ಆ್ಯಪ್ನಗರ

ಸಂಕ್ರಾಂತಿ ಮೆರವಣಿಗೆಗೆ ತಹಸೀಲ್ದಾರ್‌ ಚಾಲನೆ

ಶಿವಕೇಶವನಗರದ ಉದ್ಭವಶಿವಲಿಂಗೇಶ್ವರ ದೇವಸ್ಥಾನದಲ್ಲಿ,ಮುತ್ಯಾಲಪೇಟೆ ಗಂಗಮಾಂಭ ದೇಗುಲದಲ್ಲಿ , ಸಂಪ್ರದಾಯದಂತೆ ಕಾವೇರಪ್ಪ ನಾರಾಯಣಪ್ಪ ಮನೆ ಎದುರು ಬಲಿಪೂಜೆ ನೆರವೇರಿಸಿ ಭಜನೆ ಮಂದಿರದ ಎದುರು ತಹಸೀಲ್ದಾರ್‌ ಬಿ.ಎನ್‌ ಪ್ರವೀಣ್‌ ಸಂಕ್ರಾಂತಿ ಹಬ್ಬದ ಮೆರವಣಿಗೆಗೆ ಚಾಲನೆ ನೀಡಿದರು.

Vijaya Karnataka 16 Jan 2019, 8:36 pm
ಮುಳಬಾಗಲು: ಶಿವಕೇಶವನಗರದ ಉದ್ಭವಶಿವಲಿಂಗೇಶ್ವರ ದೇವಸ್ಥಾನದಲ್ಲಿ,ಮುತ್ಯಾಲಪೇಟೆ ಗಂಗಮಾಂಭ ದೇಗುಲದಲ್ಲಿ , ಸಂಪ್ರದಾಯದಂತೆ ಕಾವೇರಪ್ಪ ನಾರಾಯಣಪ್ಪ ಮನೆ ಎದುರು ಬಲಿಪೂಜೆ ನೆರವೇರಿಸಿ ಭಜನೆ ಮಂದಿರದ ಎದುರು ತಹಸೀಲ್ದಾರ್‌ ಬಿ.ಎನ್‌ ಪ್ರವೀಣ್‌ ಸಂಕ್ರಾಂತಿ ಹಬ್ಬದ ಮೆರವಣಿಗೆಗೆ ಚಾಲನೆ ನೀಡಿದರು.
Vijaya Karnataka Web tahasildar inagurates sankranti procession
ಸಂಕ್ರಾಂತಿ ಮೆರವಣಿಗೆಗೆ ತಹಸೀಲ್ದಾರ್‌ ಚಾಲನೆ


ಅವರು ಮಾತನಾಡಿ, ಹಿರಿಯರು ಆಚರಿಸುತ್ತಿದ್ದ ಹಬ್ಬ ಹರಿದಿನಗಳನ್ನು ಇಂದಿಗೂ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಯುವ ಪೀಳಿಗೆಕೂಡ ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

ನಗರ ಸಭಾಧ್ಯಕ್ಷ ಎಂ.ಆರ್‌. ಮುರಳಿ ಮಾತನಾಡಿ, ಸಂಕ್ರಾಂತಿ ಹಬ್ಬ ಅತ್ಯಂತ ವಿಶೇಷವಾದ ಹಬ್ಬ. ಜಾನಪದ ಸೊಗಡನ್ನು ಹೊಂದಿದ್ದು, ಪ್ರತಿಯೊಬ್ಬರು ಈ ಹಬ್ಬವನ್ನು ಸಂಭ್ರಮದಿಂದ ಅಚರಿಸುತ್ತಾರೆ. ಈ ಹಬ್ಬದಿಂದ ಜನಪದ ಸಾಹಿತ್ಯ ಸಂರಕ್ಷ ಣೆಗೆ ಸಹಕಾರಿಯಾಗುತ್ತದೆ. ಅಲ್ಲದೆ, ಈ ಹಬ್ಬ ಆಚರಿಸುವುದರಿಂದ ಸೋದರತ್ವ ಭಾವೈಕ್ಯತೆಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ನವನಾಗರಿಕತೆಯಿಂದ ಜಾನಪದ ಸಾಹಿತ್ಯ ನಶಿಸಿಹೋಗುತ್ತಿರುವ ಕಾಲಘಟ್ಟದಲ್ಲಿ ಸಂಕ್ರಾಂತಿ ಹಬ್ಬವನ್ನು ಪ್ರತಿಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ನಮ್ಮ ಆಚಾರ ವಿಚಾರ, ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವಂತೆ ತಿಳಿಸಿದರು.

ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಸಂಕ್ರಾಂತಿ ಹಬ್ಬ ಆಚರಿಸುವುದರಿಂದ ಭಾವೈಕ್ಯತೆ ಮೂಡುತ್ತದೆ ಎಂದು ತಿಳಿಸಿದರು. ರಾಸುಗಳನ್ನು ವಿಶೇಷ ಅಲಂಕರಿಸಲಾಗಿತ್ತು.

ಎಸ್‌.ಪಿ ಡಾ. ರೋಹಿಣಿ ಕಟೋಚ್‌ ಸಪೇಟ್‌, ಡಿ.ವೈ.ಎಸ್ಪಿ ಪಿ.ಬಿ.ಕೆ ಉಮೇಶ್‌, ಸಿ.ಪಿ.ಐ ಮಾರ್ಕೊಂಡಪ್ಪ ಪಿ.ಎಸ್‌.ಐ ಬೈರಾ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ರಾಸುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳನ್ನು ಸಂಚರಿಸಿದಾಗ ಪ್ರತಿ ಮನೆಯವರು ವಿಶೇಷ ಪೂಜೆ ಸಲ್ಲಿಸಿದರು.

ನಗರಸಭೆ ಆಯುಕ್ತ ಜಿ. ಶ್ರೀನಿವಾಸ ಮೂರ್ತಿ ಸಂಕ್ರಾಂತಿ ಹಬ್ಬದ ಮೆರವಣಿಗೆ ಸಮಿತಿ ಅಧ್ಯಕ್ಷ ಎಂ.ವೆಂಕಟೇಶ್‌, ಕಾರ್ಯದರ್ಶಿ ಎಂ ಪ್ರಭಾಕರ್‌, ತಾ.ಪಂ ಅಧ್ಯಕ್ಷ ಎ.ವಿ. ಶ್ರೀನಿವಾಸ್‌, ಸದಸ್ಯ ಸಿ.ವಿ.ಗೋಪಾಲ್‌, ಕೋಚಿಮುಲ್‌ ನಿರ್ದೇಶಕ ಆರ್‌. ಆರ್‌ ರಾಜೇಂದ್ರಗೌಡ, ಹಿರಿಯ ಮುಖಂಡ ಕಾವೇರಿ ನಾರಾಯಣಪ್ಪ, ನಗರಸಭೆ ಸದಸ್ಯರಾದ ಜಗನ್‌ ಮೊಹನ್‌ರೆಡ್ಡಿ, ಜಿ.ಎನ್‌ ಆರ್‌ ಸತೀಶ್‌, ಎನ್‌. ಸತೀಶ್‌, ಏನಿಗಲ ಮಂಜುನಾಥ್‌, ಡಿಷ್‌ಮಂಜುನಾಥ್‌, ಠಾಕೂರ್‌ಸಿಂಗ್‌, ಎಂ.ಎಸ್‌ ನಾರಾಯಣಸ್ವಾಮಿ, ಮುಖಂಡರಾದ ನಾಗಭೂಷಣ್‌, ರಾಜಶೇಖರ್‌, ಪೆದ್ದ ಕಸುವುರಾಜು, ಜಯಪ್ಪ, ಮುನಿವೆಂಕಟಪ್ಪ, ಉದ್ಭಶಿವಲಿಂಗೇಶ್ವರ ದೇವಾಲಯದ ಅಧ್ಯಕ್ಷ ಸೀನಪ್ಪ, ಕಾರ್ಯದರ್ಶಿ ಸಂಪಂಗಿರಾಮಯ್ಯ, ಎಂಜಿನಿಯರ್‌ ರೆಡ್ಡಪ್ಪ, ಕಾವೇರಿ ಮಂಜುನಾಥ್‌ ಸುರೇಶ್‌ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ