ಆ್ಯಪ್ನಗರ

ಶಾಲೆಗೆ ಆರು ಕಿಮೀ ನಡೆದು ಬರುವ ವಿದ್ಯಾರ್ಥಿಗಳು

ಇಲ್ಲಿನ ಸರಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳು ಪ್ರತಿದಿನ ಸುಮಾರು 6 ಕಿಮೀ ದೂರದಿಂದ ನಡೆದೇ ಶಾಲೆಗೆ ಬರುತ್ತಿದ್ದಾರೆ. ಇದು ಶಾಲೆಯ ಶಿಕ್ಷ ಕರಿಗೂ ಗೊತ್ತು. ಇಲಾಖೆಯ ಅಧಿಕಾರಿಗಳಿಗೂ ಗೊತ್ತು. ಮಕ್ಕಳ ವ್ಯಾಸಂಗದ ದೃಷ್ಟಿಯಿಂದ ಬೆಳಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ ಬಸ್‌ ವ್ಯವಸ್ಥೆ ಮಾಡಬೇಕೆಂಬುದು ಪೋಷಕರ ಒತ್ತಾಯವಾಗಿದೆ.

Vijaya Karnataka 25 Jun 2019, 5:00 am
ಬೂದಿಕೋಟೆ : ಇಲ್ಲಿನ ಸರಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳು ಪ್ರತಿದಿನ ಸುಮಾರು 6 ಕಿಮೀ ದೂರದಿಂದ ನಡೆದೇ ಶಾಲೆಗೆ ಬರುತ್ತಿದ್ದಾರೆ. ಇದು ಶಾಲೆಯ ಶಿಕ್ಷ ಕರಿಗೂ ಗೊತ್ತು. ಇಲಾಖೆಯ ಅಧಿಕಾರಿಗಳಿಗೂ ಗೊತ್ತು. ಮಕ್ಕಳ ವ್ಯಾಸಂಗದ ದೃಷ್ಟಿಯಿಂದ ಬೆಳಗ್ಗೆ ಮತ್ತು ಸಾಯಂಕಾಲ ಒಂದು ಸಾರಿಗೆ ಬಸ್‌ ವ್ಯವಸ್ಥೆ ಮಾಡಬೇಕೆಂಬುದು ಪೋಷಕರ ಒತ್ತಾಯವಾಗಿದೆ.
Vijaya Karnataka Web students walking six km to school
ಶಾಲೆಗೆ ಆರು ಕಿಮೀ ನಡೆದು ಬರುವ ವಿದ್ಯಾರ್ಥಿಗಳು


ಬೂದಿಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ಸುಮಾರು 450 ಮಕ್ಕಳು ಇದ್ದು, ಈ ಪೈಕಿ ಹೆಣ್ಣು ಮಕ್ಕಳೇ ಜಾಸ್ತಿ. ಆದರೂ ಬೇರೆ ಬೇರೆ ಗ್ರಾಮಗಳಿಂದ ಬರುವವರೇ ಜಾಸ್ತಿ. ಇದೇ ರೀತಿ ಪ್ರತಿನಿತ್ಯ ಮಾಲೂರು ತಾಲೂಕಿನ ಗುಂಡ್ಲುಪಾಳ್ಯ, ಊಸರಹಳ್ಳಿ, ಹಳೇಪಾಳ್ಯ, ಮೇಲನೂರು, ದೇವರಹಳ್ಳಿ, ಸೂರಕಾಯಲಹಳ್ಳಿ ಗ್ರಾಮಗಳಿಂದ ಇಲ್ಲಿನ ಪ್ರೌಢಶಾಲೆಗೆ 50ರಿಂದ 60 ವಿದ್ಯಾರ್ಥಿಗಳು 6 ಕಿಮೀ ದೂರದಿಂದ ನಡದೇ ಬರಬೇಕಾಗಿದೆ. ಈ ಗ್ರಾಮಗಳಿಂದ ಬರುವ ಹೆಣ್ಣುಮಕ್ಕಳು ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟು 10-15ರೊಳಗೆ ಶಾಲೆಗೆ ಹಾಜರಾಗಬೇಕು. ಸಂಜೆ ಮನೆ ತಲುಪುವುದು 7 ಗಂಟೆಯಾಗುತ್ತದೆ. ಕಾಡು ದಾರಿಯಲ್ಲಿ ನಡೆದು ಹೋಗುವುದಕ್ಕೆ ಮಕ್ಕಳು ಭಯಪಡುತ್ತಾರೆ.

ಇನ್ನೂ ಸಿಗದ ಸೈಕಲ್‌: ಶಾಲೆಯಲ್ಲಿ ಮಕ್ಕಳಿಗೆ ಸೈಕಲ್‌ಗಳನ್ನು ನೀಡಿದ್ದರೂ ಬಾಳಿಕೆ ಬರುವುದಿಲ್ಲ. 8ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೂ ಸೈಕಲ್‌ ನೀಡಿಲ್ಲ. ಆದ್ದರಿಂದ ಸುಮಾರು ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಬರಬೇಕಾಗುತ್ತದೆ. ಇದರ ಜತೆಯಲ್ಲಿ ಹತ್ತÜನೇ ತರಗತಿ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳಿಗೆ ಹಾಜರಾಗಬೇಕು. ಇವರಿಗೆ ಶಾಲೆಗೆ ಬಂದು ಹೋಗುವುದೇ ದೊಡ್ಡ ಸಾಹಸವಾಗಿದೆ.

ಇಷ್ಟಾದರೂ ಜನಪ್ರತಿನಿಧಿಗಳಿಗೂ ಅಧಿಕಾರಿಗಳು ಇಲ್ಲಿಗೆ ಒಂದು ಬಸ್‌ ವ್ಯವಸ್ಥೆ ಮಾಡಿಲ್ಲ. ಕನಿಷ್ಠ ಒಂದು ಆಟೊ ಸಹಾ ಈ ದಾರಿಯಲ್ಲಿ ಓಡಾಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತೊಂದರೆ ತಪ್ಪಿದ್ದಲ್ಲ.

ಪರ್ಯಾಯ ವ್ಯವಸ್ಥೆ: ಈ ವಿಚಾರದಲ್ಲಿ ಪೋಷಕರು ಸ್ವಲ್ಪಮಟ್ಟಿಗೆ ಕಾಳಜಿ ಮಹಿಸಬೇಕಾಗಿದೆ. ತಮ್ಮ ಮಕ್ಕಳ ವ್ಯಾಸಂಗಕ್ಕಾಗಿ ಕನಿಷ್ಠ ಸಾಯಂಕಾಲವಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಶಾಲೆಯ ಶಿಕ್ಷ ಕರು ಮಕ್ಕಳ ಅನುಕೂಲಕ್ಕಾಗಿ ಸಾರಿಗೆ ಅಧಿಕಾರಿಗಳಿಗೆ ಒಂದು ಮನವಿ ನೀಡಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.

ಸರಕಾರಿ ಶಾಲೆಗಳಲ್ಲಿ ಹಾಜರಾತಿಯೇ ಇಲ್ಲದಿರುವ ಇಂತಹ ಸಮಯದಲ್ಲಿ ಆರೇಳು ಕಿಮೀ ದೂರದಿಂದ ಸರಕಾರಿ ಶಾಲೆಗೆ ನಡೆದುಕೊಂಡು ಬರುತ್ತಿರುವುದನ್ನು ಅಧಿಕಾರಿಗಳು ಗಮನಿಸಲೇಬೇಕು. ಆದ್ದರಿಂದ ಬಂಗಾರಪೇಟೆ ಇಂದ ಮಾಸ್ತಿವರೆಗೆ ಶಾಲೆ ಸಮಯಕ್ಕೆ ತಕ್ಕಂತೆ ಒದು ಬಸ್‌ ವ್ಯವಸ್ಥೆಯನ್ನು ಮಾಡಲು ಜನಪ್ರತಿನಿಧಿಗಳು ಮತ್ತು ಶಾಲೆ ಆಡಳಿತ ವರ್ಗ ಕೂಡಲೇ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸುವ ಅಗತ್ಯವಿದೆ. ಬಸ್‌ ವ್ಯವಸ್ಥೆಯನ್ನು ಅಥವಾ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ