ಆ್ಯಪ್ನಗರ

ಗ್ರಾಮಸ್ಥರಲ್ಲಿಆತಂಕ ಮೂಡಿಸಿರುವ ಕಾಡಾನೆಗಳು

ತಾಲೂಕಿನ ಸಕ್ಕನಹಳ್ಳಿ ಹಾಗೂ ಹೊಸಕೋಟೆ ಗ್ರಾಮಗಳ ಬಳಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಎರಡು ಕಾಡಾನೆಗಳು ಓಡಾಡಿ ಗ್ರಾಮಸ್ಥರು, ರೈತರಲ್ಲಿಆತಂಕ ಸೃಷ್ಟಿಸಿದೆ.

Vijaya Karnataka 17 Sep 2019, 5:00 am
ಬಂಗಾರಪೇಟೆ: ತಾಲೂಕಿನ ಸಕ್ಕನಹಳ್ಳಿ ಹಾಗೂ ಹೊಸಕೋಟೆ ಗ್ರಾಮಗಳ ಬಳಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಎರಡು ಕಾಡಾನೆಗಳು ಓಡಾಡಿ ಗ್ರಾಮಸ್ಥರು, ರೈತರಲ್ಲಿಆತಂಕ ಸೃಷ್ಟಿಸಿದೆ.
Vijaya Karnataka Web the forests that have become a concern among the villagers kolar news kannada news
ಗ್ರಾಮಸ್ಥರಲ್ಲಿಆತಂಕ ಮೂಡಿಸಿರುವ ಕಾಡಾನೆಗಳು


ಪಟ್ಟಣದಿಂದ ಮೂರು ಕಿ.ಮೀ ದೂರ ಹೊಸಕೋಟೆ ಗ್ರಾಮದ ಹೊರವಲಯದಲ್ಲಿಮಧ್ಯಾಹ್ನದವರೆಗೂ ಬೀಡುಬಿಟ್ಟಿದ್ದ ಎರಡು ಕಾಡಾನೆಗಳು ಸಕ್ಕನಹಳ್ಳಿ ಗ್ರಾಮದ ಬಳಿ ಸಂಜೆ ವೇಳೆಗೆ ಕಂಡು ಬಂದಿತು.

ತಾಲೂಕಿನ ಗಡಿಭಾಗದ ಮೂತನೂರು ಅರಣ್ಯ ಪ್ರದೇಶದ ಸುತ್ತಮುತ್ತ ಬೀಡುಬಿಟ್ಟಿದ್ದ ಕಾಡಾನೆಗಳು ಕಳೆದ ವಾರ ಮಾಲೂರು ವ್ಯಾಪ್ತಿಯಲ್ಲಿಕಂಡು ಬಂದಿದ್ದವು. ನಂತರ ತಮಿಳುನಾಡಿನ ಕಡೆ ಹೋಗಿದ್ದ ಕಾಡಾನೆಗಳು ಭಾನುವಾರ ರಾತ್ರಿ ಮೇವಿಗಾಗಿ ಬಂದಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗದಲ್ಲಿರೇಷ್ಮೆ ಸೊಪ್ಪು ಯಥೇಚ್ಛವಾಗಿ ಸಿಗುವುದರಿಂದ ಕಾಡಾನೆಗಳು ಅದನ್ನು ತಿನ್ನಲು ಬಂದಿರಬಹುದು. ರಾತ್ರಿ ವೇಳೆಗೆ ಬೇರೆ ಕಡೆಗೆ ಹೋಗಬಹುದು. ಅಲ್ಲಿವರೆಗೂ ಸಾರ್ವಜನಿಕರು, ರೈತರು ಅವುಗಳನ್ನು ಕೆಣಕಲು ಹೋಗಬಾರದು. ಕಾಡಾನೆಗಳು ಕಂಡು ಬಂದರೆ ಅರಣ್ಯ ಇಲಾಖೆಗೆ ತಿಳಿಸಿ. ಮುಂಜಾಗ್ರತೆಯಿಂದ ಓಡಾಡಿ ಎಂದು ಗ್ರಾಮಸ್ಥರಲ್ಲಿಅಧಿಕಾರಿಗಳು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿತಾಲೂಕಿನ ಗಡಿಭಾಗದ ಕಾಡಂಚಿನ ಗ್ರಾಮಗಳ ಬಳಿ ಕಂಡು ಬರುತ್ತಿದ್ದ ಕಾಡಾನೆಗಳು ನಾಡಿನ ಪ್ರದೇಶಕ್ಕೆ ಬಂದಿರುವುದು ಜನರಿಗೆ ಆತಂಕ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ