ಆ್ಯಪ್ನಗರ

ಕಾಂಗ್ರೆಸ್‌, ಬಿಜೆಪಿ ದೂರವಿಟ್ಟು ಬಿಎಸ್ಪಿ ಗೆಲುವಿಗೆ ಶ್ರಮಿಸಿ

ಏಳು ಬಾರಿ ಗೆದ್ದು ಜಿಲ್ಲೆಯ ಪ್ರಗತಿ ಮಾಡದೆ ತಮ್ಮ ಕುಟುಂಬದವರ ಅಭಿವೃದ್ಧಿ ಮಾಡಿಕೊಂಡಿರುವ ಕೆ.ಎಚ್‌.ಮುನಿಯಪ್ಪ ಮತ್ತು ದೇಶದಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಬಿಎಸ್ಪಿ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಬಿಎಸ್ಪಿ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್‌ ಹೇಳಿದರು.

Vijaya Karnataka 12 Apr 2019, 5:00 am
ಶ್ರೀನಿವಾಸಪುರ: ಏಳು ಬಾರಿ ಗೆದ್ದು ಜಿಲ್ಲೆಯ ಪ್ರಗತಿ ಮಾಡದೆ ತಮ್ಮ ಕುಟುಂಬದವರ ಅಭಿವೃದ್ಧಿ ಮಾಡಿಕೊಂಡಿರುವ ಕೆ.ಎಚ್‌.ಮುನಿಯಪ್ಪ ಮತ್ತು ದೇಶದಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಬಿಎಸ್ಪಿ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಬಿಎಸ್ಪಿ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್‌ ಹೇಳಿದರು.
Vijaya Karnataka Web support bsp candidate
ಕಾಂಗ್ರೆಸ್‌, ಬಿಜೆಪಿ ದೂರವಿಟ್ಟು ಬಿಎಸ್ಪಿ ಗೆಲುವಿಗೆ ಶ್ರಮಿಸಿ


ಬಿಎಸ್ಪಿಯಿಂದ ಗುರುವಾರ ಪಟ್ಟಣದ ಎಂಜಿ ರಸ್ತೆಯಲ್ಲಿ ಏರ್ಪಡಿಸಿದ್ದ ಲೋಕಸಭೆ ಬಿಎಸ್ಪಿ ಅಭ್ಯರ್ಥಿ ಎಂ.ಜಿ.ಜಯಪ್ರಸಾದ್‌ ಅವರ ಪರ ರೋಡ್‌ ಶೋ ವೇಳೆ ಮಾತನಾಡಿ, ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾದ ನನಗೆ ಮತ ಹಾಕಿ ಗೆಲ್ಲಿಸಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌/ಜೆಡಿಎಸ್‌ ಅಂಗಡಿಗಳು ಬೇರೆ ಆದರೂ ಅಭಿವೃದ್ಧಿ ಮಾಡದೆ ಸುಳ್ಳು ಹೇಳಿ ಜನರನ್ನು ವಂಚಿಸುವ ಚುನಾವಣಾ ಅಜೆಂಡಗಳು ಒಂದೇ. ಅದುದರಿಂದ 3 ದಶಕಗಳಿಂದ ಜಿಲ್ಲೆಯ ಜನರ ಮತ ಪಡೆದು ಸಾವಿರಾರು ಎಕರೆ ಆಸ್ತಿ, ಅಂತಸ್ತು, ಪೆಟ್ರೋಲ್‌ ಬಂಕ್‌ಗಳು ತಮ್ಮ ಕುಟುಂಬಕ್ಕೆ ಸಂಬಂಧಿಕರಿಗೆ ಮಾಡಿಕೊಂಡು ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ ನೀಡದೆ ಜನರನ್ನು ವಂಚಿಸಿರುವ ಕೆ.ಎಚ್‌ ವಿರುದ್ಧ, ಜನರ ಪ್ರಗತಿಗೆ ಶ್ರಮಿಸುವ ಬಿಎಸ್ಪಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಬಾರಿ ಲೋಕಸಭ ಚುನಾವಣೆಯಲ್ಲಿ ಬಿಎಸ್ಪಿಗೆ 75 ಸೀಟು ಗೆದ್ದು ಮಾಯಾವತಿ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ನೋಟ್‌ ಬ್ಯಾನ್‌ ಮಾಡಿ, ಜಿಎಸ್ಟಿ ತೆರಿಗೆ ವಿಧಿಸುವ ಕೋಮುವಾದಿಗಳಿಗೆ ಅಧಿಕಾರ ಕೊಡಬಾರದು. ಮಾಯಾವತಿ ಈ ಹಿಂದೆ ಉತ್ತರ ಪ್ರದೇಶದಲ್ಲಿ ಸಿಎಂ ಆಗಿ ಶ್ರೀಸಾಮಾನ್ಯರ ಮೂಲ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡಿ ಉತ್ತಮವಾಗಿ ಕೆಲಸಗಳು ಮಾಡಿರುವ ಅವರು ಮತ್ತೆ ಪ್ರಧಾನಿಯಾದರೆ ದೇಶದ ಎಲ್ಲಾ ವರ್ಗದ ಜನರ ಪ್ರಗತಿ ಸಾದ್ಯ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ