ಆ್ಯಪ್ನಗರ

ಮಿಶ್ರ ಬೆಳೆ ಬೆಳೆದು ಇತರರಿಗೆ ಮಾದರಿಯಾದ ಕೋಲಾರದ ಪ್ರಗತಿಪರ ರೈತ

ಕೋಲಾರದ ರೈತರೊಬ್ಬರ ಜಮೀನಿನಲ್ಲಿ ಒಮ್ಮೆ ಬೆಳೆದ ಬೆಳೆ ಮತ್ತೆ ಪುನರಾವರ್ತನೆ ಆಗುವುದಿಲ್ಲ. ಪ್ರತಿ ಭಾರಿಯು ಹೊಸ ಫಸಲು ಬರುತ್ತಲೇ ಇರುತ್ತದೆ. ಬೆಳದ ಬೆಳೆಯನ್ನೇ ಮತ್ತೆ ಬೆಳದು ನಷ್ಟಕ್ಕೆ ಒಳಗಾಗುವ ರೈತರಿಗೆ ಈ ವಿನೂತನ ವಿಧಾನ ವರದಾನವಾಗಿದೆ.

Vijaya Karnataka Web 17 Jan 2020, 6:31 pm
ಕೋಲಾರ: ಈ ರೈತನ ಜಮೀನಿನಲ್ಲಿ ಒಮ್ಮೆ ಬೆಳೆದ ಬೆಳೆ ಮತ್ತೆ ಪುನರಾವರ್ತನೆ ಆಗುವುದಿಲ್ಲ. ಪ್ರತಿ ಭಾರಿಯು ಹೊಸ ಫಸಲು ಬರುತ್ತಲೇ ಇರುತ್ತದೆ. ಬೆಳದ ಬೆಳೆಯನ್ನೇ ಮತ್ತೆ ಬೆಳದು ನಷ್ಟಕ್ಕೆ ಒಳಗಾಗುವ ರೈತರಿಗೆ ಈ ವಿನೂತನ ವಿಧಾನ ವರದಾನವಾಗಿದೆ.
Vijaya Karnataka Web agriculture
ಸಾಂಧರ್ಭಿಕ ಚಿತ್ರ


ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಲಿಂಗಾಪುರ ಗ್ರಾಮದ ರೈತ ಮಂಜುನಾಥ್‌ ಎಂಬುವವರು ತಮಗೆ ಇರುವ ಅಲ್ಪ ಪ್ರಮಾಣದ ಜಮೀನಿನಲ್ಲಿ ಹಲವು ರೀತಿಯ ಬೆಳೆ ಬೆಳೆದು ಪ್ರಗತಿಪರ ರೈತರಾಗಿ ಇತರರಿಗೆ ಮಾದರಿಯಾಗಿದ್ದಾರೆ. ತಮಗಿರುವ 4 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಹಲವು ರೀತಿಯ ಬೆಳೆ ಬೆಳೆಯುತ್ತ ಕೃಷಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳ ನಡುವೆಯೂ ರೈತ ಮಂಜುನಾಥ್‌ ವಿವಿಧ ಬಗೆಯ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಹೇಮಗಿರೀಶ ಹಾವಿನಾಳಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ

ಈ ಹಿಂದೆ ವಿವಿಧ ಬಗೆಯ ಮಾರ್ಕೋನಿ 05 ತಳಿಯ ಬಜ್ಜಿ ಮೆಣಸಿನಕಾಯಿ, ಹೂ ಕೋಸು, ಟೊಮ್ಯಾಟೋ, ಚೆಂಡು ಹೂ, ಕೊತ್ತಂಬರಿ ಸೊಪ್ಪು ಹಾಗೂ ಜೋಳವನ್ನು ಒಟ್ಟಿಗೆ ಬೆಳೆದಿದ್ದರು. ಇದೀಗ. ಕ್ಯಾರೇಟ್‌, ಟೊಮೋಟೊ, ಸೌತೇಕಾಯಿ, ಆಲೂಗಡ್ಡೆ ಬೆಳೆಗಳನ್ನು ಒಟ್ಟಿಗೆ ಬೆಳೆಯುತ್ತಿದ್ದಾರೆ.

ವ್ಯವಸಾಯದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಇವರು ರಾಜ್ಯದ ವಿವಿಧ ಕಡೆಗಳಲ್ಲಿರುವ ಮಾದರಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ವಿನೂತನ ಪ್ರಯೋಗಗಳನ್ನು ಗಮನಿಸಿ ತಮ್ಮ ಜಮೀನಿನಲ್ಲಿಅನುಷ್ಠಾನಕ್ಕೆ ತರುತ್ತಿದ್ದಾರೆ. ನೀರಿಗೆ ಇರುವ ಒಂದು ಕೊಳವೆ ಬಾವಿಯನ್ನೇ ಅವಲಂಬಿಸಿರುವ ಇವರು ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಹನಿ ನೀರಾವರಿ ಪದ್ದತಿ ಮೂಲಕ ಸಹ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.

ಬೆಳೆ ವೀಕ್ಷಿಸಲು ಬಂದ ತಂಡ : ಬೀಜದ ಗುಣಮಟ್ಟ, ಉತ್ಪನ್ನದ ಕಾರ್ಯಕ್ಷ ಮತೆ ಮತ್ತು ಗ್ರಾಹಕರ ಮೌಲ್ಯದ ದೃಷ್ಠಿಯಿಂದ ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮವಾದ ಉತ್ಪನ್ನವನ್ನು ನೀಡುತ್ತಿರುವ ಮಾರ್ಕೋನಿ 05 ತಳಿಯ ಬಜ್ಜಿ ಮೆಣಸಿನ ಕಾಯಿ ಬೆಳೆದ ಬೆಳೆಯನ್ನು ಯುನೈಟೆಡ್‌ ಜೆನೆಟಿಕ್ಸ್‌ ಕಂಪನಿಯವರು ಭೇಟಿ ನೀಡಿ ಇತರೆ ಜಿಲ್ಲೆಯ ರೈತರನ್ನು ಸಹ ಇವರ ತೋಟಕ್ಕೆ ಕರೆದುಕೊಂಡು ಬಂದು ವೀಕ್ಷಣೆ ಮಾಡಿ ಇತರರಿಗೆ ಇವರ ಉತ್ತಮ ಬೆಳೆಯ ಬಗ್ಗೆ ಮಾಹಿತಿ ನೀಡಿದರು.

ನೇರವಾಗಿ ಮಾರುಕಟ್ಟೆಗೆ ರವಾನೆ: ತಾವು ಬೆಳೆದ ಬೆಳೆಯನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅವರೇ ಮಾರುಕಟ್ಟೆಗೆ ತಲುಪಿಸಿ ತಮ್ಮ ಬೆಳೆಯನ್ನು ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ. ಬೆಲೆ ಇರಲಿ, ಇಲ್ಲದೆ ಇರಲಿ ಇತರೆ ರೈತರನ್ನು ಬಳಸಿ ಅವರ ಹೊಟ್ಟೆಪಾಡಿಗೂ ಹಣ ನೀಡುತ್ತಾರೆ. ಬೆಳೆದ ಬೆಳೆಯನ್ನು ಸ್ವತಃ ತಾವೇ ಖುದ್ದು ಮಾರುಕಟ್ಟೆಗೆ ರವಾನಿಸಿ ಲಾಭವೋ ನಷ್ಟವೋ ಮಧ್ಯವರ್ತಿಗಳಿಗೆ ಮಾತ್ರ ರೈತರು ಹಣ ಸೇರದೆ ಇವರೇ ನೇರ ಮಾರಾಟ ಮಾಡುತ್ತಿದ್ದಾರೆ.

ಈಗೆ ಹಲವು ವರ್ಷಗಳ ಹಿಂದೆ ತಾವಾಯಿತು ತಮ್ಮ ವ್ಯಾಪಾರವಾಯಿತು ಎಂಬಂತೆ ಇದ್ದ ಇವರ ಬದುಕು ಒಮ್ಮೆ ಕೃಷಿ ಬೇಸಾಯದ ಕಡೆ ಮುಖ ಮಾಡಿದ್ದೇ ಇವರು ಸಂಪೂರ್ಣವಾಗಿ ತಮ್ಮ ವ್ಯಾಪಾರ ವಹಿವಾಟು ಎಲ್ಲಾಬಿಟ್ಟು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಮಾಹಿತಿ ಹಾಗೂ ಪ್ರಗತಿಪರ ರೈತರ ಸಲಹೆ ಮೇರೆಗೆ ಕೃಷಿಯನ್ನೇ ಜೀವನವಾಗಿಸಿಕೊಂಡು ಇತರರಿಗೂ ಮಾದರಿಯಾಗುವ ರೀತಿಯಲ್ಲಿಕೃಷಿ ನಡೆಸುತ್ತಿದ್ದಾರೆ.

"ವ್ಯವಸಾಯದಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಒಂದೇ ತರನಾದ ಬೆಳೆ ಬೆಳೆದರೆ ರೈತನಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಎಲ್ಲ ಬಗೆಯ ವಿವಿಧ ಮಾದರಿಯ ಬೆಳೆ ಬೆಳೆದು ಕಾಲಕ್ಕೆ ತಕ್ಕಂತೆ ಪಾಲನೆ ಮಾಡಿದರೆ ಪ್ರತಿ ಬೆಳೆಯು ಆದಾಯ ತಂದು ಕೊಡುತ್ತದೆ. ರೈತರು ಹೆದರದೆ ವ್ಯವಸಾಯದಲ್ಲಿ ತೊಡಗಬೇಕು."
-ಲಿಂಗಾಪುರ ಮಂಜುನಾಥ್‌, ಪ್ರಗತಿಪರ ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ