ಆ್ಯಪ್ನಗರ

ಜೇನು ಹುಳ್ಳ ಕಚ್ಚಿ ಸಾವು

ತಾಲೂಕಿನ ಮೇಲಾಗಾಣಿ ಗ್ರಾಮದ ನಿವಾಸಿ ನಿವೃತ್ತ ಸಹಾಯಕ ಶಿಕ್ಷ ಣಾಧಿಕಾರಿ ಮೇಲಾಗಾಣಿ ಶ್ರೀರಾಮ್‌ (80) ರವರಿಗೆ ಜೇನುನೊಣ ಕಡಿತದಿಂದ ಮೃತರಾಗಿದ್ದಾರೆ.

Vijaya Karnataka 27 Dec 2018, 5:00 am
ಮುಳಬಾಗಲು: ತಾಲೂಕಿನ ಮೇಲಾಗಾಣಿ ಗ್ರಾಮದ ನಿವಾಸಿ ನಿವೃತ್ತ ಸಹಾಯಕ ಶಿಕ್ಷ ಣಾಧಿಕಾರಿ ಮೇಲಾಗಾಣಿ ಶ್ರೀರಾಮ್‌ (80) ರವರಿಗೆ ಜೇನುನೊಣ ಕಡಿತದಿಂದ ಮೃತರಾಗಿದ್ದಾರೆ.
Vijaya Karnataka Web the death of a honey bee
ಜೇನು ಹುಳ್ಳ ಕಚ್ಚಿ ಸಾವು


ಶ್ರೀಯುತರು ಗ್ರಾಮದಲ್ಲಿರುವ ಮಾವಿನತೋಟದಲ್ಲಿ ಕೂಲಿಗಾರರೊಂದಿಗೆ ಸ್ವಚ್ಚತೆ ಮಾಡುವ ಸಂದರ್ಭದಲ್ಲಿ ಹಠಾತ್ತನೆ ಜೇನುನೊಣಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗೆ ನಗರದ ದೊಡ್ಡಭದ್ರೇಗೌಡ ಆಸ್ಪತ್ರೆಗೆ ಕರೆತರಬೇಕಾದರೆ ದಾರಿ ಮಧ್ಯದಲ್ಲೇ ಮೃತಪಟ್ಟಿರುತ್ತಾರೆ.

ಮೃತರು ಶಿಕ್ಷ ಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು ಸಾವಿರಾರು ಜನ ಶಿಷ್ಯರನ್ನು ಹೊಂದಿದ್ದಾರೆ. ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಇವರು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಇವರ ನಿಧನಕ್ಕೆ ಜನಪ್ರತಿನಿಧಿಗಳು ಹಾಗೂ ಶಿಕ್ಷ ಣ ಇಲಾಖೆಯ ಅಧಿಕಾರಿಗಳು ಅವರ ಶಿಷ್ಯಂದಿರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇವರ ಅಂತ್ಯಕ್ರಿಯೆ ಡಿ.27ರಂದು ಬೆಳೆಗ್ಗೆ ನಡೆಯಲಿದೆ ಎಂದು ಇವರ ಪುತ್ರ ತಾಪಂ ಮಾಜಿ ಅಧ್ಯಕ್ಷ ಹಾಗೂ ವಕೀಲ ಎಂ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ