ಕೋಲಾರ : ಜಿಲ್ಲೆಯಲ್ಲಿ ಕಳೆದ 4 ತಿಂಗಳಿಂದ ಮಳೆ ಇಲ್ಲದಿದ್ದರೂ 13 ಡೆಂಗೆ ಪ್ರಕರಣಗಳು ಇದೆ ಎಂದರೆ ಸಂಬಂಧಪಟ್ಟ ಇಲಾಖೆ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಡಿಸಿ ಜೆ.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಮಲೇರಿಯ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳ ಕುರಿತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.
ಮಳೆ ಇಲ್ಲದೆಯೇ ಇಷ್ಟು ಪ್ರಕರಣಗಳಿದ್ದರೆ ಇನ್ನು ಮಳೆಗಾಲದಲ್ಲಿ ಎಷ್ಟು ಪ್ರಕರಣಗಳು ದಾಖಾಲಾಗಬಹುದು. ಇದಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿ ಇದ್ದು ಅದಕ್ಕೆ ಸಿಬ್ಬಂದಿ ತಂಡ ರಚಿಸಿದ್ದರೂ ಏನು ಕ್ರಮ ಕೈಗೊಂಡಿದೆ ತರಾಟೆಗೆ ತೆಗೆದುಕೊಂಡರು.
ಕಳೆದ 4 ತಿಂಗಳಲ್ಲಿ ಸಂಶಯಾಸ್ಪದ ಪ್ರಕರಣಗಳು 36 ಇದೆ. ಅದರಲ್ಲೂ ಜಿಲ್ಲಾ ಕೇಂದ್ರ ಕೋಲಾರದಲ್ಲಿ 17, ಮಾಲೂರು 1, ಬಂಗಾರಪೇಟೆ 9, ಮುಳಬಾಗಲು 7, ಕೆ.ಜಿ.ಎಫ್ 2 ಪ್ರಕರಣ ಸೇರಿದಂತೆ ಒಟ್ಟು 36 ಇದ್ದು ಇದರಲ್ಲಿ 13 ಪ್ರಕರಣ ದೃಢಪಟ್ಟಿದೆ. ಡೆಂಗೆ 13 ಪ್ರಕರಣ ಚಿಕೂನ್ ಗುನ್ಯಾ 10 ಪ್ರಕರಣಗಳಿವೆ.
ಕಳೆದ ವರ್ಷ ಮಲೇರಿಯಾ 8, ಡೆಂಗೆ 15, ಚಿಕೂನ್ ಗುನ್ಯಾ 30 ಇದೆ. ಆದರೆ ಈ ವರ್ಷ ಕೇವಲ 4 ತಿಂಗಳಲ್ಲಿ 13 ಪ್ರಕರಣ ಪತ್ತೆಯಾಗಿರುವುದು ನಿಮ್ಮ ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು.
ನಿಮ್ಮ ಇಲಾಖೆಗೆ ಕಾಯಿಲೆಗಳನ್ನು ನಿಯಂತ್ರಿಸುವುದೇ ನಿಮ್ಮ ಕೆಲಸವಾಗಿದೆ ಅದರೂ ಮಳೆಗೆ ಮುನ್ನ ಕಾಯಿಲೆಗಳು ಕಂಡು ಬಂದಿರುವುದು ನಿಮಗೆ ಕೆಲಸದ ಇಚ್ಚಾ ಕೊರತೆ ಇರುವುದು ಧೃಡಪಡೆಸಿದೆ ಹಾಗಾಗಿ ವ್ಯರ್ಥವಾಗಿ ನಿಮಗೆ ವೇತನವನ್ನು ಏಕೆ ನೀಡ ಬೇಕು? ವೇತನವನ್ನು ಏಕೆ ಸ್ಥಗಿತಗೊಳಿಸಬಾರದು ಎಂದು ನಿಯಂತ್ರಣಾಧಿಕಾರಿ ಕಮಲ ಅವರನ್ನು ಪ್ರಶ್ನಿಸಿದರು.
ಸಾರ್ವಜನಿಕರಿಗೆ ರೋಗಗಳ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೋಡಿಸ ಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಾಂಗಿಂಗ್ ಮಿಷನ್ ಇರಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಲು ಸೊಳ್ಳೆ ಮೊಟ್ಟೆಗಳನ್ನು ತಿನ್ನುವಂಥ ಮೀನುಗಳನ್ನು ಕೆರೆ, ಕುಂಟೆ ಜಾನುವಾರುಗಳ ತೊಟ್ಟಿಗಳಲ್ಲಿ ಬಿಡಬೇಕು.
ಸೊಳ್ಳೆ ಪರದೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಸುತ್ತಮುತ್ತಲಿನ ಸ್ವಚ್ಚತೆ ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಕರಪತ್ರಗಳು, ಗೋಡೆ ಬರಹಗಳ ಮೂಲಕ ಆಶಾ ಕಾರ್ಯಕರ್ತರಿಂದ ಮನೆ,ಮನೆ ಬೇಟಿ ನೀಡಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೋಲಾರ ನಗರದಲ್ಲಿನ ನಮ್ಮ ಮನೆ ಮುಂದೆ 10 ನಿಮಿಷ ಕುಳಿತು ಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅಷ್ಟು ಸೊಳ್ಳೆಗಳಿವೆ, ಇನ್ನು ಗ್ರಾಮೀಣ ಭಾಗಗಳಲ್ಲಿನ ಜನತೆಯ ಬದುಕಿನ ಬಗ್ಗೆ ಚಿಂತಿಸಬೇಕು. ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಮುಂದಿನ ಸಭೆಯ ಒಳಗೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿದ್ದಲ್ಲಿ ಕಠಿಣ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಡಾ.ಸರಸ್ವತಿ, ಡಾ.ಜಗಧೀಶ್, ಸಹಾಯಕ ಅಧಿಕಾರಿ ವೇಣುಗೋಪಾಲ್ ಮುಂತಾದವರು ಹಾಜರಿದ್ದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಮಲೇರಿಯ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳ ಕುರಿತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.
ಮಳೆ ಇಲ್ಲದೆಯೇ ಇಷ್ಟು ಪ್ರಕರಣಗಳಿದ್ದರೆ ಇನ್ನು ಮಳೆಗಾಲದಲ್ಲಿ ಎಷ್ಟು ಪ್ರಕರಣಗಳು ದಾಖಾಲಾಗಬಹುದು. ಇದಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಚೇರಿ ಇದ್ದು ಅದಕ್ಕೆ ಸಿಬ್ಬಂದಿ ತಂಡ ರಚಿಸಿದ್ದರೂ ಏನು ಕ್ರಮ ಕೈಗೊಂಡಿದೆ ತರಾಟೆಗೆ ತೆಗೆದುಕೊಂಡರು.
ಕಳೆದ 4 ತಿಂಗಳಲ್ಲಿ ಸಂಶಯಾಸ್ಪದ ಪ್ರಕರಣಗಳು 36 ಇದೆ. ಅದರಲ್ಲೂ ಜಿಲ್ಲಾ ಕೇಂದ್ರ ಕೋಲಾರದಲ್ಲಿ 17, ಮಾಲೂರು 1, ಬಂಗಾರಪೇಟೆ 9, ಮುಳಬಾಗಲು 7, ಕೆ.ಜಿ.ಎಫ್ 2 ಪ್ರಕರಣ ಸೇರಿದಂತೆ ಒಟ್ಟು 36 ಇದ್ದು ಇದರಲ್ಲಿ 13 ಪ್ರಕರಣ ದೃಢಪಟ್ಟಿದೆ. ಡೆಂಗೆ 13 ಪ್ರಕರಣ ಚಿಕೂನ್ ಗುನ್ಯಾ 10 ಪ್ರಕರಣಗಳಿವೆ.
ಕಳೆದ ವರ್ಷ ಮಲೇರಿಯಾ 8, ಡೆಂಗೆ 15, ಚಿಕೂನ್ ಗುನ್ಯಾ 30 ಇದೆ. ಆದರೆ ಈ ವರ್ಷ ಕೇವಲ 4 ತಿಂಗಳಲ್ಲಿ 13 ಪ್ರಕರಣ ಪತ್ತೆಯಾಗಿರುವುದು ನಿಮ್ಮ ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು.
ನಿಮ್ಮ ಇಲಾಖೆಗೆ ಕಾಯಿಲೆಗಳನ್ನು ನಿಯಂತ್ರಿಸುವುದೇ ನಿಮ್ಮ ಕೆಲಸವಾಗಿದೆ ಅದರೂ ಮಳೆಗೆ ಮುನ್ನ ಕಾಯಿಲೆಗಳು ಕಂಡು ಬಂದಿರುವುದು ನಿಮಗೆ ಕೆಲಸದ ಇಚ್ಚಾ ಕೊರತೆ ಇರುವುದು ಧೃಡಪಡೆಸಿದೆ ಹಾಗಾಗಿ ವ್ಯರ್ಥವಾಗಿ ನಿಮಗೆ ವೇತನವನ್ನು ಏಕೆ ನೀಡ ಬೇಕು? ವೇತನವನ್ನು ಏಕೆ ಸ್ಥಗಿತಗೊಳಿಸಬಾರದು ಎಂದು ನಿಯಂತ್ರಣಾಧಿಕಾರಿ ಕಮಲ ಅವರನ್ನು ಪ್ರಶ್ನಿಸಿದರು.
ಸಾರ್ವಜನಿಕರಿಗೆ ರೋಗಗಳ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೋಡಿಸ ಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಾಂಗಿಂಗ್ ಮಿಷನ್ ಇರಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಲು ಸೊಳ್ಳೆ ಮೊಟ್ಟೆಗಳನ್ನು ತಿನ್ನುವಂಥ ಮೀನುಗಳನ್ನು ಕೆರೆ, ಕುಂಟೆ ಜಾನುವಾರುಗಳ ತೊಟ್ಟಿಗಳಲ್ಲಿ ಬಿಡಬೇಕು.
ಸೊಳ್ಳೆ ಪರದೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಸುತ್ತಮುತ್ತಲಿನ ಸ್ವಚ್ಚತೆ ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಕರಪತ್ರಗಳು, ಗೋಡೆ ಬರಹಗಳ ಮೂಲಕ ಆಶಾ ಕಾರ್ಯಕರ್ತರಿಂದ ಮನೆ,ಮನೆ ಬೇಟಿ ನೀಡಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೋಲಾರ ನಗರದಲ್ಲಿನ ನಮ್ಮ ಮನೆ ಮುಂದೆ 10 ನಿಮಿಷ ಕುಳಿತು ಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅಷ್ಟು ಸೊಳ್ಳೆಗಳಿವೆ, ಇನ್ನು ಗ್ರಾಮೀಣ ಭಾಗಗಳಲ್ಲಿನ ಜನತೆಯ ಬದುಕಿನ ಬಗ್ಗೆ ಚಿಂತಿಸಬೇಕು. ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಮುಂದಿನ ಸಭೆಯ ಒಳಗೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿದ್ದಲ್ಲಿ ಕಠಿಣ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಡಾ.ಸರಸ್ವತಿ, ಡಾ.ಜಗಧೀಶ್, ಸಹಾಯಕ ಅಧಿಕಾರಿ ವೇಣುಗೋಪಾಲ್ ಮುಂತಾದವರು ಹಾಜರಿದ್ದರು.