ದೆ ಊಟವನ್ನು ಸೇವಿಸುವುದರ ಮೂಲಕ ನೂರಾರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಹೆಚ್ಚಿನ ಶ್ರಮದಾಯಕ ಕೆಲಸ ನಿರ್ವಹಿಸುವ ಮೂಲಕ ಉತ್ತಮ ಜೀವನ ನಡೆಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಫಾಸ್ಟ್‌ ಫುಡ್‌, ಜಂಕ್‌ ಫುಡ್ಸ್‌ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಹದಗೆಡಲು ಕಾರಣವಾಗಿದೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಇಂತಹ ಸ್ಪರ್ಧೆಗಳು ಹೆಚ್ಚು ಹೆಚ್ಚಾಗಿ ನಡೆಸುವಂತೆ ತಿಳಿಸಿದರು.

ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ 30 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ದೊಡ್ಡ ಕಡತೂರಿನ ಗುರಪ್ಪ ಶೆಟ್ಟಿ 16 ಮುದ್ದೆಯನ್ನು ತಿನ್ನುವ ಮೂಲಕ ಪ್ರಥಮ ಬಹುಮಾನ 15 ಸಾವಿರ ನಗದು ಮತ್ತು ಟ್ರೋಫಿ ಪಡೆದರೆ, ದಾಸರಹಳ್ಳಿ ಕೃಷ್ಣಪ್ಪ 15 ಮುದ್ದೆ ಸೇವಿಸಿ ದ್ವಿತೀಯ ಬಹುಮಾನ 10ಸಾವಿರ ನಗದು ಟ್ರೋಫಿ, ಕೃಷ್ಣಪ್ಪಶೆಟ್ಟಿ 12 ಮುದ್ದೆ ತಿನ್ನುವ ಮೂಲಕ ತೃತೀಯ ಬಹುಮಾನ 2 ಸಾವಿರ ನಗದು ಟ್ರೋಪಿ ಪಡೆದರು. ಸಂಪಂಗೆರೆ ಶ್ರೀನಿವಾಸ್‌ 11 ಮುದ್ದೆ ತಿನ್ನುವ ಮೂಲಕ 3 ಸಾವಿರ ನಗದು ಹಾಗೂ ಟ್ರೋಫಿ ಪಡೆದು ಇನ್ನುಳಿದ 10 ಮಂದಿ ಸ್ಪರ್ಧೆಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಮುನಿಯಪ್ಪ, ಪುರಸಭೆ ಸದಸ್ಯರಾದ ಸಿ.ಲಕ್ಷ್ಮೀನಾರಾಯಣ್‌, ಎಂ.ವಿ.ವೇಮನ, ಎ.ಹನುಮಂತರೆಡ್ಡಿ, ಎ.ಅಶ್ವಥರೆಡ್ಡಿ, ಮಾಜಿ ಅಧ್ಯಕ್ಷ ಬಾಬುರೆಡ್ಡಿ, ಗ್ರಾಪಂ ಅಧ್ಯಕ್ಷ ಲಿಂಗಾಪುರ ಕಿಟ್ಟಿ, ಕರವೇ ಜಿಲ್ಲಾ ಉಪಾಧ್ಯಕ್ಷ ಎಸ್‌.ಎಂ.ರಾಜು, ಗ್ರಾಮೀಣ ಕ್ರೀಡೆ ಸಾಂಸ್ಕೃತಿಕ ಕಲಾ ವೇದಿಕೆಯ ಶ್ರೀನಾಥ್‌(ಬುಜ್ಜಿ), ಮಾಸ್ತಿ ಕೃಷ್ಣಪ್ಪ, ಎಂ.ಜೆ.ಶ್ರೀನಿವಾಸ್‌, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂತೂರು ಚಂದ್ರಪ್ಪ, ಡಾ.ವಸಂತ್‌, ಮುಖಂಡರಾದ ಬಡಗಿ ಶ್ರೀನಿವಾಸ್‌, ಆರಾಧನಾ ವೇಣು, ಶಬ್ಬೀರ್‌ ಉಲ್ಲಾ, ಚಲಪತಿಗೌಡ, ಕೆ.ಎನ್‌.ಜಗದೀಶ್‌, ಮಂಜುನಾಥಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ