ಆ್ಯಪ್ನಗರ

ಆಗಲೇ ಜಾಗೃತಿಗೊಂಡಿದ್ದರೆ ಸರಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾದಾಗಿಂದಲೂ ಶಾಸಕರ ವ್ಯಾಪಾರಕ್ಕೆ ಬಿಜೆಪಿ ಯತ್ನಿಸುತ್ತಲೇ ಇದೆ. ನನ್ನ ವ್ಯಾಪಾರಕ್ಕೆ ಬಂದಿದ್ದಾಗಲೇ ವರಿಷ್ಠರಿಗೆ ವಿಚಾರ ತಿಳಿಸಿದ್ದೆ. ಆಗ ಜಾಗೃತಿಗೊಂಡಿದ್ದರೆ ಬಹುಷಃ ಸರಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 18 Jul 2019, 5:00 am
ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾದಾಗಿಂದಲೂ ಶಾಸಕರ ವ್ಯಾಪಾರಕ್ಕೆ ಬಿಜೆಪಿ ಯತ್ನಿಸುತ್ತಲೇ ಇದೆ. ನನ್ನ ವ್ಯಾಪಾರಕ್ಕೆ ಬಂದಿದ್ದಾಗಲೇ ವರಿಷ್ಠರಿಗೆ ವಿಚಾರ ತಿಳಿಸಿದ್ದೆ. ಆಗ ಜಾಗೃತಿಗೊಂಡಿದ್ದರೆ ಬಹುಷಃ ಸರಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web the government would not have come to this position if it had already been aware
ಆಗಲೇ ಜಾಗೃತಿಗೊಂಡಿದ್ದರೆ ಸರಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ


ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಬಿಜೆಪಿಯವರು ಸರಕಾರವನ್ನು ಕೆಡವುದಕ್ಕೆ ಕುದುರೆ ವ್ಯಾಪಾರಕ್ಕೆ ಈಗಷ್ಟೆ ಮುಂದಾಗಿಲ್ಲ. ಸರಕಾರ ಆರಂಭಗೊಂಡಾಗಿ

ನಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.ಈ ಮೊದಲು 5ಕೋಟಿರೂ. ತಂದುಕೊಟ್ಟಿದ್ದರು. ಆಗ ಅದನ್ನು ವಾಪಸ್‌ ಕಳುಹಿಸಿದ್ದೆ. ಅಲ್ಲದೆ, ನಮ್ಮ ಪಕ್ಷ ದ ವರಿಷ್ಠರ ಗಮನಕ್ಕೂ ತಂದಿದ್ದೆ.

ಆದರೆ,ಅವರು ಆ ವಿಚಾರವಾಗಿ ಹೆಚ್ಚಿನ ಆದ್ಯತೆ ನೀಡಲಿಲ್ಲ. ನಿರ್ಲಕ್ಷ್ಯದ ಪರಿಣಾಮ ಇಂದು ಕಾಂಗ್ರೆಸ್‌ ಶಾಸಕರ ಜತೆಯಲ್ಲಿ ಜೆಡಿಎಸ್‌ ಶಾಸಕರು ರಾಜಿನಾಮೆ ಸಲ್ಲಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ಹೇಳಿದರು.

ಅತೃಪ್ತರಿಗೆ ಒಳ್ಳೆಯ ಬುದ್ಧಿ ಬರಲಿ: ಕ್ಷೇತ್ರದ ಜನರು, ಪಕ್ಷ ದವರು ನಂಬಿ ಶಾಸಕರಾಗಿ ಆಯ್ಕೆಯಾದ ಬಳಿಕ ಅವರಿಗೆ ದ್ರೋಹ ಬಗೆಯುವ ಕೆಲಸಕ್ಕೆ ಯಾವುದೇ ಪಕ್ಷ ದ ಶಾಸಕರು ಮಾಡಬಾರದು. ಹೀಗಾಗಿ ಇನ್ನೂ ಕಾಲಾವಕಾಶ ಇರುವುದರಿಂದಾಗಿ ಅತೃಪ್ತ ಶಾಸಕರು ಕೂಡಲೇ ವಾಪಸ್ಸಾಗಿ ಪಕ್ಷ ದ ಬೆಳವಣಿಗೆಗೆ ಮುಂದಾಗಬೇಕಿದ್ದು, ಅದಕ್ಕಾಗಿ ಅವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಹೇಳಿದರು.

ನಾನು ದಿ.ಸಿ.ಬೈರೇಗೌಡರು, ವೆಂಕಟಗಿರಿಯಪ್ಪನವರ ಹಾದಿಯಲ್ಲಿ ಬೆಳೆದು ಬಂದಿರುವವನು. ಗೆದ್ದಾಗಲೂ, ಸೋತಾಗಲೂ ಜನರೊಂದಿಗೆ ಇದ್ದೇನೆ. ಹೀಗಾಗಿ ನನ್ನನ್ನು ಹಣಕ್ಕೆ ಖರೀದಿ ಮಾಡಲು ಆಗುವುದಿಲ್ಲ. ಸುಪ್ರಿಂಕೋರ್ಟ್‌ನಿಂದ ಬಂದಿರುವ ತೀರ್ಪಿನ ಆಧಾರದ ಮೇರೆಗೆ ಕ್ರಮಕೈಗೊಳ್ಳಲಿದ್ದು, ಸರಕಾರದ ಅಳಿವು ಉಳಿವು ಅವರ ಕೈಯಲ್ಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇಫೊ್ಕೕ ರಸಗೊಬ್ಬರ ಮಾರಾಟ ದರದಲ್ಲಿ ಇಳಿಕೆ: ಶಾಸಕ

ದೇಶದಲ್ಲಿ ಅತಿ ಹೆಚ್ಚು ರಸಗೊಬ್ಬರ ತಯಾರಕ ಮತ್ತು ಮಾರಾಟ ಮಾಡುವ ರೈತರ ಸಂಸ್ಥೆ ಇಫೊ್ಕೕ ಸಂಸ್ಥೆ ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪದೊಂದಿಗೆ ರಸಗೊಬ್ಬರ ಮಾರಾಟ ದರವನ್ನು ಕಡಿತಗೊಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ , ಶಾಸಕ ಕೆ. ಶ್ರೀನಿವಾಸಗೌಡ ತಿಳಿಸಿದರು.

1400ರೂ. ಇದ್ದ ಡಿಎಪಿ ರಸಗೊಬ್ಬರ 1300ರೂ, 1365ರೂಗಳಿದ್ದ 10-26-26 1250ರೂ, 1375ರೂ.ಗಳಿದ್ದ 12-32-16 1260ರೂ ಹಾಗೂ 1065ರೂ.ಗಳಿದ್ದ 20-20-0-13 ರಸಗೊಬ್ಬರ 1000ರೂ.ಗಳಾಗಿದ್ದು, ಆ ಮೂಲಕ ರೈತರಿಗೆ ಇಫೊ್ಕೕ ಸಂಸ್ಥೆಯ ಉತ್ತಮ ಕಾಣಿಕೆ ನೀಡಿದೆ. ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ