ಆ್ಯಪ್ನಗರ

ಕಡುಬಡವರಿಗೆ ಮೂಲಸೌಲಭ್ಯಕ್ಕೆ ವಿಶೇಷ ಯೋಜನೆ

ತಾಲೂಕಿನ ಕಡುಬಡವರಿಗೆ ಸೌಲಭ್ಯ ಒದಗಿಸಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವ ಎಚ್‌.ನಾಗೇಶ್‌ ಹೇಳಿದರು.

Vijaya Karnataka 23 Aug 2019, 2:25 pm
ಮುಳಬಾಗಲು: ತಾಲೂಕಿನ ಕಡುಬಡವರಿಗೆ ಸೌಲಭ್ಯ ಒದಗಿಸಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವ ಎಚ್‌.ನಾಗೇಶ್‌ ಹೇಳಿದರು.
Vijaya Karnataka Web special infrastructure scheme for poor
ಕಡುಬಡವರಿಗೆ ಮೂಲಸೌಲಭ್ಯಕ್ಕೆ ವಿಶೇಷ ಯೋಜನೆ


ತಾಲೂಕು ವಕ್ಕಲಿಗರ ಸಂಘದ ವತಿಯಿಂದ ಅಭಿನಂದಿಸಿದ ವೇಳೆ ಮಾತನಾಡಿದ ಅವರು, ಮುಳಬಾಗಲು ತಾಲೂಕು ಗಡಿಭಾಗದಂಚಿನಲ್ಲಿದೆ. ಬಹುತೇಕರು ಕಡುಬಡವರಿದ್ದು, ಇವರಿಗೆ ಕನಿಷ್ಟ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಲಾಗುವುದು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಕುಡಿಯುವ ನೀರು, ರಸ್ತೆ, ಬಸ್‌ ಸೌಲಭ್ಯ, ವಸತಿ ಮತ್ತಿತರ ಅಗತ್ಯ ಸೌಲಭ್ಯ ದೊರಕುವಂತೆ ಮಾಡುವುದಾಗಿ ತಿಳಿಸಿದರು.

ಪ್ರಾಮಾಣಿಕ ಪ್ರಯತ್ನ: ತಾಲೂಕಿನಲ್ಲಿನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ನಗರದಲ್ಲಿಅನಾವರಣ ಮಾಡಲು ಈಗಾಗಲೇ ಶಿಲ್ಪಿಗಳ ಜತೆ ಚರ್ಚಿಸಲಾಗಿದೆ. ತಾಲೂಕಿನಲ್ಲಿಪಕ್ಷಾತೀತವಾಗಿ ಕೆಲಸ ನಿರ್ವಹಿಸಿ, ಮಾದರಿ ಶೈಕ್ಷಣಿಕ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕೆಂಪೇಗೌಡ ಆಚರಣಾ ಸಮಿತಿ ಅಧ್ಯಕ್ಷ ಅಲಂಗೂರು ಶಿವಣ್ಣ, ರಾಜ್ಯ ಕುಕ್ಕುಟ ಮಹಾಮಂಡಳಿ ಮಾಜಿ ಅಧ್ಯಕ್ಷ ಬಿ.ಕೆ. ವೆಂಕಟನಾರಾಯಣ್‌, ವಕ್ಕಲಿಗರ ಸಂಘದ ಅಧ್ಯಕ್ಷ ಸಿ.ಕೆ.ರಾಧವಲ್ಲಭ, ಕಾರ್ಯದರ್ಶಿ ಬಿ.ನಾಗರಾಜ್‌, ಉಪಾಧ್ಯಕ್ಷ ಎಂ.ನಂಜುಂಡಪ್ಪ, ಯುವವೇದಿಕೆ ಅಧ್ಯಕ್ಷ ಎಸ್‌.ಎನ್‌. ರಘುಪತಿಗೌಡ, ಉಪಾಧ್ಯಕ್ಷ ರವಿ, ಸದಸ್ಯ ಸಿ.ವಿ. ಧಿಶ್ರೀನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ