ಆ್ಯಪ್ನಗರ

ಸಂಪ್‌ನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಯ್ತು ಯುವತಿ ಮೃತದೇಹ! ಸಮಾಧಿಯಿಂದ ಹೊರತೆಗೆದು ಪೋಸ್ಟ್‌ ಮಾರ್ಟಂ

ಸಂಪ್‌ನ ಬಾಗಿಲು ತೆಗೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಗಾಬರಿಯಲ್ಲಿ ತಮ್ಮ ಸಂಬಂಧಿಕರು, ಗ್ರಾಮಸ್ಥರಿಗೆ ಮಾತ್ರ ವಿಷಯ ಮುಟ್ಟಿಸಿ ಮನೆಯ ಸಮೀಪದ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.

Vijaya Karnataka Web 21 Jan 2020, 4:24 pm
ಕೋಲಾರ: ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ಕಳೆದ ಶನಿವಾರ ಯುವತಿಯೋರ್ವಳು ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಸಾವಿನ ವಿಚಾರವಾಗಿ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್‌ ಸಮ್ಮುಖದಲ್ಲಿ ಶವ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
Vijaya Karnataka Web kolar murder
ಸಂಪ್‌ನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಯ್ತು ಯುವತಿ ಮೃತದೇಹ! ಸಮಾಧಿಯಿಂದ ಹೊರತೆಗೆದು ಪೋಸ್ಟ್‌ ಮಾರ್ಟಂ


ಗದ್ದೆಕಣ್ಣೂರು ಗ್ರಾಮದ ದೇವರಾಜ್‌ ಎಂಬುವರ ಪುತ್ರಿ ಲಕ್ಷ್ಮಿ (17) ಶನಿವಾರ ಮೃತಪಟ್ಟಿದ್ದು, ಪೋಷಕರು ಆಕೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಶವ ಹೊರಕ್ಕೆ ತೆಗೆದು ತಹಶೀಲ್ದಾರ್‌ ಶೋಭಿತಾ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸಂಪ್‌ನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಯ್ತು ಯುವತಿ ಮೃತದೇಹ! ಸಮಾಧಿಯಿಂದ ಹೊರತೆಗೆದು ಪೋಸ್ಟ್‌ ಮಾರ್ಟಂ


ಪ್ರಕರಣದ ವಿವರ: ಗದ್ದೆಕಣ್ಣೂರು ಗ್ರಾಮದ ದೇವರಾಜ್‌ ಎಂಬುವರ ಪುತ್ರಿ ಲಕ್ಷ್ಮಿ ತಾಲೂಕಿನ ಕೆಂಬೋಡಿಯ ಜನತಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಶನಿವಾರದಂದು ಎಂದಿನಂತೆ ಕಾಲೇಜಿಗೆ ಹೋಗಿ ಮನೆಗೆ ವಾಪಸಾಗಿದ್ದಾಳೆ. ಮನೆಯಲ್ಲಿಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು, ತೋಟಕ್ಕೆ ಬರುವಂತೆ ತಂದೆ ಹೇಳಿದಾಗ ಮನೆಯಲ್ಲಿಯೇ ಇರುವುದಾಗಿ ಲಕ್ಷ್ಮಿ ತಿಳಿಸಿದ್ದಳು. ಬಳಿಕ ತಂದೆ ದೇವರಾಜ್‌ ತೋಟಕ್ಕೆ ತೆರಳಿ ಸಂಜೆ ಬಂದಾಗ ಮಗಳು ಮನೆಯಲ್ಲಿಇರಲಿಲ್ಲ. ಕೆಲ ಹೊತ್ತಿನಲ್ಲೇ ಸಂಪ್‌ಗೆ ನೀರು ಬಂದಿದ್ದು, ಸಂಪ್‌ನ ಬಾಗಿಲು ತೆಗೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಗಾಬರಿಯಲ್ಲಿ ತಮ್ಮ ಸಂಬಂಧಿಕರು, ಗ್ರಾಮಸ್ಥರಿಗೆ ಮಾತ್ರ ವಿಷಯ ಮುಟ್ಟಿಸಿ ಮನೆಯ ಸಮೀಪದ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.

ಸ್ನೇಹಿತನನ್ನು ಕಾರಿನಲ್ಲಿ ಕರೆದೊಯ್ದು ಕೊಂದ ಆರೋಪಿಗಳ ಕಾಲಿಗೆ ಖಾಕಿ ಗುಂಡು..!

ಪೋನ್‌ ಕರೆಯಿಂದ ಅನುಮಾನ: ಸೋಮವಾರದಂದು ಕೋಲಾರದ ಸ್ಲಂ ಬಡಾವಣೆಯ ವಾಸಿ ಅಭಿ ಹೆಸರಿನಲ್ಲಿ ಯುವತಿಯ ತಂದೆ ದೇವರಾಜ್‌ಗೆ ಪೋನ್‌ಕಾಲ್‌ ಬಂದಿದ್ದು, ತಾನು ನಿಮ್ಮ ಮಗಳನ್ನು ಇಷ್ಟಪಡುತ್ತಿದ್ದೇನೆ. ನಿಮ್ಮ ಮಗಳು ಯಾಕೆ ಮೃತಪಟ್ಟಿದ್ದಾಳೆ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು, ತಾವು ಶನಿವಾರದಂದು ಮನೆಯಲ್ಲಿ ಇಲ್ಲದ ವೇಳೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಸಂಪ್‌ಗೆ ಹಾಕಿ ಬಾಗಿಲು ಮುಚ್ಚಿ ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಕೂಡಲೇ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ ಮಂಗಳವಾರ ಬೆಳಗ್ಗೆ ತಹಶೀಲ್ದಾರ್‌, ಪೊಲೀಸರು ಆಗಮಿಸಿ ಶವ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಬಾಯ್‌ಫ್ರೆಂಡ್ ಜೊತೆ ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿ ಮೇಲೆ ಗ್ಯಾಂಗ್‌ ರೇಪ್

ಮೃತ ಯುವತಿ ತಂದೆ ದೇವರಾಜ್‌ ನೀಡಿರುವ ದೂರಿನ ಮೇರೆಗೆ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೋಲಾರ ತಹಶೀಲ್ದಾರ್ ಶೋಭಿತಾ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಿತಾ ತಂದೆ ದೇವರಾಜ್, ಸಂಪ್‌ಗೆ ಆಕೆಯೇ ಬಿದ್ದಿದ್ದರೆ ಬಾಗಿಲು ಮುಚ್ಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಭಿ ಎನ್ನುವವನು ಸೋಮವಾರ ಕಾಲ್‌ ಮಾಡಿದ್ದು, ನಾವು ಮನೆಯಲ್ಲಿಇಲ್ಲದ ಸಮಯದಲ್ಲಿ ಏನೋ ಘಟನೆ ನಡೆದಿದೆ ಎನ್ನುವ ಅನುಮಾನ ನಮಗೆ ಆಗಲೆ ಬಂದಿತು. ಅದಕ್ಕಾಗಿ ದೂರು ನೀಡಿದ್ದೇವೆ. ನನ್ನ ಮಗಳ ಸಾವಿಗೆ ನ್ಯಾಯ ದೊರೆಕಿಸಿಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.

ಶೆಲ್ಟರ್‌ ಹೋಂ ಹೆಸರಲ್ಲಿ ಬಾಲಕಿಯರ ಗ್ಯಾಂಗ್ ರೇಪ್: ಬಿಹಾರದ 19 ಕಿರಾತಕರ ಮೇಲಿನ ಆರೋಪ ಸಾಬೀತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ