ಕೋಲಾರ: ಅಮೃತ್ಸಿಟಿ ಯೋಜನೆಯಡಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ. ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಹಣ ಕೊಳ್ಳೆ ಹೊಡೆಯುತ್ತಿದ್ದಾನೆ. ಈತನನ್ನು ಕಪ್ಪುಪಟ್ಟಿಗೆ ಸೇರಿಸಿ, ಮರು ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಯನ್ನು ಬೇರೆಯವರಿಗೆ ನೀಡಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.
ಕ್ರಿಯಾ ಯೋಜನೆಯಲ್ಲೇ ಲೋಪ: ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಸಾದ್ಬಾಬು ಅಧ್ಯಕ್ಷ ತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಮೃತಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಸದ್ದು ಮಾಡಿತು. ಅಮೃತ್ಸಿಟಿ ಯೋಜನೆಗೆ ರಾಜ್ಯದೆಲ್ಲೆಡೆ ಒಂದು ರೀತಿಯ ಕ್ರಿಯಾಯೋಜನೆ ಇದ್ದರೆ ಕೋಲಾರಕ್ಕೆ ಒಂದು ರೀತಿಯ ಕ್ರಿಯಾಯೋಜನೆಯಿದೆ. ಗುಜರಾತ್ನಿಂದ ಬಂದು ಹಣ ಮಾಡಿಕೊಂಡು ಹೋಗಲು ಯತ್ನಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡು, ಮರು ಕ್ರಿಯಾಯೋಜನೆ ತಯಾರಿಸಬೇಕು. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗೆ ತರಾಟೆ:
ಕಾಮಗಾರಿಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ, ತಾಂತ್ರಿಕವಾಗಿ ನಮಗೇನೂ ಗೊತ್ತಿಲ್ಲ ಎಂದು ದಿಕ್ಕು ತಪ್ಪಿಸಬೇಡಿ ಎಂಬ ಸದಸ್ಯರ ಮಾತಿಗೆ, ಐಎಸ್ಐ ಇರುವ ಸಿಮೆಂಟ್ನ್ನೇ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳಲು ಅಧಿಕಾರಿ ಪ್ರಯತ್ನಿಸಿದರು. ಈ ಮಾತಿನಿಂದ ಸಿಡಿದೆದ್ದ ಸದಸ್ಯ ಮುರಳಿಗೌಡ, ಚೀನಾ ಮೊಬೈಲ್ಗೂ ಐಎಸ್ಐ ಮಾರ್ಕ್ ಇರುತ್ತದೆ. ಆದರೂ ನೀವೇಕೆ ಐಪೋನ್ ಬಳಸುತ್ತಿದ್ದೀರಿ ಎಂದು ತಿರುಗೇಟು ನೀಡಿದರು. ಸದಸ್ಯರ ಮಾತಿಗೆ ಧ್ವನಿಗೂಡಿದ ಪೌರಾಯುಕ್ತ ಸತ್ಯನಾರಾಯಣ, ಕಾಮಗಾರಿ ನಿಲ್ಲಿಸುವ ಭರವಸೆ ನೀಡಿದರು.
ನ್ಯಾಯಾಲಯಕ್ಕೆ ಹೋಗುತ್ತೀವಿ:
ಸದಸ್ಯ ಸಾಧಿಕ್ಪಾಷ ಮಾತನಾಡಿ, ವಾರ್ಡ್ಗಳ ಪುನರ್ರಚನೆಯಲ್ಲಿ ಸರಿಯಾದ ಮಾಹಿತಿ ಪಡೆಯದೆಯೇ ಡಿಸಿ, ಎಸಿ, ತಹಸೀಲ್ದಾರ್ 35 ವಾರ್ಡ್ಗಳನ್ನು ಹಾಳು ಮಾಡಲು ಮುಂದಾಗಿದ್ದಾರೆ. ತಿದ್ದುಪಡಿ ಮಾಡಿ ಪುನಃ ಮುಂದುವರೆಸುವಂತೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕಿದ್ದು, ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಆಯುಕ್ತರಿಗೆ ಎಚ್ಚರಿಸಿದರು.
ಸದಸ್ಯರಿಗೆ ಬೆದರಿಕೆ; ಕ್ರಮಕ್ಕೆ ಪಟ್ಟು;
ಸಕ್ಕಿಂಗ್ ವಾಹನದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕುಡಿದು ಗಾಡಿಯನ್ನು ನಿಲ್ಲಿಸಿರುತ್ತಾರೆ. ಕೇಳಿದರೆ ಸದಸ್ಯರಿಗೇ ಗೌರವ ನೀಡದೆ ಬೆದರಿಕೆ ಹಾಕುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಾಯಿ ಸಮಿತಿ ಅಧ್ಯಕ್ಷ ರು, ಆಯುಕ್ತರು ಏನು ಮಾಡುತ್ತಿದ್ದೀರಿ ಎಂದು ಸದಸ್ಯರು ಕಿಡಿಕಾರಿದರು. ಇದಕ್ಕೆ ಆಯುಕ್ತರು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಡೀಸೆಲ್ ಮಾಫಿಯಾದಿಂದ ಅಭಿವೃದ್ಧಿ ಕುಂಠಿತ:
ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆಯ ವಾಹನಗಳಲ್ಲಿ ಡೀಸೆಲ್ ಮಾಫಿಯಾ ಮಿತಿಮೀರಿದೆ. ಅಧಿಕಾರಿಗಳು, ಬಂಕ್ನವರು ಶಾಮೀಲಾಗಿರುವ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿದರೂ ಈವರೆಗೆ ಕ್ರಮಕೈಗೊಂಡಿಲ್ಲ. ಟ್ರಿಪ್ಗಳು ಹೋಗದೆಯೇ ತಪ್ಪು ಲೆಕ್ಕಗಳನ್ನು ನೀಡಲಾಗುತ್ತಿದೆ. ಕಸವನ್ನು ಅರಾಭಿಕೊತ್ತನೂರು ಬಳಿಗೆ ಹಾಕಬೇಕಿದ್ದರೂ, ಡೀಸೆಲ್ ಉಳಿಸುವ ಸಲುವಾಗಿ ನಗರ ಸಮೀಪದ ಕೆರೆಯಲ್ಲಿ ಸುರಿಯಲಾಗುತ್ತಿದೆ. ಯುಜಿಡಿ ವಾಹನದವರು ಹಣ ಬರುವ ಕಡೆಗೆ ಹೋಗುತ್ತಿದ್ದು, ಅಧ್ಯಕ್ಷ ರು ಆಯುಕ್ತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ಪಂಪು ಮೋಟರ್, ಕೇಬಲ್ನಲ್ಲೂ ಅಕ್ರಮ:
ಸದಸ್ಯ ಸೋಮಶೇಖರ್ ಮಾತನಾಡಿ, ಬೋರ್ವೆಲ್ಗಳಿಗೆ ಅಳವಡಿಸಲಾಗಿರುವ ಮೋಟಾರ್ ಪಂಪ್ಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಇದಕ್ಕಾಗಿ ಮೀಸಲಿಟ್ಟ 30 ಕೋಟಿರೂ.ಗಳಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲಿಸಲು ಆಗ್ರಹ:
ನಗರಸಭೆ ಕಚೇರಿಯಲ್ಲಿ ಇತ್ತೀಚೆಗೆ ಸಿಬ್ಬಂದಿ ಮೇಲೆ ವಿನಾಕಾರಣ ಹಲ್ಲೆಗಳಾಗುತ್ತಿದ್ದು, ಅಂತಹವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಸಂಬಂಧ ನಿರ್ಣಯ ಕೈಗೊಳ್ಳಬೇಕು. ಎಸ್ಪಿಯವರಿಗೂ ಮನವಿ ಸಲ್ಲಿಸಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಪಡಿಸಿದರು. ಹಲ್ಲೆಗಳ ಹಿಂದೆ ಒಳಗಿನವರ ಕೈವಾಡವಿದೆ ಎಂಬ ಆರೋಪವೂ ಕೇಳಿಬಂತು. ಸಿಸಿ ಕ್ಯಾಮೆರಾ ದುರಸ್ತಿಪಡಿಸಿ, ರಕ್ಷಣೆ ಒದಗಿಸಲು ಎಸ್ಪಿಗೆ ಮನವಿ ಸಲ್ಲಿಸುವುದಾಗಿ ಆಯುಕ್ತ ಟಿ.ಆರ್.ಸತ್ಯನಾರಾಯಣ ಭರವಸೆ ನೀಡಿದರು.
ಗೊಂದಲದ ಗೂಡು
ಬೆಳಗ್ಗೆ 11 ಗಂಟೆಗೆ ಆರಂಭಗೊಡ ಸಾಮಾನ್ಯ ಸಭೆಯು ಆರಂಭದಿಂದಲೂ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಅಜೆಂಡಾದಲ್ಲಿನ ವಿಚಾರಗಳನ್ನು ಮಂಡಿಸುವ ವೇಳೆಗೆ ಸಮಯ 1.15 ಅಗಿತ್ತು.
ನಗರಸಭೆ ಚುನಾವಣೆಯು ಸಮೀಪಿಸಿದ್ದರೂ ಸಹ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡದ ಸಭೆಯು, ಸಮಸ್ಯೆ, ಆರೋಪಗಳ ಸುರಿಮಳೆಯಲ್ಲಿಯೇ ನಡೆಯಿತು.
ಕ್ರಿಯಾ ಯೋಜನೆಯಲ್ಲೇ ಲೋಪ: ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಸಾದ್ಬಾಬು ಅಧ್ಯಕ್ಷ ತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಮೃತಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಸದ್ದು ಮಾಡಿತು. ಅಮೃತ್ಸಿಟಿ ಯೋಜನೆಗೆ ರಾಜ್ಯದೆಲ್ಲೆಡೆ ಒಂದು ರೀತಿಯ ಕ್ರಿಯಾಯೋಜನೆ ಇದ್ದರೆ ಕೋಲಾರಕ್ಕೆ ಒಂದು ರೀತಿಯ ಕ್ರಿಯಾಯೋಜನೆಯಿದೆ. ಗುಜರಾತ್ನಿಂದ ಬಂದು ಹಣ ಮಾಡಿಕೊಂಡು ಹೋಗಲು ಯತ್ನಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡು, ಮರು ಕ್ರಿಯಾಯೋಜನೆ ತಯಾರಿಸಬೇಕು. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗೆ ತರಾಟೆ:
ಕಾಮಗಾರಿಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ, ತಾಂತ್ರಿಕವಾಗಿ ನಮಗೇನೂ ಗೊತ್ತಿಲ್ಲ ಎಂದು ದಿಕ್ಕು ತಪ್ಪಿಸಬೇಡಿ ಎಂಬ ಸದಸ್ಯರ ಮಾತಿಗೆ, ಐಎಸ್ಐ ಇರುವ ಸಿಮೆಂಟ್ನ್ನೇ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳಲು ಅಧಿಕಾರಿ ಪ್ರಯತ್ನಿಸಿದರು. ಈ ಮಾತಿನಿಂದ ಸಿಡಿದೆದ್ದ ಸದಸ್ಯ ಮುರಳಿಗೌಡ, ಚೀನಾ ಮೊಬೈಲ್ಗೂ ಐಎಸ್ಐ ಮಾರ್ಕ್ ಇರುತ್ತದೆ. ಆದರೂ ನೀವೇಕೆ ಐಪೋನ್ ಬಳಸುತ್ತಿದ್ದೀರಿ ಎಂದು ತಿರುಗೇಟು ನೀಡಿದರು. ಸದಸ್ಯರ ಮಾತಿಗೆ ಧ್ವನಿಗೂಡಿದ ಪೌರಾಯುಕ್ತ ಸತ್ಯನಾರಾಯಣ, ಕಾಮಗಾರಿ ನಿಲ್ಲಿಸುವ ಭರವಸೆ ನೀಡಿದರು.
ನ್ಯಾಯಾಲಯಕ್ಕೆ ಹೋಗುತ್ತೀವಿ:
ಸದಸ್ಯ ಸಾಧಿಕ್ಪಾಷ ಮಾತನಾಡಿ, ವಾರ್ಡ್ಗಳ ಪುನರ್ರಚನೆಯಲ್ಲಿ ಸರಿಯಾದ ಮಾಹಿತಿ ಪಡೆಯದೆಯೇ ಡಿಸಿ, ಎಸಿ, ತಹಸೀಲ್ದಾರ್ 35 ವಾರ್ಡ್ಗಳನ್ನು ಹಾಳು ಮಾಡಲು ಮುಂದಾಗಿದ್ದಾರೆ. ತಿದ್ದುಪಡಿ ಮಾಡಿ ಪುನಃ ಮುಂದುವರೆಸುವಂತೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕಿದ್ದು, ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಆಯುಕ್ತರಿಗೆ ಎಚ್ಚರಿಸಿದರು.
ಸದಸ್ಯರಿಗೆ ಬೆದರಿಕೆ; ಕ್ರಮಕ್ಕೆ ಪಟ್ಟು;
ಸಕ್ಕಿಂಗ್ ವಾಹನದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕುಡಿದು ಗಾಡಿಯನ್ನು ನಿಲ್ಲಿಸಿರುತ್ತಾರೆ. ಕೇಳಿದರೆ ಸದಸ್ಯರಿಗೇ ಗೌರವ ನೀಡದೆ ಬೆದರಿಕೆ ಹಾಕುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಾಯಿ ಸಮಿತಿ ಅಧ್ಯಕ್ಷ ರು, ಆಯುಕ್ತರು ಏನು ಮಾಡುತ್ತಿದ್ದೀರಿ ಎಂದು ಸದಸ್ಯರು ಕಿಡಿಕಾರಿದರು. ಇದಕ್ಕೆ ಆಯುಕ್ತರು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಡೀಸೆಲ್ ಮಾಫಿಯಾದಿಂದ ಅಭಿವೃದ್ಧಿ ಕುಂಠಿತ:
ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆಯ ವಾಹನಗಳಲ್ಲಿ ಡೀಸೆಲ್ ಮಾಫಿಯಾ ಮಿತಿಮೀರಿದೆ. ಅಧಿಕಾರಿಗಳು, ಬಂಕ್ನವರು ಶಾಮೀಲಾಗಿರುವ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿದರೂ ಈವರೆಗೆ ಕ್ರಮಕೈಗೊಂಡಿಲ್ಲ. ಟ್ರಿಪ್ಗಳು ಹೋಗದೆಯೇ ತಪ್ಪು ಲೆಕ್ಕಗಳನ್ನು ನೀಡಲಾಗುತ್ತಿದೆ. ಕಸವನ್ನು ಅರಾಭಿಕೊತ್ತನೂರು ಬಳಿಗೆ ಹಾಕಬೇಕಿದ್ದರೂ, ಡೀಸೆಲ್ ಉಳಿಸುವ ಸಲುವಾಗಿ ನಗರ ಸಮೀಪದ ಕೆರೆಯಲ್ಲಿ ಸುರಿಯಲಾಗುತ್ತಿದೆ. ಯುಜಿಡಿ ವಾಹನದವರು ಹಣ ಬರುವ ಕಡೆಗೆ ಹೋಗುತ್ತಿದ್ದು, ಅಧ್ಯಕ್ಷ ರು ಆಯುಕ್ತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ಪಂಪು ಮೋಟರ್, ಕೇಬಲ್ನಲ್ಲೂ ಅಕ್ರಮ:
ಸದಸ್ಯ ಸೋಮಶೇಖರ್ ಮಾತನಾಡಿ, ಬೋರ್ವೆಲ್ಗಳಿಗೆ ಅಳವಡಿಸಲಾಗಿರುವ ಮೋಟಾರ್ ಪಂಪ್ಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಇದಕ್ಕಾಗಿ ಮೀಸಲಿಟ್ಟ 30 ಕೋಟಿರೂ.ಗಳಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲಿಸಲು ಆಗ್ರಹ:
ನಗರಸಭೆ ಕಚೇರಿಯಲ್ಲಿ ಇತ್ತೀಚೆಗೆ ಸಿಬ್ಬಂದಿ ಮೇಲೆ ವಿನಾಕಾರಣ ಹಲ್ಲೆಗಳಾಗುತ್ತಿದ್ದು, ಅಂತಹವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಸಂಬಂಧ ನಿರ್ಣಯ ಕೈಗೊಳ್ಳಬೇಕು. ಎಸ್ಪಿಯವರಿಗೂ ಮನವಿ ಸಲ್ಲಿಸಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಪಡಿಸಿದರು. ಹಲ್ಲೆಗಳ ಹಿಂದೆ ಒಳಗಿನವರ ಕೈವಾಡವಿದೆ ಎಂಬ ಆರೋಪವೂ ಕೇಳಿಬಂತು. ಸಿಸಿ ಕ್ಯಾಮೆರಾ ದುರಸ್ತಿಪಡಿಸಿ, ರಕ್ಷಣೆ ಒದಗಿಸಲು ಎಸ್ಪಿಗೆ ಮನವಿ ಸಲ್ಲಿಸುವುದಾಗಿ ಆಯುಕ್ತ ಟಿ.ಆರ್.ಸತ್ಯನಾರಾಯಣ ಭರವಸೆ ನೀಡಿದರು.
ಗೊಂದಲದ ಗೂಡು
ಬೆಳಗ್ಗೆ 11 ಗಂಟೆಗೆ ಆರಂಭಗೊಡ ಸಾಮಾನ್ಯ ಸಭೆಯು ಆರಂಭದಿಂದಲೂ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಅಜೆಂಡಾದಲ್ಲಿನ ವಿಚಾರಗಳನ್ನು ಮಂಡಿಸುವ ವೇಳೆಗೆ ಸಮಯ 1.15 ಅಗಿತ್ತು.
ನಗರಸಭೆ ಚುನಾವಣೆಯು ಸಮೀಪಿಸಿದ್ದರೂ ಸಹ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡದ ಸಭೆಯು, ಸಮಸ್ಯೆ, ಆರೋಪಗಳ ಸುರಿಮಳೆಯಲ್ಲಿಯೇ ನಡೆಯಿತು.