ಆ್ಯಪ್ನಗರ

ಪೆದ್ದಪಲ್ಲಿಯಲ್ಲಿ ವಜ್ರವಿಲ್ಲ: ವದಂತಿಗೆ ಕಿವಿಗೊಡಬೇಡಿ

ಕೆಜಿಎಫ್‌ ಬಳಿಯ ಪೆದ್ದಪಲ್ಲಿಯಲ್ಲಿ ಪತ್ತೆಯಾದ ಅಪರೂಪದ ಖನಿಜ ಸಂಪತ್ತಿನಲ್ಲಿ ವಜ್ರವಿದೆ ಎಂಬುದು ಸುಳ್ಳು. ಇಂತಹ ಸುದ್ದಿಗೆ ಕಿವಿಕೊಡಬಾರದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

Vijaya Karnataka 15 Jan 2019, 5:00 am
ಕೋಲಾರ : ಕೆಜಿಎಫ್‌ ಬಳಿಯ ಪೆದ್ದಪಲ್ಲಿಯಲ್ಲಿ ಪತ್ತೆಯಾದ ಅಪರೂಪದ ಖನಿಜ ಸಂಪತ್ತಿನಲ್ಲಿ ವಜ್ರವಿದೆ ಎಂಬುದು ಸುಳ್ಳು. ಇಂತಹ ಸುದ್ದಿಗೆ ಕಿವಿಕೊಡಬಾರದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.
Vijaya Karnataka Web there is no diamond in pedapalilla do not listen to rumor
ಪೆದ್ದಪಲ್ಲಿಯಲ್ಲಿ ವಜ್ರವಿಲ್ಲ: ವದಂತಿಗೆ ಕಿವಿಗೊಡಬೇಡಿ


ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಜಿಯಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ ಸಂಸ್ಥೆಯವರು 'ಪೈರೋಕ್ಲಾಸ್ಟಿಕ್‌ ರಾಕ್ಸ್‌' ಇದೆ ಎಂದು ಹಾಗೂ ಆ ಜಾಗವನ್ನು ಸರ್ವೇ ಮಾಡಿಕೊಡುವಂತೆ ತಿಳಿಸಿದ್ದರು. ಜ್ವಾಲಾಮುಖಿಯಿಂದಾದ ಈ ರಾಕ್ಸ್‌ (ಖನಿಜ) ಸಂಶೋಧನೆ ದೃಷ್ಟಿಯಿಂದ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದರು. ಸರಕಾರಿ, ಖಾಸಗಿ ಜಮೀನಿರುವ ಸರ್ವೇ ನಂ. 15ಮತ್ತು 17ರಲ್ಲಿನ 3.8ಎಕರೆ ಪ್ರದೇಶದಲ್ಲಿ ಈ ರಾಕ್ಸ್‌ ಇದೆ. ಸರ್ವೇ ಮಾಡಿ, ಈಗಾಗಲೆ ಸಂಸ್ಥೆಯವರಿಗೆ ಕಳುಹಿಸಲಾಗಿದೆ. ಖಾಸಗಿ ಜಮೀನುದಾರರಿಂದ, ಆ ಜಮೀನು ಪಡೆದು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ವೇ ಆಫ್‌ ಇಂಡಿಯಾದವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ರಾಸುಗಳ ಓಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೂ ಅನುಮತಿ ನೀಡಿಲ್ಲ. ಯಾವೊಬ್ಬರು ಅರ್ಜಿ ಸಲ್ಲಿಸಿಲ್ಲ. ಈವರೆಗೆ ಇಂತಹ ವಿಷಯ ನಮ್ಮ ಗಮನಕ್ಕೂ ಬಂದಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ