ಆ್ಯಪ್ನಗರ

ಶಿಕ್ಷಣದ ಕೋಮುವಾದೀಕರಣ ಖಂಡನೀಯ

ಶಿಕ್ಷ ಣದ ಭಾರತೀಕರಣದ ಹೆಸರಿನಲ್ಲಿ ಕೋಮುವಾದೀಕರಣ ಮತ್ತು ಖಾಸಗೀಕರಣಕ್ಕೆ ದಾರಿಮಾಡಿಕೊಟ್ಟಿರುವುದು ಖಂಡನೀಯ ಎಂದು ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎನ್‌.ಶಿವಪ್ಪ ತಿಳಿಸಿದರು.

Vijaya Karnataka 13 Aug 2019, 4:06 pm
ಮುಳಬಾಗಲು : ಶಿಕ್ಷ ಣದ ಭಾರತೀಕರಣದ ಹೆಸರಿನಲ್ಲಿ ಕೋಮುವಾದೀಕರಣ ಮತ್ತು ಖಾಸಗೀಕರಣಕ್ಕೆ ದಾರಿಮಾಡಿಕೊಟ್ಟಿರುವುದು ಖಂಡನೀಯ ಎಂದು ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎನ್‌.ಶಿವಪ್ಪ ತಿಳಿಸಿದರು.
Vijaya Karnataka Web the communalization of education is reprehensible
ಶಿಕ್ಷಣದ ಕೋಮುವಾದೀಕರಣ ಖಂಡನೀಯ


ನಗರದ ಸರಕಾರಿ ನೌಕರರ ಭವನದಲ್ಲಿ ಎಸ್‌ಎಫ್‌ಐ ವತಿಯಿಂದ ಏರ್ಪಡಿಸಿದ್ದ ತಾಲೂಕಿನ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೇಂದ್ರ ಸರಕಾರದ ಹೊಸ ರಾಷ್ಟ್ರೀಯ ಶಿಕ್ಷ ಣ ನೀತಿ -2019 ರ ಕರಡು ದಾಖಲೆಯು ಸಾರ್ವಜನಿಕ ಚರ್ಚೆಗೆ ಇಟ್ಟಿದೆ. 2ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಎನ್‌ಡಿಎ ಸರಕಾರ ಯಾರ ಜತೆಯೂ ಚರ್ಚಿಸದೇ ಏಕಮುಖವಾಗಿ ಈ ಕರಡನ್ನು ತಯಾರಿಸಿದೆ ಎಂದು ಹಲವಾರು ಶಿಕ್ಷ ಣ ತಜ್ಞರು ವಿಶ್ಲೇಷಿಸಿದ್ದಾರೆ. ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲ ಪದಗಳನ್ನು ತೆಗೆಯಲಾಗಿದೆ. ಶಿಕ್ಷ ಣದ ಖಾಸಗೀಕರಣ ಹಾಗೂ ಕೋಮುವಾದಿಕರಣಕ್ಕೆ ಈ ನೀತಿಯೂ ಮುಖಮಾಡಿ ನಿಂತಿದೆ ಎಂದು ತಿಳಿಸಿದರು.

ಭಾರತ ದೇಶವು ಹಲವು ಬಾಷಾ ರಾಷ್ಟ್ರೀಯತೆಗಳನ್ನು ಒಳಗೊಂಡ ಒಂದು ಒಕ್ಕೂಟ ರಾಷ್ಟ್ರವಾಗಿದೆ. ಶಿಕ್ಷ ಣವು ಈ ರಾಷ್ಟ್ರದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸೇರಿದ ಸಹವರ್ತಿ ಪಟ್ಟಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಇಂತಹ ಒಂದು ಪ್ರಮುಖ ಶೈಕ್ಷ ಣಿಕ ದಾಖಲೆಯೂ ದೇಶಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಬೇಕು. ಆದರೆ ಕೇಂದ್ರ ಸರಕಾರವು ಈ ದಾಖಲೆಯನ್ನು ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರವೇ ಒದಗಿಸಿದ್ದು ಈ ವಿಷಯದಲ್ಲಿ ಕೇಂದ್ರ ಸರಕಾರದ ಧೋರಣೆ ಏನು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಹಿಂದಿ ಹೇರಿಕೆ: ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ನೀಡಲಾಗಿರುವ ಎಲ್ಲಾ 22 ರಾಷ್ಟ್ರೀಯ ಭಾಷೆಗಳಲ್ಲಿಯೂ ಈ ದಾಖಲೆಯನ್ನು ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯ. ಇಂಗ್ಲಿಷ್‌ನ ಯಜಮಾನಿಕೆ ಹಾಗೂ ಹಿಂದಿ ಹೇರಿಕೆಯು ಇಲ್ಲಿ ಎದ್ದು ಕಾಣುತ್ತಿತ್ತು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ಸೇರಿದಂತೆ ಭಾರತದ ಇತರೆ ರಾಷ್ಟ್ರೀಯ ಭಾಷೆಗಳಿಗೆ ಅನುವಾದಿಸಲಾಗಿದೆ.

ವಿಶ್ಲೇಷಣೆ ಇಲ್ಲ: ಶಿಕ್ಷ ಣ ರಂಗದ ಸಮಸ್ಯೆಗಳ ಬಗ್ಗೆ ಆಳವಾದ ವಿಶ್ಲೇಷಣೆ ಇಲ್ಲ, ಭವಿಷ್ಯದ ಶಿಕ್ಷ ಣ ನೀತಿಯ ಬಗ್ಗೆ ಮಾತನಾಡುವ ಈ ಕರಡು ದಾಖಲೆಯಲ್ಲಿ ಪ್ರಸುತ್ತ ನಮ್ಮ ಶಿಕ್ಷ ಣ ವ್ಯವಸ್ಥೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳೇನು, ಬಿಕ್ಕಟ್ಟುಗಳೇನು ಎಂಬ ವಿಶ್ಲೇಷಣೆಯೇ ಇದರಲ್ಲಿ ಇಲ್ಲವಾಗಿದೆ. ಬಹುಮುಖ್ಯವಾಗಿ ನಾನಾ ಹಂತಗಳಲ್ಲಿ ಶಾಲೆಯನ್ನು ಬಿಡುವ ಮಕ್ಕಳ ಬಗೆಗೆ ಯಾವುದೇ ರೀತಿಯ ಪ್ರಸ್ತಾಪ ಇಲ್ಲದೆ ಇರುವುದು ಕರಡು ದಾಖಲೆಯ ಬಹುದೊಡ್ಡ ದೋಷವಾಗಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಸುರೇಶ್‌ ಬಾಬು, ಕಾರ್ಯದರ್ಶಿ ಆನಂದ ಕುಮಾರ್‌, ಸೇರಿದಂತೆ ಇತರೆ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಹಾಗೂ ನಾನಾ ಘಟಕಗಳ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ