ಆ್ಯಪ್ನಗರ

ಪರೀಕ್ಷಾ ನೋಡೆಲ್‌ ಅಧಿಕಾರಿ ನಾಗೇಂದ್ರಪ್ರಸಾದ್‌ ವರ್ಗಾವಣೆ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯನ್ನು 4ನೇ ಸ್ಥಾನಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪರೀಕ್ಷಾ ನೋಡೆಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಅವರನ್ನು ಕೆಜಿಎಫ್‌ ಕ್ಷೇತ್ರಶಿಕ್ಷ ಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

Vijaya Karnataka 5 Mar 2019, 10:30 pm
ಕೋಲಾರ : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯನ್ನು 4ನೇ ಸ್ಥಾನಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪರೀಕ್ಷಾ ನೋಡೆಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಅವರನ್ನು ಕೆಜಿಎಫ್‌ ಕ್ಷೇತ್ರಶಿಕ್ಷ ಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
Vijaya Karnataka Web transfer nodal officer nagendra prasad transfer
ಪರೀಕ್ಷಾ ನೋಡೆಲ್‌ ಅಧಿಕಾರಿ ನಾಗೇಂದ್ರಪ್ರಸಾದ್‌ ವರ್ಗಾವಣೆ


ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದ ನಾಗೇಂದ್ರಪ್ರಸಾದ್‌, ಸ್ಪೂರ್ತಿ, ನವ್ಯಸ್ಪೂರ್ತಿ ಮತ್ತಿತರ ವಾರ್ಷಿಕ ಕ್ರಿಯಾಯೋಜನೆ, ಆರು ಸೆಟ್‌ ಪ್ರಶ್ನೆಪತ್ರಿಕೆಗಳ ತಯಾರಿ, ವರ್ಕ್‌ಷೀಟ್‌, ನನ್ನನ್ನೊಮ್ಮೆಗಮನಿಸಿ ಮಾದರಿ ಪ್ರಶ್ನೆಕೋಠಿಯ ತಯಾರಿಯ ಮೂಲಕ ಶೈಕ್ಷ ಣಿಕ ವಲಯದಲ್ಲಿ ಸಂಚಲನ ಮೂಡಿಸಿದ್ದರು.

ಫಲಿತಾಂಶದಲ್ಲಿ ಕೊನೆ ಸ್ಥಾನದ ಅಪವಾದ ದೂರ ಮಾಡಲೇಬೇಕು ಎಂದು ಪಣತೊಟ್ಟು, ಕೆಲಸ ಮಾಡಿದ ಅವರು, ಮಾಡಿದ ಆರುಸೆಟ್‌ ಪ್ರಶ್ನೆಪತ್ರಿಕೆ ಹಾಗೂ ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಬಳಸುವ ಮೂಲಕ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಜಿಲ್ಲೆಯ ಹೋಬಳಿ, ಕ್ಲಸ್ಟರ್‌ ಹಂತದಲ್ಲಿ ಎಲ್ಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸಂವಾದ ನಡೆಸುವ ಮೂಲಕ ಪರೀಕ್ಷಾ ಸಂಬಂಧಿ ಅನುಮಾನಗಳನ್ನು ಪರಿಹರಿಸುವುದರ ಜತೆಗೆ ಆತ್ಮಸ್ಥೈರ್ಯ ತುಂಬುವಲ್ಲಿಯೂ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಈ ಹಿಂದೆ ಅವರನ್ನು ಎರಡು ಬಾರಿ ವರ್ಗಾವಣೆ ಮಾಡಿದ್ದು, ಸ್ವೀಕರ್‌ ರಮೇಶ್‌ಕುಮಾರ್‌ ಅವರು ಶಿಕ್ಷ ಣ ಸಚಿವರ ಮೇಲೆ ಒತ್ತಡ ಹಾಕಿ ಮತ್ತೆ ಅವರನ್ನು ಕೋಲಾರ ಜಿಲ್ಲೆಯಲ್ಲೇ ಪರೀಕ್ಷಾ ನೋಡೆಲ್‌ ಅಧಿಕಾರಿಯಾಗಿ ಮುಂದುವರೆಯುವಂತೆ ಮಾಡಿದ್ದರು.

ಇದೀಗ ಅವರನ್ನು ಕೆಜಿಎಫ್‌ ಕ್ಷೇತ್ರ ಶಿಕ್ಷ ಣಾಧಿಕಾರಿಯಾಗಿ ವರ್ಗಾವಣೆ ಮಾಡಿ, ಒಂದು ತಾಲೂಕಿಗೆ ಸೀಮಿತ ಮಾಡಿರುವುದು ಜಿಲ್ಲೆಯ ಫಲಿತಾಂಶದ ದೃಷ್ಟಿಯಿಂದ ಶೈಕ್ಷ ಣಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇವಲ 15 ದಿನಗಳಿರುವಾಗ ನಾಗೇಂದ್ರಪ್ರಸಾದ್‌ರ ವರ್ಗಾವಣೆ ಜಿಲ್ಲೆಯ ಪರೀಕ್ಷಾ ಸಿದ್ದತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಿಕ್ಷ ಣ ಇಲಾಖೆಯಲ್ಲೇ ಪಾದರಸದ ವ್ಯಕ್ತಿತ್ವ ಹೊಂದಿರುವ ಇವರ ಅನುಪಸ್ಥಿತಿಯಲ್ಲಿ ಶೈಕ್ಷ ಣಿಕ ಕಾರ್ಯಗಳಿಗೆ ಹೊಡೆತ ಬೀಳುವುದಂತೂ ಖಚಿತ ಎಂಬ ಭಾವನೆಯಿದ್ದು, ಸ್ವೀಕರ್‌ ರಮೇಶ್‌ಕುಮಾರ್‌ ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಗಮನಹರಿಸಿ ಅವರನ್ನು ಪರೀಕ್ಷಾ ನೋಡೆಲ್‌ ಅಧಿಕಾರಿಯಾಗಿಗೆ ಮುಂದುವರೆಸಲು ಕ್ರಮವಹಿಸಬೇಕಾಗಿದೆ ಎನ್ನುವುದು ಜಿಲ್ಲೆಯ ಶಿಕ್ಷ ಣ ಕ್ಷೇತ್ರದವರ ಒತ್ತಾಯವೂ ಆಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ