ಆ್ಯಪ್ನಗರ

ಎಂಟಿಬಿ ನಾಗರಾಜ್‌ಗೆ ನಾವೇನು ಅನ್ಯಾಯ ಮಾಡಿದ್ದೇವೆ?: ಕೃಷ್ಣಬೈರೇಗೌಡ

ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದಿದ್ದ ಎಂಬಿಟಿ ನಾಗರಾಜ್‌ ಅವರಿಗೆ ಮೋಸ ಮಾಡಿ ಹೋಗಿದ್ದೇಕೆ? ಹೋಗುವ ಮೊದಲು ಮತ ಹಾಕಿದ ಹೊಸಕೋಟೆ ಜನತೆಯ ಅನುಮತಿ ಪಡೆದಕೊಂಡಿದ್ದರೆ? ಎಂದು ಪ್ರಶ್ನಿಸಿದ ಕೃಷ್ಣಬೈರೇಗೌಡ.

Vijaya Karnataka Web 21 Sep 2019, 4:32 pm
ಹೊಸಕೋಟೆ: ಎಂಟಿಬಿ ನಾಗರಾಜ್ ಅವರನ್ನು ಮಂತ್ರಿ ಮಾಡಿದ್ದು ಕಾಂಗ್ರೆಸ್‌. ನಾವು ಏನು ಅನ್ಯಾಯ ಮಾಡಿದ್ದೀವಿ? ಎಂಟಿಬಿ ಬೆಳೆಯಬೇಕಾದ್ರೆ ಬೆನ್ನೆಲುಬಾಗಿ ನಿಂತಿದ್ದು ಸಿದ್ದರಾಮಯ್ಯ. ಅವರಿಗೆ ಮೋಸ ಮಾಡಿ ಹೋಗಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
Vijaya Karnataka Web krishna bhyregowda


ಹೊಸಕೋಟೆಯಲ್ಲಿ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ಎಂಟಿಬಿ ನಾಗರಾಜ್‌ ತನ್ನ ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದಿದ್ದರು. ಹಾಗಿದ್ದರೆ ನಂಬಿದವರಿಗೆ ದ್ರೋಹ ಮಾಡಿ ಹೋಗಿದ್ದು ಯಾಕೆ? ನಮ್ಮನ್ನ ಕೇಳದೆ, ಸಿದ್ದರಾಮಯ್ಯ ಅವರ ಮನೆಗೆ ಬಂದು ಅಲ್ಲೇ ಇದ್ದು ಮಾರನೇ ದಿನ ಅಲ್ಲಿಂದ ಎಸ್ಕೇಪ್ ಆಗ್ಬಿಟ್ರು.
ಇನ್ಯಾರೋ ಒಬ್ಬ ಶಾಸಕರ ಮಾತು ಕೇಳಿ ಹೋಗಿಬಿಟ್ರು. ಮತ ಹಾಕಿದವರಿಗೆ ಮೋಸ ಮಾಡಿ ಹೋದರು. ಹೋಗುವಾಗ ಮತದಾರರ ಅನುಮತಿ ಪಡೆದುಕೊಂಡು ಹೋದರೆ? ಎಂದು ಮತದಾರರಿಗೆ ಬೈರೇಗೌಡ ಪ್ರಶ್ನೆ ಮಾಡಿದರು.

ಎಂಟಿಬಿ ನಮಕ್ ಹರಾಮ್: ಮಾಜಿ ಸ್ಪೀಕರ್ ರಮೇಶ್ ಕುಮಾರ್‌

ಇಲ್ಲಿನ ಶಾಸಕರು ಸ್ವಾಭಿಮಾನ ಮಾರಿಕೊಂಡಿದ್ದಾರೆ. ಆದರೆ ಹೊಸಕೋಟೆ ಜನ ಸ್ವಾಭಿಮಾನ ಉಳಿಸಿಕೊಂಡಿದ್ದಾರೆ. ಕಾಕತಾಳಿಯ ಎಂಬಂತೆ ಇವತ್ತೆ ಉಪ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ನಿಂದ ಕಹಳೆ ಊದೋದರ ಮೂಲಕ ಅನೈತಿಕ ರಾಜಕಾರಣ ಸೋಲಿಸೋ ಪಾಂಚಜನ್ಯ ಮೊಳಗಿಸಿದ್ದಾರೆ ಎಂದರು.

ಸ್ವಾಭಿಮಾನ ಸಮಾವೇಶಕ್ಕೆ ಕುರ್ಚಿ ಕೊರತೆ ಎದುರಾಗಿದ್ದರಿಂದ ಆಗಮಿಸಿದ್ದ ಕಾರ್ಯಕರ್ತು ನಿಂತುಕೊಂಡೆ ವೀಕ್ಷಿಸಿದರು.

ಸಿದ್ದರಾಮಯ್ಯರನ್ನು ಹೃದಯದಿಂದ ಕಿತ್ತೆಸೆದಿದ್ದಾರಂತೆ ಎಂಟಿಬಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ