ಆ್ಯಪ್ನಗರ

'ಮಿಣಿ ಮಿಣಿ ಡೈಲಾಗ್ ಹೊಡೆದ ಕುಮಾರಸ್ವಾಮಿ ಗಂಭೀರ ರಾಜಕಾರಣಿ ಅಲ್ಲ': ಶ್ರೀರಾಮುಲು

ಮಿಣಿ ಮಿಣಿ ಪೌಡರ್‌ ಎಂದು ಮಂಗಳೂರು ಬಾಂಬ್‌ ಪ್ರಕರಣದಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರಿಗೆ ಗಂಭೀರತೆ ಎನ್ನುವುದು ಇಲ್ಲ ಅನ್ನೋದು ಸಾಬೀತಾಗುತ್ತೆ ಎಂದು ರಾಮುಲು ಹೇಳಿದರು.

Vijaya Karnataka Web 28 Jan 2020, 8:35 pm
ಕೋಲಾರ: ಕುಮಾರಸ್ವಾಮಿ ಗಂಭೀರತೆ ಹೊಂದಿರುವ ರಾಜಕಾರಣಿಯಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು. ತಿರುಪತಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಕೋಲಾರ ತಾಲೂಕಿನ ಕೆಂದಟ್ಟಿಯ ಜಿಪಂ ಸದಸ್ಯೆ ರೂಪಶ್ರೀ ಮಂಜು ನಿವಾಸಕ್ಕೆ ಆಗಮಿಸಿದ್ದ ವೇಳೆ, ಸುದ್ದಿಗಾರರೊಂದಿಗೆ ರಾಮುಲು ಮಾತನಾಡುತ್ತಿದ್ದರು.
Vijaya Karnataka Web hdk and ramulu
'ಮಿಣಿ ಮಿಣಿ ಡೈಲಾಗ್ ಹೊಡೆದ ಕುಮಾರಸ್ವಾಮಿ ಗಂಭೀರ ರಾಜಕಾರಣಿ ಅಲ್ಲ': ಶ್ರೀರಾಮುಲು


ರೈತ ಹೆಣ್ಣು ಮಗಳು ಕಬ್ಬಿನ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ಕೊಪ್ಪಳದಲ್ಲಿ ರೈತರು ಹೋರಾಟ ಮಾಡಿದಾಗ ನೀವು ನಂಗೆ ಮತ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಸೈನಿಕರ ವಿಚಾರದಲ್ಲೂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಇದೀಗ ಮಿಣಿ ಮಿಣಿ ಪೌಡರ್‌ ಎಂದು ಮಂಗಳೂರು ಬಾಂಬ್‌ ಪ್ರಕರಣದಲ್ಲಿ ಹೇಳಿದ್ದಾರೆ. ಹೀಗಾಗಿ ಅವರಿಗೆ ಗಂಭೀರತೆ ಎನ್ನುವುದು ಇಲ್ಲ ಅನ್ನೋದು ಸಾಬೀತಾಗುತ್ತೆ ಎಂದರು.

'ಮಿಣಿ ಮಿಣಿ ಪೌಡರ್' ಟ್ರೋಲ್ ಮಾಡಿದ್ದೇ ಬಿಜೆಪಿ ಕಾರ್ಯಕರ್ತರು: ಅಬ್ಬರಿಸಿ ಬೊಬ್ಬಿರಿದ ಎಚ್ಡಿಕೆ..!

ಡಿಸಿಎಂ ರಾಮುಲು ಎಂದು ಅಭಿಮಾನಿಗಳ ಜಯಘೋಷ..!

ಸಚಿವ ಶ್ರೀರಾಮುಲು ಕೋಲಾರಕ್ಕೆ ಆಗಮಿಸುತ್ತಿದ್ದಂತೆಯೇ, ಅಭಿಮಾನಿಗಳಿಂದ ಡಿಸಿಎಂ ಶ್ರೀರಾಮುಲು, ಮುಂದಿನ ಡಿಸಿಎಂ ಶ್ರೀರಾಮುಲು ಎಂದು ಘೋಷಣೆಗಳು ಕೇಳಿಬಂದವು. ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರೂ, ಸಚಿವ ರಾಮುಲು ಮೌನವಾಗಿಯೇ ಇದ್ದರು. ಬಳಿಕ ಪ್ರತಿಕ್ರಿಯಿಸಿದ ಅವರು, ನಾನು ಡಿಸಿಎಂ ಆಗಬೇಕು ಎಂದು ಜನರು ಬಯಸಿದ್ದಾರೆ. ಆದ್ರೆ, ತಾವು ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

ಕುಮಾರಸ್ವಾಮಿಗೆ ಮಿಣಿ ಮಿಣಿ ಟ್ರೋಲ್ ಕಾಟ; ಕ್ರಮಕ್ಕೆ ಒತ್ತಾಯಿಸಿ ಜೆಡಿಎಸ್‌ ದೂರು

ಸಂಪುಟ ವಿಸ್ತರಣೆ ಬಗ್ಗೆ ರಾಮುಲು ರಿಯಾಕ್ಷನ್

ಸಂಪುಟ ವಿಸ್ತರಣೆ ಬಗ್ಗೆಯೂ ಮಾತನಾಡಿದ ಶ್ರೀರಾಮುಲು, ಉಪ ಚುನಾವಣೆಯಲ್ಲಿ ಗೆದ್ದವರೆಲ್ಲರೂ ಸಚಿವರಾಗಬೇಕು ಎಂದು ಬಯಸಿದ್ದಾರೆ ಎಂದರು. ಸಿಎಂ ಯಡಿಯೂರಪ್ಪ ಸಹ ಎಲ್ಲ 'ಅರ್ಹ'ರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಆಗಲಿದ್ದು, ರಾಷ್ಟ್ರೀಯ ಅಧ್ಯಕ್ಷ್ಯ ಜೆಪಿ ನಡ್ಡಾ, ಅಮಿತ್‌ ಶಾ ಅವರ ಜತೆ ಈ ಸಂಬಂಧ ಮಾತುಕತೆ ನಡೆಸಬೇಕಿದೆ ಎಂದು ರಾಮುಲು ಮಾಹಿತಿ ನೀಡಿದರು.

ದಿಲ್ಲಿ ಚುನಾವಣೆ ನಂತರ ಅಥವಾ ಮುಂಚೆಯೇ ವಿಸ್ತರಣೆ ಆಗಬಹುದು, ಸೋತವರಿಗೆ ಸಚಿವ ಸ್ಥಾನದ ಕುರಿತು ನಾನೇನೂ ಮಾತನಾಡುವುದಿಲ್ಲ, ಪಾರ್ಟಿ ಈಗಾಗಲೇ ಕೆಲವರಿಗೆ ಮಂತ್ರಿ ಸ್ಥಾನ, ಕೆಲವರಿಗೆ ನಿಗಮ ಮಂಡಳಿ ಸ್ಥಾನ ಕೊಡಬೇಕೆಂದು ತೀರ್ಮಾನಿಸಿದೆ ಎಂದ ರಾಮುಲು, ಸೋತವರ ವಿಚಾರದಲ್ಲಿ ಪಕ್ಷವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

‘ಮಿಣಿ ಮಿಣಿ ಎಂಬುವುದು ಶುದ್ಧ ಕನ್ನಡ ಪದ’ ಟ್ರೋಲ್‌ಗಳಿಗೆ ಎಚ್‌ಡಿಕೆ ತಿರುಗೇಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ