ಆ್ಯಪ್ನಗರ

ಲೋಕಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ

ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ಲೋಕಕಲ್ಯಾಣಕ್ಕಾಗಿ ನಗರದ ಗೋವಿಂದರಾಜು ಮತ್ತು ಕುಟುಂಬದವರು ನಡೆಸಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು, ಸ್ವಾಮಿಯ ಕೃಪೆಗೆ ಪಾತ್ರರಾದರು.

Vijaya Karnataka 4 Feb 2019, 5:00 am
ಕೋಲಾರ: ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ಲೋಕಕಲ್ಯಾಣಕ್ಕಾಗಿ ನಗರದ ಗೋವಿಂದರಾಜು ಮತ್ತು ಕುಟುಂಬದವರು ನಡೆಸಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು, ಸ್ವಾಮಿಯ ಕೃಪೆಗೆ ಪಾತ್ರರಾದರು.
Vijaya Karnataka Web srinivasa kalyanostava in kolar
ಲೋಕಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ


ಭಾನುವಾರ ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದ ಆವರಣದ ಬೃಹತ್‌ ವೇದಿಕೆಯಲ್ಲಿ ನಡೆದ ಕಲ್ಯಾಣೋತ್ಸವಕ್ಕೆ ತಿರುಪತಿ, ತಿರುಮಲದಿಂದ ಲಕ್ಷ್ಮಿ, ಅಂಡಾಳ್‌ ಸಮೇತ ಶ್ರೀನಿವಾಸಸ್ವಾಮಿಯ ಮೂರ್ತಿಗಳನ್ನು ಅಲ್ಲಿನ 17 ಮಂದಿ ಅರ್ಚಕರೊಂದಿಗೆ ಕರೆತರಲಾಗಿತ್ತು.

ತಿರುಮಲದ ಅರ್ಚಕರೊಂದಿಗೆ ನಗರದ ಬ್ರಾಹ್ಮಣ ಸಂಘದ 40ಕ್ಕೂ ಹೆಚ್ಚು ಪುರೋಹಿತರು, ರಾಯಲ್ಪಾಡಿನ ವೇದವಿದ್ವಾಂಸರಾದ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದರು.

ಮೊದಲಿಗೆ ಸುದರ್ಶನ ಹೋಮ, ಗಣೇಶ ಹೋಮಗಳನ್ನು ನಡೆಸಿದ ನಂತರ ಕಲ್ಯಾಣೋತ್ಸವ ಪೂಜಾ ವಿಧಾನಗಳನ್ನು ನಾರಾಯಣಿ ಕನ್ವೆಷನ್‌ಹಾಲ್‌ನ ಮಾಲೀಕರಾದ ಗೋವಿಂದರಾಜು, ಕೆ.ವಿ.ಸುಜಾತಾ ದಂಪತಿಗಳೊಂದಿಗೆ ಅವರ ಪುತ್ರರಾದ ಪ್ರವೀಣ್‌ ರಾಜ್‌ ಮತ್ತು ನಿಶಾಂತ್‌ ರಾಜ್‌ ನಡೆಸಿಕೊಟ್ಟರು.

ವಿವಿಧ ಮಾದರಿಯ ಪುಷ್ಪವೃಷ್ಟಿಯೊಂದಿಗೆ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಿದ್ದು, ಇಡೀ ಕಾರ್ಯಕ್ರಮಕ್ಕೆ ನಗರ ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಬಂಧುಗಳು, ಜನತೆ ಸಾಕ್ಷಿಯಾದರು.

ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಡೀ ಪೂಜೆಯಲ್ಲಿ ಪಂಡಿತರ ವೇದಘೋಷಗಳು ಮುಗಿಲು ಮುಟ್ಟಿದ್ದವು. ಈ ಸಂದರ್ಭದಲ್ಲಿ ಜಿಲ್ಲೆಗೆ ಒಳ್ಳೆಯ ಮಳೆ,ಬೆಳೆ ಜತೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ