ಆ್ಯಪ್ನಗರ

ದೇಶದ ಭವಿಷ್ಯ ರೈತನ ನೇಗಿಲ ಮೇಲೆ ನಿಂತಿದೆ : ಎಡಿಸಿ ಪುಷ್ಪಲತಾ

ಜನರು ಎಷ್ಟು ತರದ ಕೆಲಸ ಮಾಡಿದರು ರೈತನ ಕೆಲಸವೇ ಶ್ರೇಷ್ಠ. ನಮ್ಮ ದೇಶದ ಭವಿಷ್ಯ ರೈತನ ನೇಗಿಲ ಮೇಲೆ ನಿಂತಿದೆ ಎಂದು ಅಪರ ಜಿಲ್ಲಾಧಿಕಾರಿ ಪುಷ್ಪಲತಾ ತಿಳಿಸಿದರು.

Vijaya Karnataka 1 Jan 2019, 5:00 am
ಕೋಲಾರ: ಜನರು ಎಷ್ಟು ತರದ ಕೆಲಸ ಮಾಡಿದರು ರೈತನ ಕೆಲಸವೇ ಶ್ರೇಷ್ಠ. ನಮ್ಮ ದೇಶದ ಭವಿಷ್ಯ ರೈತನ ನೇಗಿಲ ಮೇಲೆ ನಿಂತಿದೆ ಎಂದು ಅಪರ ಜಿಲ್ಲಾಧಿಕಾರಿ ಪುಷ್ಪಲತಾ ತಿಳಿಸಿದರು.
Vijaya Karnataka Web the countrys fate stands on the farmers plate adc pushpalatha
ದೇಶದ ಭವಿಷ್ಯ ರೈತನ ನೇಗಿಲ ಮೇಲೆ ನಿಂತಿದೆ : ಎಡಿಸಿ ಪುಷ್ಪಲತಾ


ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಂದಟ್ಟಿ ಗ್ರಾಮದಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ದಿನಾಚಾರಣೆ ಮತ್ತು ಸುಗ್ಗಿ ಹಬ್ಬವನ್ನು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೇಗಿಲ ಮೇಲೆ ನಿಂತಿದೆ ಧರ್ಮ ಆದರೆ, ದುಡಿದು ಹೊಟ್ಟೆ ತುಂಬಿದ ಮೇಲೆ ಜನರಿಗೆ ಜಾತಿ, ಧರ್ಮ, ಎಂಬುದು ನೆನಪಾಗುತ್ತದೆ. ಇದನ್ನು ಹೊಗಲಾಡಿಸಬೇಕು ಎಂದ ಅವರು, ರೈತರು ಬೆಳೆದ ಬೆಳೆಗೆ ಸರಿಯಾದ ಫಲ ಸಿಕ್ಕರೆ ರೈತರು ಸಾಲಗಾರಾಗುವುದಿಲ್ಲ ಸರಕಾರವೇ ಸಾಲದಲ್ಲಿ ಮುಳುಗುತ್ತದೆ ಎಂದು ಹೇಳಿದರು.

ತಹಸೀಲ್ದಾರ್‌ ಗಾಯತ್ರಿ ಮಾತನಾಡಿ, ರೈತನೆಂದರೆ ದೇವರು ನಮಗೆ ಅನ್ನ ನೀಡಿ ಹಸಿರು ಜ್ಯೋತಿಯನ್ನು ಬೆಳಗಿಸುವವನು ರೈತ. ಆದರೆ, ಅವನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ದಲ್ಲಾಳಿಗಳ ಹಾವಳಿಯಿಂದ ಅನ್ಯಾಯಕ್ಕೊಳಗಾಗುತ್ತಿದ್ದಾನೆ ಎಂದು ವಿಷಾದಿಸಿದರು.

ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ರೈತರಿಗಾಗುತ್ತಿರುವ ಅನ್ಯಾಯಗಳನ್ನು ಸುಧಾರಿಸಲು ಯಾವ ರಾಜಕಾರಣಿಯಿಂದಲೂ ಸಾಧ್ಯವಾಗಲಿಲ್ಲ.

ಆದರಿಂದಲೇ ರೈತ ದಿನಾಚಾರಣೆಯನ್ನು ರಾಜಕಾರಣಿ ಮುಕ್ತವಾಗಿ ರೈತರ ಕಷ್ಟ ಅಧಿಕಾರಿಗಳ ಗಮನಕ್ಕೆ ತರಲು ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ರೈತ ದಿನಾಚಾರಣೆ ಹಮ್ಮಿಕೊಂಡಿದ್ದೇವೆ ಎಂದರು.

ನಂದಗುಡಿ ಠಾಣೆಯ ಪಿಎಸ್‌ಐ ಲಕ್ಷ್ಮೀನಾರಾಯಣ, ಪತ್ರಕರ್ತ ಅನಂತರಾಮ್‌, ಸೇವಾದಳ ಅಧ್ಯಕ್ಷ ಕೆ.ಎಸ್‌.ಗಣೇಶ್‌, ಸಂಘಟನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ರೈತ ಮುಖಂಡರಾದ ಬಳ್ಳಾರಿ ಮಹದೇವಪ್ಪ, ಕಣಗಾಲಮೂರ್ತಿ, ಸುಷ್ಮಶ್ರೀ, ಮಾದವ್‌ರಡ್ಡಿ, ಜಯಶ್ರೀ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ