ಆ್ಯಪ್ನಗರ

ನೀರಿಗಾಗಿ ರಸ್ತೆ ಬಂದ್‌ ಮಾಡಿದ ಜಯನಗರದ ಸಾರ್ವಜನಿಕರು

6 ತಿಂಗಳಿಂದ ನೀರು ಸರಬರಾಜು ಮಾಡದೇ ತಮ್ಮ ವಾರ್ಡಿನ ಬಗ್ಗೆ ನಿರ್ಲಕ್ಷ ್ಯ ತೋರಿರುವ ನಗರಸಭೆ ವಿರುದ್ಧ ಸಿಡಿದೆದ್ದ ಜಯನಗರದ ಹಿರಿಯ ನಾಗರಿಕರ ವೇದಿಕೆ ಮುಖಂಡರು ಶುಕ್ರವಾರ ಟೇಕಲ್‌ ರಸ್ತೆಯಲ್ಲಿ ರಸ್ತೆ ತಡೆನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 15 Jun 2019, 5:00 am
ಕೋಲಾರ: 6 ತಿಂಗಳಿಂದ ನೀರು ಸರಬರಾಜು ಮಾಡದೇ ತಮ್ಮ ವಾರ್ಡಿನ ಬಗ್ಗೆ ನಿರ್ಲಕ್ಷ ್ಯ ತೋರಿರುವ ನಗರಸಭೆ ವಿರುದ್ಧ ಸಿಡಿದೆದ್ದ ಜಯನಗರದ ಹಿರಿಯ ನಾಗರಿಕರ ವೇದಿಕೆ ಮುಖಂಡರು ಶುಕ್ರವಾರ ಟೇಕಲ್‌ ರಸ್ತೆಯಲ್ಲಿ ರಸ್ತೆ ತಡೆನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web the public of jayanagar who has made the road for water
ನೀರಿಗಾಗಿ ರಸ್ತೆ ಬಂದ್‌ ಮಾಡಿದ ಜಯನಗರದ ಸಾರ್ವಜನಿಕರು


ಬೆಳಗ್ಗೆ 11 ಗಂಟೆ ಸುಮಾರಿಗೆ ಟೇಕಲ್‌ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಈ ಭಾಗದ ನಾಗರಿಕರು, ಮಹಿಳೆಯರು ಮಿನಿ ಹೋಟೆಲ್‌ ವೃತ್ತದಲ್ಲಿ ಮೊದಲು ಧರಣಿ ನಡೆಸಿದರು.

ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಾರದ್ದನ್ನು ಕಂಡು ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಧರಣಿಯನ್ನು ಆಗ್ರೋ ಕಚೇರಿ ಎದುರಿಗೆ ಸ್ಥಳಾಂತರಿಸಿ ನಗರಸಭೆ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗುತ್ತಾ ಹೋರಾಟ ಮುಂದುವರಿಸಿದರು.

ಸ್ಥಳಕ್ಕೆ ಬಂದ ನಗರಾಭಿವೃದ್ಧಿ ಕೋಶದ ನಿರ್ದೇಶಕ ರಂಗಸ್ವಾಮಿ, ನಗರಸಭೆ ಎಂಜಿನಿಯರ್‌ ಸುಧಾಕರಶೆಟ್ಟಿ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

6 ತಿಂಗಳಿಂದ ನೀರು ಬಂದಿಲ್ಲ, ನಾಲ್ಕೈದು ಬಾರಿ ಮನವಿ ನೀಡಿದ್ದೇವೆ, ಮೇ 31ರಂದು ನಗರಸಭೆ ಎದುರು ಧರಣಿನಡೆಸಿ ಡಿಸಿಯವರಿಗೂ ಮನವಿ ಸಲ್ಲಿಸಿದ್ದೇವೆ, ಅವರು ನೀಡಿದ ಭರವಸೆಯೂ ಈಡೇರಲಿಲ್ಲ ಅಧಿಕಾರಿ ವರ್ಗದ ಈ ನಿರ್ಲಕ್ಷ ್ಯ ಧೋರಣೆಯಿಂದಲೇ ನಾವಿಂದು ರಸ್ತೆಗೆ ಬರಬೇಕಾಯಿತು ಎಂದರು.

ರೈತಸಂಘದ ನಾರಾಯಣಸ್ವಾಮಿ, ಮುಖಂಡ ಬೈಲಪ್ಪ, ಸಮಿತಿ ಉಪಾಧ್ಯಕ್ಷ ಪ್ರಮೋದ್‌ ಕುಮಾರ್‌ ಮತ್ತಿತರರು ಮಾತನಾಡಿ, ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಲಿ ನೀವು ವಾಪಸ್‌ ಹೋಗಿ ಎಂದು ತಾಕೀತು ಮಾಡಿದರು.

ಕಳೆದ ಬಾರಿ ನಗರಸಭೆ ಎದುರು ಧರಣಿ ಮಾಡಿದಾಗ ನೀವು ನೀಡಿದ ಭರವಸೆ ಈಡೇರಿಸಿಲ್ಲ, ನೀರು ನೀಡಿಲ್ಲ ಎಂದ ಮೇಲೆ ನಿಮಗೇನು ಇಲ್ಲಿ ಕೆಲಸ ಎಂದು ಪ್ರಶ್ನಿಸಿದರು.

ನಗರೋತ್ಥಾನ-3 ಯೋಜನೆಯಲ್ಲಿ ಜಯನಗರ 8ನೇ ರಸ್ತೆಯಲ್ಲಿನ ಕೊಳವೆ ಬಾವಿ ರೀ-ಬೋರ್‌ ಮಾಡಲು ಆಗ್ರಹಿಸಿದ ನಾಗರಿಕರು, ಡಿಸಿ ಬರುವವರೆಗೂ ಧರಣಿ ಮುಂದುವರೆಸೋಣ ಎಂದು ಪಟ್ಟುಹಿಡಿದರು.

ನಗರಾಭಿವೃದ್ಧಿ ಕೋಶದ ನಿರ್ದೇಶಕ ರಂಗಸ್ವಾಮಿ, ಡಿಸಿಯವರು ಊರಲ್ಲಿಲ್ಲ, ನನಗೆ 3 ದಿನ ಕಾಲಾವಕಾಶ ನೀಡಿ ನೀರಿನ ಸಮಸ್ಯೆ ಪರಿಹರಿಸುವೆ ಎಂದು ಕೋರಿದರು.

ಎಲ್ಲಾ ನಾಗರಿಕರ ತೀರ್ಮಾನದಂತೆ ಕೊನೆಗೂ ತಾತ್ಕಾಲಿಕವಾಗಿ ಧರಣಿ ವಾಪಸ್‌ ಪಡೆಯಲಾಯಿತು. ನೀವು ಹೇಳಿದಂತೆ 3 ದಿನದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಟೇಕಲ್‌ ಕ್ರಾಸ್‌ನಲ್ಲೇ ರಸ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಾಗರಿಕ ವೇದಿಕೆ ವಕೀಲ ಕೆ.ಆರ್‌.ಧನರಾಜ್‌, ನಿವೃತ್ತ ಪೋಸ್ಟ್‌ ಮಾಸ್ಟರ್‌ ಶ್ರೀರಾಮಪ್ಪ, ನಗರಸಭೆ ಮಾಜಿ ಸದಸ್ಯ ಮುರಳಿಗೌಡ, ನಿವೃತ್ತ ಮುಖ್ಯ ಶಿಕ್ಷ ಕ ಎಸ್‌.ಸಿ. ವೆಂಕಟಕೃಷ್ಣ, ಶ್ರೀರಾಮರೆಡ್ಡಿ, ಪರಮೇಶ್‌,ರಮೇಶ್‌, ಶಿವಣ್ಣ, ಮಂಜುನಾಥ್‌, ಬೈಯಣ್ಣ, ಶಾಂತಮ್ಮ, ಶೋಭಾ, ಡೇರಿ ಗೋವಿಂದಪ್ಪ, ಡೇರಿ ಪ್ರಕಾಶ್‌ ಸೇರಿದಂತೆ 14ನೇ ವಾರ್ಡಿನ ನೂರಾರು ನಾಗರಿಕರು, ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ