ಆ್ಯಪ್ನಗರ

ಕೊನೆಗೂ ಮಂಗಳೂರಿನಿಂದ ಆಂಧ್ರ ಪ್ರದೇಶ ಸೇರಿದ ಸಾವಿರಾರು ಮೀನುಗಾರರು

ಮಂಗಳೂರು ಬಂದರಿನಿಂದ ಯಾಂತ್ರೀಕೃತ ದೋಣಿಗಳಲ್ಲಿ ಕೆಲಸ ಮಾಡುತ್ತಿದ್ದ 1,400ಕ್ಕೂ ಹೆಚ್ಚಿನ ಕಾರ್ಮಿಕರು ಕಳೆದ ಶನಿವಾರ ಕೋಲಾರ ಜಿಲ್ಲೆಯ ನಂಗಲಿ ಚೆಕ್‌ಪೋಸ್ಟ್‌ ಬಂದಿದ್ದರು. ಆದರೆ, ಆಂಧ್ರ ಸರಕಾರ ಅವರಿಗೆ ಪ್ರವೇಶ ನಿರಾಕರಿಸಿದ್ದರಿಂದ ಅವರು ಇಲ್ಲೇ ಉಳಿದುಕೊಳ್ಳಬೇಕಾಗಿ ಬಂದಿತ್ತು.

Vijaya Karnataka 30 Mar 2020, 7:54 pm

ಕೋಲಾರ: ಮೀನುಗಾರರ ಒತ್ತಡಕ್ಕೆ ಮಣಿದ ಆಂಧ್ರ ಪ್ರದೇಶ ಸರಕಾರ ಕೊನೆಗೂ ಮಂಗಳೂರಿನಿಂದ ಸಾವಿರಾರು ಕಾರ್ಮಿಕರಿಗೆ ಊರುಗಳಿಗೆ ಹೋಗಲು ಅನುಮತಿ ನೀಡಿದ್ದು, ಭಾನುವಾರ ತಡರಾತ್ರಿ ಮೀನುಗಾರರು ಆಂಧ್ರಕ್ಕೆ ಹೋಗಿದ್ದಾರೆ.
Vijaya Karnataka Web andhra-fishermen


ಮಂಗಳೂರು ಬಂದರಿನಿಂದ ಯಾಂತ್ರೀಕೃತ ದೋಣಿಗಳಲ್ಲಿ ಕೆಲಸ ಮಾಡುತ್ತಿದ್ದ 1,400ಕ್ಕೂ ಹೆಚ್ಚಿನ ಕಾರ್ಮಿಕರು ಕಳೆದ ಶನಿವಾರ ಕೋಲಾರ ಜಿಲ್ಲೆಯ ನಂಗಲಿ ಚೆಕ್‌ಪೋಸ್ಟ್‌ ಬಂದಿದ್ದರು. ಆದರೆ, ಆಂಧ್ರ ಸರಕಾರ ಅವರಿಗೆ ಪ್ರವೇಶ ನಿರಾಕರಿಸಿತ್ತು.

ಇದರಿಂದಾಗಿ ನಂಗಲಿ ಚೆಕ್‌ಪೋಸ್ಟ್‌ನಲ್ಲಿಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಡಳಿತದಿಂದಲೇ ಅವರಿಗೆ ಊಟ-ವಸತಿ ಕಲ್ಪಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇನ್ನು ಮೀನುಗಾರರು ಆಂಧ್ರಕ್ಕೆ ಹೋಗಲೇಬೇಕೆಂದು ಪಟ್ಟು ಹಿಡಿದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇನ್ನು ಮೀನುಗಾರರಿಂದ ಕೊರೊನಾ ವೈರಸ್‌ ಹರಡುವ ಆತಂಕದಿಂದ ಗ್ರಾಮಸ್ಥರು ಅವರನ್ನು ರಾಜ್ಯದಲ್ಲಿ ಇರಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರ ನಡುವೆಯೂ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮೀನುಗಾರರಿಗೆ ಅಗತ್ಯ ವ್ಯವಸ್ಥೆ ಮಾಡಿದ್ದರು.

ಮಂಗಳೂರಿಂದ ಆಂಧ್ರಕ್ಕೆ ವಾಪಸಾಗುತ್ತಿದ್ದ 1,400 ಮೀನುಗಾರರಿಗೆ ಕೋಲಾರದಲ್ಲಿ ನಿರ್ಬಂಧ!

ಜತೆಗೆ ಮೀನುಗಾರರ ರಕ್ತ ಹಾಗೂ ಕಫಾ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಯಾರಲ್ಲಿಯೂ ಪಾಸಿಟಿವ್‌ ಕಂಡುಬಂದಿರಲಿಲ್ಲ. ಆದರೆ, ಊರಿಗೆ ಹೋಗಲೇಬೇಕೆಂದು ಪಟ್ಟು ಹಿಡಿದಿದ್ದ ಮೀನುಗಾರರು ತಮಗೆ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ತಮ್ಮ ಶಾಸಕರಿಗೆ ದೂರು ನೀಡಿದ್ದರು.

ಆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಹಲವು ಶಾಸಕರು ಸರಕಾರದ ಮೇಲೆ ಒತ್ತಡ ತಂದಿದ್ದರಿಂದ ಮೀನುಗಾರರನ್ನು ಕರೆಸಿಕೊಳ್ಳಲು ಸರಕಾರ ಚಿತ್ತೂರು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದರಿಂದ ಭಾನುವಾರ ತಡರಾತ್ರಿ ಅವರನ್ನು ಆಂಧ್ರಕ್ಕೆ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ