ವಾಹನ ಚಾಲನೆಯಲ್ಲಿ ಜಾಗೃತಿ, ಸಮಯ ಪ್ರಜ್ಞೆ ಮುಖ್ಯ
ವಾಹನ ಚಾಲನೆಯಲ್ಲಿ ಜಾ ಗೃತಿ ಮತ್ತು ಸಮಯ ಪ್ರಜ್ಞೆ ಮುಖ್ಯ. ಕೆಲವೊಮ್ಮೆ ಅರಿವು ಇಲ್ಲದೆ, ಇನ್ನು ಕೆಲವರು ಅರಿವು ಇದ್ದರೂ ತಪ್ಪುಗಳನ್ನು ಮಾಡುತ್ತಿದ್ದಾರೆ. ರಸ್ತೆ ಸುರಕ್ಷ ತೆ, ಸಾರಿಗೆ ನಿಯಮ ಮತ್ತು ಸಾರಿಗೆ ಕಾನೂನು ಪಾಲನೆ ಕುರಿತು ವಾಹನ ಚಾಲಕರು ತಿಳಿದುಕೊಳ್ಳಬೇಕು ಎಂದು ಡಿವೈಎಸ್ಪಿ ಚೌಡಪ್ಪ ಸೂಚಿಸಿದರು.
Vijaya Karnataka 4 Jul 2019, 3:03 pm
ಕೋಲಾರ: ವಾಹನ ಚಾಲನೆಯಲ್ಲಿ ಜಾ ಗೃತಿ ಮತ್ತು ಸಮಯ ಪ್ರಜ್ಞೆ ಮುಖ್ಯ. ಕೆಲವೊಮ್ಮೆ ಅರಿವು ಇಲ್ಲದೆ, ಇನ್ನು ಕೆಲವರು ಅರಿವು ಇದ್ದರೂ ತಪ್ಪುಗಳನ್ನು ಮಾಡುತ್ತಿದ್ದಾರೆ. ರಸ್ತೆ ಸುರಕ್ಷ ತೆ, ಸಾರಿಗೆ ನಿಯಮ ಮತ್ತು ಸಾರಿಗೆ ಕಾನೂನು ಪಾಲನೆ ಕುರಿತು ವಾಹನ ಚಾಲಕರು ತಿಳಿದುಕೊಳ್ಳಬೇಕು ಎಂದು ಡಿವೈಎಸ್ಪಿ ಚೌಡಪ್ಪ ಸೂಚಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷ ಣ ಇಲಾಖೆ ಹಾಗೂ ಕರ್ನಾಟಕ ಕಮರ್ಷಿಯಲ್ ವೆಹಿಕಲ್ಸ್ ಆಪರೇಟರ್ಸ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಸುರಕ್ಷ ತೆಯ ವಿಷಯದಲ್ಲಿ ಆಟೊರಿಕ್ಷಾ, ಟೆಂಪೊ, ಬಸ್ಗಳ ವಾಹನ ಚಾಲಕರು ಮತ್ತು ಮಾಲೀಕರಿಗೆ ಅರಿವು ಮೂಡಿಸುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರಕ್ಷತೆ ಮುಖ್ಯ: ಆಟೊಗಳಲ್ಲಿ 3+1 ಮಾತ್ರ ಕರೆದುಕೊಂಡು ಹೋಗಲು ಅವಕಾಶವಿದೆ. ಮಕ್ಕಳ ಸುರಕ್ಷ ತೆ ದೃಷ್ಟಿಯಿಂದ ಕಾನೂನು ಪಾಲಿಸಬೇಕು, ಸರಕು ಸಾಗಣೆ ವಾಹನದಲ್ಲಿ ಜನರ ಸಾಗಣೆ ಕಾನೂನು ಬಾಹಿರ. ಪ್ರಾಣಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಹೀಗಾಗಿ ವಾಹನ ಚಾಲಕರು ಜಾಗರೂಕತೆ ವಹಿಸಬೇಕು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊ ಇನ್ನಿತರೆ ವಾಹನಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗದಿರುವಂತೆ ಸೂಚಿಸಿದರು.
ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಶಾಲಾ ಮಕ್ಕಳನ್ನು ಕರೆದುಕೊಂಡು ವಾಹನ ಚಾಲಕರು ಮಕ್ಕಳ ಸುರಕ್ಷ ತೆ, ಭದ್ರತೆಗೆ ಒತ್ತು ನೀಡಬೇಕು. ಆಟೊ ಚಾಲಕರ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡಬೇಕು.ಪ್ರತಿಯೊಬ್ಬರ ಜೀವೂ ಅಮೂಲ್ಯ. ಚಾಲಕರು ಕರ್ತವ್ಯದಲ್ಲಿ ಸಂಚಾರಿ ನಿಯಮ ಪಾಲಿಸಬೇಕೆಂದು ಹೇಳಿದರು.
ಸಾರಿಗೆ ಅಧಿಕಾರಿ ಎನ್.ಗೋಪಾಲಕೃಷ್ಣ ಮಾತನಾಡಿ, ಸಾರಿಗೆ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿಗಳಾಗುತ್ತಲೇ ಇದ್ದು, ಸುರಕ್ಷ ತೆ ವಿಚಾರದಲ್ಲಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವ ಆಟೊ ಚಾಲಕರಿಗೆ ಮಕ್ಕಳನ್ನು ತುಂಬಿಸಿಕೊಂಡು ಬರದಂತೆ, ಅರ್ಧ ಗಂಟೆ ಮುಂಚೆ ಹೊರಟು ಒಂದು ಟ್ರಿಪ್ ಬದಲು ಎರಡು ಟ್ರಿಪ್ನಲ್ಲಿ ಕರೆದುಕೊಂಡು ಬರುವಂತೆ ಶಾಲಾ ಆಡಳಿತ ಮಂಡಳಿ ತಿಳಿಹೇಳಬೇಕು. ಅನುಮತಿ ನೀಡುವ ಸಂದರ್ಭದಲ್ಲೇ ಶಿಕ್ಷ ಣ ಇಲಾಖೆ ಮಕ್ಕಳ ಸುರಕ್ಷ ತೆಯ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.
ನಿಯಮ ಉಲ್ಲಂಘನೆಗೆ ದಂಡ: ಟ್ರಸ್ಟ್ನ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಮಾತನಾಡಿ, ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊ ಇನ್ನಿತರೆ ಚಾಲಕರ ಮೇಲೆ ದಂಡ ವಿಧಿಸಲಾಗುತ್ತಿದೆ. ಚಾಲಕರಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸಿದರು.
ಸರಕಾರವು ಆಟೊ, ಬಸ್ ಇನ್ನಿತರೆ ಸಾರ್ವಜನಿಕ ಸಂಚಾರದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿರ್ಬಂಧಿಸಿದೆ. ಆದರೆ ಇದರ ಸಾಧಕ ಬಾಧಕಗಳನ್ನು ಚರ್ಚಿಸಿಲ್ಲ. 15 ರ್ವ ಹಳೆಯದಾದ ಗಾಡಿಗಳ ವಿಲೇವಾರಿ ಹೇಗೆ ಎಂಬುದು ಸ್ಪಷ್ಟಪಡಿಸಬೇಕು. ವಾಹನ ಬಳಸಲು ಯೋಗ್ಯವಾಗಿರದಿದ್ದರೆ ಹೊಸ ವಾಹನ ಖರೀದಿಗೆ ಬ್ಯಾಂಕ್ ಇಲ್ಲವೇ ಸಹಕಾರ ಕ್ಷೇತ್ರದಿಂದ ಸಾಲ ಸಭಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಇಫ್ಕೋ ಟೊಕಿಯಾ ವಿಮಾ ಸಂಸ್ಥೆಯ ಪ್ರತಿನಿಧಿ ನಾಗಮಣಿ, ಖಾಸಗಿ ಶಿಕ್ಷ ಣ ಸಂಸ್ಥೆಗಳ ಮುಖ್ಯಸ್ಥ ಸದಾನಂದ, ಶ್ರೀಕೃಷ್ಣ, ಆಟೊ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಅಮ್ಜದ್ ಪಾಷ, ಮಂಜುನಾಥ್, ಶಿಕ್ಷ ಣ ಇಲಾಖೆ ಅಧಿಕಾರಿಗಳಾದ ಆರ್.ಶ್ರೀನಿವಾಸನ್ ಉಪಸ್ಥಿತರಿದ್ದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷ ಣ ಇಲಾಖೆ ಹಾಗೂ ಕರ್ನಾಟಕ ಕಮರ್ಷಿಯಲ್ ವೆಹಿಕಲ್ಸ್ ಆಪರೇಟರ್ಸ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಸುರಕ್ಷ ತೆಯ ವಿಷಯದಲ್ಲಿ ಆಟೊರಿಕ್ಷಾ, ಟೆಂಪೊ, ಬಸ್ಗಳ ವಾಹನ ಚಾಲಕರು ಮತ್ತು ಮಾಲೀಕರಿಗೆ ಅರಿವು ಮೂಡಿಸುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರಕ್ಷತೆ ಮುಖ್ಯ: ಆಟೊಗಳಲ್ಲಿ 3+1 ಮಾತ್ರ ಕರೆದುಕೊಂಡು ಹೋಗಲು ಅವಕಾಶವಿದೆ. ಮಕ್ಕಳ ಸುರಕ್ಷ ತೆ ದೃಷ್ಟಿಯಿಂದ ಕಾನೂನು ಪಾಲಿಸಬೇಕು, ಸರಕು ಸಾಗಣೆ ವಾಹನದಲ್ಲಿ ಜನರ ಸಾಗಣೆ ಕಾನೂನು ಬಾಹಿರ. ಪ್ರಾಣಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಹೀಗಾಗಿ ವಾಹನ ಚಾಲಕರು ಜಾಗರೂಕತೆ ವಹಿಸಬೇಕು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊ ಇನ್ನಿತರೆ ವಾಹನಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗದಿರುವಂತೆ ಸೂಚಿಸಿದರು.
ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಶಾಲಾ ಮಕ್ಕಳನ್ನು ಕರೆದುಕೊಂಡು ವಾಹನ ಚಾಲಕರು ಮಕ್ಕಳ ಸುರಕ್ಷ ತೆ, ಭದ್ರತೆಗೆ ಒತ್ತು ನೀಡಬೇಕು. ಆಟೊ ಚಾಲಕರ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡಬೇಕು.ಪ್ರತಿಯೊಬ್ಬರ ಜೀವೂ ಅಮೂಲ್ಯ. ಚಾಲಕರು ಕರ್ತವ್ಯದಲ್ಲಿ ಸಂಚಾರಿ ನಿಯಮ ಪಾಲಿಸಬೇಕೆಂದು ಹೇಳಿದರು.
ಸಾರಿಗೆ ಅಧಿಕಾರಿ ಎನ್.ಗೋಪಾಲಕೃಷ್ಣ ಮಾತನಾಡಿ, ಸಾರಿಗೆ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿಗಳಾಗುತ್ತಲೇ ಇದ್ದು, ಸುರಕ್ಷ ತೆ ವಿಚಾರದಲ್ಲಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವ ಆಟೊ ಚಾಲಕರಿಗೆ ಮಕ್ಕಳನ್ನು ತುಂಬಿಸಿಕೊಂಡು ಬರದಂತೆ, ಅರ್ಧ ಗಂಟೆ ಮುಂಚೆ ಹೊರಟು ಒಂದು ಟ್ರಿಪ್ ಬದಲು ಎರಡು ಟ್ರಿಪ್ನಲ್ಲಿ ಕರೆದುಕೊಂಡು ಬರುವಂತೆ ಶಾಲಾ ಆಡಳಿತ ಮಂಡಳಿ ತಿಳಿಹೇಳಬೇಕು. ಅನುಮತಿ ನೀಡುವ ಸಂದರ್ಭದಲ್ಲೇ ಶಿಕ್ಷ ಣ ಇಲಾಖೆ ಮಕ್ಕಳ ಸುರಕ್ಷ ತೆಯ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.
ನಿಯಮ ಉಲ್ಲಂಘನೆಗೆ ದಂಡ: ಟ್ರಸ್ಟ್ನ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಮಾತನಾಡಿ, ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊ ಇನ್ನಿತರೆ ಚಾಲಕರ ಮೇಲೆ ದಂಡ ವಿಧಿಸಲಾಗುತ್ತಿದೆ. ಚಾಲಕರಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸಿದರು.
ಸರಕಾರವು ಆಟೊ, ಬಸ್ ಇನ್ನಿತರೆ ಸಾರ್ವಜನಿಕ ಸಂಚಾರದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿರ್ಬಂಧಿಸಿದೆ. ಆದರೆ ಇದರ ಸಾಧಕ ಬಾಧಕಗಳನ್ನು ಚರ್ಚಿಸಿಲ್ಲ. 15 ರ್ವ ಹಳೆಯದಾದ ಗಾಡಿಗಳ ವಿಲೇವಾರಿ ಹೇಗೆ ಎಂಬುದು ಸ್ಪಷ್ಟಪಡಿಸಬೇಕು. ವಾಹನ ಬಳಸಲು ಯೋಗ್ಯವಾಗಿರದಿದ್ದರೆ ಹೊಸ ವಾಹನ ಖರೀದಿಗೆ ಬ್ಯಾಂಕ್ ಇಲ್ಲವೇ ಸಹಕಾರ ಕ್ಷೇತ್ರದಿಂದ ಸಾಲ ಸಭಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಇಫ್ಕೋ ಟೊಕಿಯಾ ವಿಮಾ ಸಂಸ್ಥೆಯ ಪ್ರತಿನಿಧಿ ನಾಗಮಣಿ, ಖಾಸಗಿ ಶಿಕ್ಷ ಣ ಸಂಸ್ಥೆಗಳ ಮುಖ್ಯಸ್ಥ ಸದಾನಂದ, ಶ್ರೀಕೃಷ್ಣ, ಆಟೊ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಅಮ್ಜದ್ ಪಾಷ, ಮಂಜುನಾಥ್, ಶಿಕ್ಷ ಣ ಇಲಾಖೆ ಅಧಿಕಾರಿಗಳಾದ ಆರ್.ಶ್ರೀನಿವಾಸನ್ ಉಪಸ್ಥಿತರಿದ್ದರು.