ಆ್ಯಪ್ನಗರ

ಶ್ರೀನಿವಾಸಪುರ: ಶೇ.80 ಮತದಾನ

ಪಟ್ಟಣದ ಪುರಸಭೆ ವ್ಯಾಪ್ತಿಯ ಚುನಾವಣೆಯಲ್ಲಿ ಅಲ್ಲಲ್ಲಿ ಮಾತಿನ ಚಕಮಕಿ ಬಿಟ್ಟರೆ ಯಾವುದೇ ಗೊಂದಲ ಇಲ್ಲದೆ ಚುನಾವಣೆ ನಡೆದು ಶೇ 80ರಷ್ಟು ಮತದಾನವಾಗಿದೆ ಎಂದು ತಹಸಿಲ್ದಾರ್‌ ಬಿ.ಎಸ್‌.ರಾಜೀವ್‌ ಹೇಳಿದ್ದಾರೆ.

Vijaya Karnataka 30 May 2019, 5:00 am
ಶ್ರೀನಿವಾಸಪುರ : ಪಟ್ಟಣದ ಪುರಸಭೆ ವ್ಯಾಪ್ತಿಯ ಚುನಾವಣೆಯಲ್ಲಿ ಅಲ್ಲಲ್ಲಿ ಮಾತಿನ ಚಕಮಕಿ ಬಿಟ್ಟರೆ ಯಾವುದೇ ಗೊಂದಲ ಇಲ್ಲದೆ ಚುನಾವಣೆ ನಡೆದು ಶೇ 80ರಷ್ಟು ಮತದಾನವಾಗಿದೆ ಎಂದು ತಹಸಿಲ್ದಾರ್‌ ಬಿ.ಎಸ್‌.ರಾಜೀವ್‌ ಹೇಳಿದ್ದಾರೆ.
Vijaya Karnataka Web srinivaspur voting for 80
ಶ್ರೀನಿವಾಸಪುರ: ಶೇ.80 ಮತದಾನ


ಪಟ್ಟಣದ 23 ವಾರ್ಡುಗಳಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ 8,281 ಮಂದಿ ಪುರುಷರು, 8,404 ಮಂದಿ ಮಹಿಳೆಯರು ಸೇರಿ 16,685 ಮಂದಿ ಮತ ಚಲಾಯಿಸಿ ಶೇ 80 ಭಾಗ ಮತದಾನವಾಗಿದೆ ಎಂದು ಮಾದ್ಯಮಕ್ಕೆ ಮಾಹಿತಿ ನೀಡಿದರು.

ಹೆಚ್ಚು ಕಡಿಮೆ ಮತದಾನ: ಪಟ್ಟಣದ ಅತಿ ಕಡಿಮೆ ಮತದಾನವಾದ ವೆಂಕಟೇಶ್ವರ ಬಡಾವಣೆ ವಾರ್ಡ್‌ 23ರಲ್ಲಿ 381 ಮಂದಿ ಗಂಡಸರು, 398 ಜನ ಮಹಿಳೆಯರು ಸೇರಿ 779 ಜನರು ಮತ ಚಲಾಯಿಸಿ ಶೇ 66.35 ಬಾಗ ಮತದಾನವಾದರೆ, ನಾರಸಿಂಹಪಾಳ್ಯದ ವಾರ್ಡ್‌ 9 ರಲ್ಲಿ 325 ಮಂದಿ ಪುರುಷರು 326 ಮಾತೆಯರು ಸೇರಿ 651 ಮಂದಿ ಮತಗಳು ಚಲಾವಣೆಯಾಗಿ ಶೇ 92.34 ಭಾಗ ಹೆಚ್ಚು ಮತದಾನವಾದ ವಾರ್ಡ್‌ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮಾತಿನ ಚಕಮಕಿ: ಶ್ರೀನಿವಾಸಪುರ ಪುರಸಭೆ ವಾಪ್ತಿಯ ಚುನಾವಣೆಯಲ್ಲಿ ಕಟ್ಟೆಕೆಳಗಿನಪಾಳ್ಯ ರಂಗಾ ರಸ್ತೆ ಮತ್ತು ಜಾಕೀರ್‌ ಹುಸೇನ್‌ ಮೊಹಲ್ಲಾದ ಭೂತ್‌ಗಳಲ್ಲಿ ಕ್ಷ ುಲಕ ವಿಷಯಗಳಿಗೆ ಏಜೆಂಟರ ಮಧ್ಯೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಎಲ್ಲಿಯೂ ಗಲಭೆಗಳಿಗೆ ಆವಕಾಶ ನೀಡದೆ ಪೊಲೀಸರು ಸುರಕ್ಷ ತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಭ್ಯರ್ಥಿಗಳ ಬೆಂಬಲಿಗರಿಗೆ ತಿಳಿಸಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ವೋಟಿಗೆ ಇಂತಿಷ್ಟೆಂದು ದುಪಟ್ಟು ಹಣ, ಬೆಳ್ಳಿ ಬಟ್ಟಲು, ಸೀರೆ, ಹೆಣ್ಣು ಮಕ್ಕಳಿಗೆ ಅರಿಸಿಣ ಕುಂಕುಮಕ್ಕೆಂದು ಹಣ ನಾನಾ ರೀತಿಯಲ್ಲಿ ಆಮಿಷಗಳು ಕೊಟ್ಟಿದ್ದು ಪ್ರತಿ ವೋಟು ಅತ್ಯಗತ್ಯವಾಗಿದೆ ಎಂದು ಲೆಕ್ಕಾಚಾರ ಹಾಕಿ ಮತದಾರರನ್ನು ಕರೆತರುತಿದ್ದು ಸಾಮಾನ್ಯವಾಗಿತ್ತು.

ನಾಳೆ ಮತ ಎಣಿಕೆ:ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಕಣದಲ್ಲಿರುವ 77 ಮಂದಿ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರದೊಳಗೆ ಭದ್ರವಾಗಿದೆ. ಮೇ 31 ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿವರೆಗೆ ಈಗಾಗಲೆ ಕೆಲವು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹುರಿಯಾಳುಗಳ ಗೆಲುವಿಗೆ ಕಂಟಕವಾಗಿದ್ದಾರೆಂದು ಸಪ್ಪೆ ಮುಖ ಹಾಕಿಕೊಂಡಿದದ್ದು ಸಾಮಾನ್ಯವಾಗಿತ್ತು. ಮತದಾನ ದಿನದವರೆಗೆ ಪಕ್ಷೇತರರು ಏನು ಮಾಡುತ್ತಾರೆಂದು ಹುಬ್ಬೇರಿಸಿ ನಡೆಯುತ್ತಿದ್ದ ಕೆಲವು ಕಾಂಗ್ರೆಸ್‌ ಅಭ್ಯರ್ಥಿಗಳು ಶಾಸಕರೆ ನಮಗೆ ತೊಂದರೆ ಮಾಡಿದ್ದಾರೆಂದು ದೂರಿದರು.

ಒಟ್ಟಿನಲ್ಲಿ ಈ ಬಾರಿ ಚುನಾವಣೆ ಈ ಹಿಂದಿನ ಚುನಾವಣೆಗಳಂತ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಧ್ಯೆ ಮಾತ್ರ ಸ್ಪರ್ಧೆ ಅಲ್ಲದೆ ಪಕ್ಷೇತರ ಅಭ್ಯರ್ಥಿಗಳು ಘಟಾನುಘಟ್ಟಿಗಳಿಗೆ ನಡುಕ ಹುಟ್ಟಿಸಿದ್ದಾರೆನ್ನುವುದು ವಿಷೇಶವಾಗಿತ್ತು.





ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ